Don't Miss!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Lifestyle ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಡನ್ ನಲ್ಲಿ ಕನ್ನಡ ನಟ ಸತೀಶ್ ನೀನಾಸಂಗೆ ಏನು ಕೆಲಸ.?
'ಅಯೋಗ್ಯ' ಮತ್ತು 'ಚಂಬಲ್' ಯಶಸ್ವಿ ಪ್ರದರ್ಶನ ಕಂಡ ಮೇಲೆ ನಟ ಸತೀಶ್ ನೀನಾಸಂ ಕೈಯಲ್ಲಿ ಸಾಲು ಸಾಲು ಪ್ರಾಜೆಕ್ಟ್ ಗಳಿವೆ. 'ಬ್ರಹ್ಮಾಚಾರಿ', 'ಗೋಧ್ರಾ', 'ಪರಿಮಳ ಲಾಡ್ಜ್' ಚಿತ್ರಗಳ ಶೂಟಿಂಗ್ ನಲ್ಲಿ ಸತೀಶ್ ನೀನಾಸಂ ಬಿಜಿಯಾಗಿದ್ದಾರೆ.
ಈ ಎಲ್ಲದರ ನಡುವೆ ಸತೀಶ್ ನೀನಾಸಂ ಲಂಡನ್ ಗೆ ಹಾರಿದ್ದಾರೆ. ಸತೀಶ್ ನೀನಾಸಂ ಏಕ್ದಂ ಲಂಡನ್ ಗೆ ಫ್ಲೈಟ್ ಹತ್ತಿದ್ಯಾಕೆ ಅಂದ್ರೆ ಹೊಸ ಸಿನಿಮಾದ ಶೂಟಿಂಗ್ ಗೆ.! ಹೌದು, 'ವೈತರಣಿ' ಎಂಬ ಹೊಸ ಚಿತ್ರಕ್ಕೆ ಸತೀಶ್ ನೀನಾಸಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ಸಾಗುತ್ತಿದೆ.
ಅಂದ್ಹಾಗೆ, 'ವೈತರಣಿ' ಚಿತ್ರವನ್ನು ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿಸಿ, ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತೀಶ್ ನೀನಾಸಂ ಹೀರೋ. 'ವೈತರಣಿ' ಮೂಲಕ ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿದ್ದಾರೆ.
'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್
ಈ ಹಿಂದೆ 'ಕಹಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಶಾಸ್ತ್ರಿ ಇದೀಗ 'ವೈತರಣಿ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ 'ಅಳಿದು ಉಳಿದವರು' ಚಿತ್ರದಲ್ಲೂ ಅರವಿಂದ್ ಶಾಸ್ತ್ರಿ ಬಿಜಿಯಿದ್ದಾರೆ.