Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಗೆ ಕಚ್ಚಾಯ : ಕಿರುತೆರೆಯಲ್ಲಿ 'ಸತ್ಯವಾನ್ ಸಾವಿತ್ರಿ'
ಬೆಂಗಳೂರು, ನ. 08 : ದೀಪಾವಳಿ, ಈ ಬೆಳಕಿನ ಹಬ್ಬ ಬದುಕಿನ ದು:ಖಗಳನ್ನೆಲ್ಲ ಮರೆತು ಸಂತಸ ಅನುಭವಿಸುವ ಹಬ್ಬ. ಬೆಳಕಿನ ಹಬ್ಬವನ್ನು ನಗುವಿನ ಹಬ್ಬವಾಗಿಸಲು ಜೀ ಕನ್ನಡದಲ್ಲಿ ವೀಕ್ಷಿಸಿ 2007ರ ಬ್ಲಾಕ್ ಬಸ್ಟರ್ ಸಿನೆಮಾ "ಸತ್ಯವಾನ್ ಸಾವಿತ್ರಿ".
ಎರಡೂವರೆ ತಾಸುಗಳ ಭರಪೂರ್ ಮನರಂಜನೆಯ "ಸತ್ಯವಾನ್ ಸಾವಿತ್ರಿ" ನವೆಂಬರ್ 10ರಂದು ಮಧ್ಯಾಹ್ನ 12.30ಕ್ಕೆ ನಿಮ್ಮ ಮನೆಯ ಕಿರುತೆರೆಯಲ್ಲಿ ಮೂಡಿಬರಲಿದೆ. ಪರಮ ರಸಿಕ ಡಾ.ಸತ್ಯನ ಲೀಲೆಗಳು ಹಾಗೂ ಅವನ ಸುಳ್ಳುಗಳಿಂದ ಆಗುವ ಪೇಚಾಟಗಳು ನಿಮ್ಮನ್ನು ನಗೆಗಡಲಲ್ಲಿ ಮುಳುಗಿಸುತ್ತವೆ.
ರಮೇಶ್ ಅರವಿಂದ್, ಡೈಸಿ ಬೋಪಣ್ಣ, ಜೆನ್ನಿಫರ್ ಕೊತ್ವಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೋಮಲ್, ಅನಿರುದ್ಧ, ಮೋಹನ್, ಮುಂತಾದವರು ಸಹಕಲಾವಿದರಾಗಿ ಅಭಿನಯಿಸುತ್ತಿದ್ದಾರೆ. ಲಾಂಗು ಮಚ್ಚುಗಳ ಸಿನೆಮಾ ಭರಾಟೆಯೇ ಕನ್ನಡ ಸಿನೆಮಾ ರಂಗದಲ್ಲಿರುವಾಗ, ಉಳಿದ ಸಿನೆಮಾಗಳಿಗಿಂತ ಭಿನ್ನವಾಗಿ ಹಾಸ್ಯ ಸಿನೆಮಾ ಮಾಡಿ ಯಶಸ್ಸು ಕಂಡವರು ರಮೇಶ್ ಅರವಿಂದ್. ಅವರ ನಿರ್ದೇಶನದ "ಸತ್ಯವಾನ್ ಸಾವಿತ್ರಿ" ಇದಕ್ಕೆ ಉದಾಹರಣೆ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ರಾಜೇಂದ್ರ ಕಾರಂತ್ ಸಂಭಾಷಣೆ ಹಾಗೂ ಗುರುಕಿರಣ್ ಅವರು ಸಂಗೀತ ಸಂಯೋಜನೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)