Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸತ್ಯಾನಂದ' ಚಿತ್ರಕ್ಕೆ ಹೊಸ ಹೆಸರು 'ಯಾರಿವನು'
ಕಡೆಗೂ 'ಸತ್ಯಾನಂದ' ಚಿತ್ರಕ್ಕೆ ಟೈಟಲ್ ಬದಲಾಗಿದೆ. ಹೊಸ ಟೈಟಲ್ ಕ್ಯಾಚಿಯಾಗಿದ್ದು ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಸಖತ್ ಖುಷಿಯಾಗಿದ್ದಾರೆ. 'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಪಟೇಲ್ ಕಾರ್ಯಮಗ್ನರಾಗಿದ್ದರು.
ತಮ್ಮ 'ಸತ್ಯಾನಂದ' ಚಿತ್ರಕ್ಕೆ ಹೊಸ ಟೈಟಲ್ ಸೂಚಿಸಿ ಎಂದು ಅವರು ಕರೆಕೊಟ್ಟಿದ್ದರು. ಸೂಕ್ತ ಶೀರ್ಷಿಕೆ ಸೂಚಿಸಿ ಆಯ್ಕೆಯಾದವರಿಗೆ ರು.5 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. ಮದನ್ ಪಟೇಲ್ ಅವರ ಕರೆಗೆ ಓಗೊಟ್ಟ ಸಾವಿರಾರು ಎಸ್ಎಂಎಸ್ ಗಳು ಬಂದಿವೆ.
ಆಯ್ಕೆಯಾಗಿರುವ ಅದೃಷ್ಟಶಾಲಿ ಹೆಸರು ಮಂಡ್ಯದ ರಾಜೇಶ್. ಈ ಟೈಟಲ್ ಸಮಸ್ಯೆಯೂ ಪರಿಹಾರವಾಗಿದೆ. ಇನ್ನೇನಿದ್ದರೂ ಚಿತ್ರ ಬಿಡುಗಡೆಯಾಗುವುದೊಂದು ಬಾಕಿ ಇದೆ. ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರು ಅಭಿನಯದಲ್ಲಿ 'ಯಾರಿವನು' ಎಂಬ ಚಿತ್ರ ಮೂಡಿಬಂದಿತ್ತು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಪ್ರೇಮಲೋಕ' ಚಿತ್ರದಲ್ಲಿ "ಯಾರಿವನು ಈ ಮನ್ಮಥನು..." ಎಂಬ ಹಾಡು ನೆನಪಿರಬೇಕಲ್ಲ. ಬಹುಶಃ 'ಯಾರಿವನು' ಚಿತ್ರದ ನಾಯಕನು ಮನ್ಮಥನೇ ಇರಬೇಕು? (ಒನ್ಇಂಡಿಯಾ ಕನ್ನಡ)