Don't Miss!
- News Mysore Candidate : ಮೈಸೂರಿನಲ್ಲಿ ಬಿಜೆಪಿಯಿಂದ ರಾಜವಂಶಸ್ಥ- ಕಾಂಗ್ರೆಸ್ ಲೆಕ್ಕಾಚಾರವೇನು?
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Automobiles ಕಾಶ್ಮೀರ ಟು ಕನ್ಯಾಕುಮಾರಿ ಟ್ರಿಪ್ ಮುಗಿಸಿದ ಎಲೆಕ್ಟ್ರಿಕ್ ಸ್ಕೂಟರ್: ಗೇಮ್ ಚೇಂಜರ್ ಸದ್ಯದಲ್ಲೇ ಅಖಾಡಕ್
- Technology iPhone: ಐಫೋನ್ 16 ನಲ್ಲಿ ಆಪಲ್ನಿಂದ ನಿರೀಕ್ಷಿಸಬಹುದಾದ ದೊಡ್ಡ ನವೀಕರಣಗಳಿವು!ಇಷ್ಟ ಆಗದೇ ಇರದು
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಂಡನ್ ನಲ್ಲಿ ಕನ್ನಡ ನಟ ಸತೀಶ್ ನೀನಾಸಂಗೆ ಏನು ಕೆಲಸ.?
'ಅಯೋಗ್ಯ' ಮತ್ತು 'ಚಂಬಲ್' ಯಶಸ್ವಿ ಪ್ರದರ್ಶನ ಕಂಡ ಮೇಲೆ ನಟ ಸತೀಶ್ ನೀನಾಸಂ ಕೈಯಲ್ಲಿ ಸಾಲು ಸಾಲು ಪ್ರಾಜೆಕ್ಟ್ ಗಳಿವೆ. 'ಬ್ರಹ್ಮಾಚಾರಿ', 'ಗೋಧ್ರಾ', 'ಪರಿಮಳ ಲಾಡ್ಜ್' ಚಿತ್ರಗಳ ಶೂಟಿಂಗ್ ನಲ್ಲಿ ಸತೀಶ್ ನೀನಾಸಂ ಬಿಜಿಯಾಗಿದ್ದಾರೆ.
ಈ ಎಲ್ಲದರ ನಡುವೆ ಸತೀಶ್ ನೀನಾಸಂ ಲಂಡನ್ ಗೆ ಹಾರಿದ್ದಾರೆ. ಸತೀಶ್ ನೀನಾಸಂ ಏಕ್ದಂ ಲಂಡನ್ ಗೆ ಫ್ಲೈಟ್ ಹತ್ತಿದ್ಯಾಕೆ ಅಂದ್ರೆ ಹೊಸ ಸಿನಿಮಾದ ಶೂಟಿಂಗ್ ಗೆ.! ಹೌದು, 'ವೈತರಣಿ' ಎಂಬ ಹೊಸ ಚಿತ್ರಕ್ಕೆ ಸತೀಶ್ ನೀನಾಸಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದ ಶೂಟಿಂಗ್ ಲಂಡನ್ ನಲ್ಲಿ ಸಾಗುತ್ತಿದೆ.
ಅಂದ್ಹಾಗೆ, 'ವೈತರಣಿ' ಚಿತ್ರವನ್ನು ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಣ ಮಾಡುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಟಿಸಿ, ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸತೀಶ್ ನೀನಾಸಂ ಹೀರೋ. 'ವೈತರಣಿ' ಮೂಲಕ ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ ಮತ್ತು ಶರ್ಮಿಳಾ ಮಾಂಡ್ರೆ ಜೊತೆಯಾಗಿದ್ದಾರೆ.
'ಪರಿಮಳ ಲಾಡ್ಜ್' ಕಡೆಯಿಂದ ಡಿ ಬಾಸ್ ಗೆ ಅಪ್ಪನ ಫೊಟೋ ಗಿಫ್ಟ್
ಈ ಹಿಂದೆ 'ಕಹಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಶಾಸ್ತ್ರಿ ಇದೀಗ 'ವೈತರಣಿ' ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅತ್ತ 'ಅಳಿದು ಉಳಿದವರು' ಚಿತ್ರದಲ್ಲೂ ಅರವಿಂದ್ ಶಾಸ್ತ್ರಿ ಬಿಜಿಯಿದ್ದಾರೆ.