Don't Miss!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Automobiles ಮತ್ತೆ ಅಖಾಡಕ್ಕೆ ಅಮೇರಿಕನ್ ಆಫ್ರೋಡ್ ಕಿಂಗ್: 2024 ಜೀಪ್ ರಾಂಗ್ಲರ್ ಫೇಸ್ಲಿಫ್ಟ್ ರಿವ್ಯೂ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಡೆಗೂ ಸತ್ಯಜಿತ್ ಜೊತೆಯಾಯ್ತು ಕೃತಕ ಕಾಲು
ಕನ್ನಡ ಸಿನಿಮಾರಂಗದಲ್ಲಿ ಉತ್ತಮ ಕಲಾವಿದನಾಗಿ ಸುಮಾರು 654ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುತ್ತಾ ಕನ್ನಡ ಚಿತ್ರ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿರುವ ಸತ್ಯಜಿತ್ ಅವರಿಗೆ ಮತ್ತೆ ಜೀವನೋತ್ಸಹ ಸಿಕ್ಕಿದೆ.
ಗ್ಯಾಂಗ್ರಿನ್'ಗೆ ತುತ್ತಾಗಿ ಎಡಗಾಲು ಕಳೆದುಕೊಂಡ ಸತ್ಯಜಿತ್ ಧೈರ್ಯಗುಂದದ ನಟ ಎನ್ನುವುದನ್ನ ನಿರೂಪಿಸಿದ್ದಾರೆ. ಬಾಗಲಕೋಟೆಯಿಂದ ಕೃತಕ ಕಾಲು ತರಿಸಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸತ್ಯಜಿತ್ ಅವರ ಸ್ಥಿತಿಯನ್ನ ನೋಡಿ ಕನ್ನಡ ಸಿನಿಮಾರಂಗವೂ ಕೂಡ ಅವರನ್ನ ಬಾಚಿ ತಬ್ಬಿಕೊಂಡಿತ್ತು.
ಈಗಾಗಲೇ ನಾಲ್ಕಾರು ಚಿತ್ರಗಳಲ್ಲಿ ನಟಿಸಿ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಬಸ್ ಡ್ರೈವರ್ ಆಗಿದ್ದಾಗ ಅಯ್ಯಂಗಾರ್ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಈ ಮುಸಲ್ಮಾನ ಸಯ್ಯದ್ ಸತ್ಯಜಿತ್ ಆಗಿ ಬದಲಾಗಿ ಕುತೂಹಲದ ಸಂಗತಿ.
ಒಂದು ಕಾಲು ಕಳಕೊಂಡರೂ ಬಾಳಸಂಗಾತಿಯೇ ಕಾಲಾಗಿ ಜೊತೆಯಾದರು. ಮಗ ನಾಯಕನಾಗಿ ಸಿನಿಮಾರಂಗಕ್ಕೆ ಕಾಲಿಡಲು ತಯಾರಿಯಲ್ಲಿದ್ದಾನೆ. ಮಗಳು ಪೈಲೆಟ್. 'ಆ ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಒಂದು ಕಾಲನ್ನು ಮಾತ್ರ ತೆಗೆದುಕೊಂಡು ಬಿಟ್ಟ. ಆದರೂ ನಾನು ಎದೆಗುಂದಿಲ್ಲ. ಸದ್ಯ, ಈ ಕೃತಕ ಕಾಲಿಗೆ ಅಜೆಸ್ಟ್ ಆಗಲು ಶ್ರಮಿಸುತ್ತಿದ್ದೇನೆ ಎನ್ನುವುದು ಇಂದಿಗೂ ಸತ್ಯಜಿತ್ ಅವರ ಬಾಯಲ್ಲಿ ಬರುವ ಮಾತು.
ಛೇ..ಸತ್ಯಜೀತ್ ಕಲಾ ಸೇವೆಗೆ ಕನ್ನಡ ಸಿನಿಮಾ ಕಲಾವಿದರ ಸಂಘ ಕೊಡುವ ಬೆಲೆ ಇದೇನಾ!?