Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ನೋಡಲು ಬಂದ ಮಕ್ಕಳ ಸೈನ್ಯ
Recommended Video
ಕುರುಕ್ಷೇತ್ರ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಧೂಳ್ ಎಬ್ಬಿಸುತ್ತಿರುವ ಸಿನಿಮಾ. ಮಹಾಭಾರತ ಕಥೆಯನ್ನು ಸಿನಿಮಾ ಮೂಲಕ ತೆರೆಮೇಲೆ ತಂದು ಇಂದಿನ ಯುವಪೀಳಿಗೆಯ ಮುಂದಿಟ್ಟಿರುವ ನಿರ್ಮಾಪಕ ಮುನಿರತ್ನ ಪ್ರಯತ್ನಕ್ಕೆ ಚಿತ್ರಾಭಿಮಾನಿಗಳು ತಲೆಬಾಗಿದ್ದಾರೆ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ತೆರೆಗೆ ಬಂದಿದೆ. ಎಲ್ಲಾ ವರ್ಗದ ಜನರ ಮನ ಸಳೆಯುತ್ತಿರುವ ಕುರಕ್ಷೇತ್ರ ನೋಡಲು ಈಗ ಮಕ್ಕಳ ಸೈನ್ಯನೆ ಬಂದಿದೆ. ಚಿತ್ರಮಂದಿರ ತುಂಬ ಈಗ ಮಕ್ಕಳೆ ತುಂಬಿಕೊಂಟಿದ್ದಾರೆ.
'ದುರ್ಯೋಧನ' ಅವತಾರದಲ್ಲಿ ಬಂದ ಗಣೇಶ: ಡಿ-ಬಾಸ್ ಭಕ್ತರು ಫುಲ್ ಖುಷ್
ಇತ್ತೀಚಿನ ವರ್ಷಗಳಲ್ಲಿ ಪೌರಾಣಿಕ ಸಿನಿಮಾಗಳನ್ನು ಮಾಡುವುದೆ ಅಪರೂಪ. ಹಾಗಾಗಿ ಅಪರೂಪಕ್ಕೆ ಬಂದ ಸಿನಿಮಾವನ್ನು ವಿಶೇಷವಾಗಿ ಮಕ್ಕಳಿಗೆ ತೋರಿಸಲಾಗುತ್ತಿದೆ. ಕಥೆಯನ್ನು ಮಾತ್ರ ಕೇಳುತ್ತಿದ್ದ ಮಕ್ಕಳೀಗ ಮಹಾಭಾರತವನ್ನು ತೆರೆ ನೋಡಿ ಸಂತಸ ಪಡುತ್ತಿದ್ದಾರೆ.
ಈ ಹಿಂದೆ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾ ರಿಲೀಸ್ ಆದಾಗಲು ಶಾಲಾ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬಂದು ಸಿನಿಮಾ ತೋರಿಸಲಾಗಿತ್ತು. ಈಗ ದುರ್ಯೋಧನನ ನೋಡಲು ಮಕ್ಕಳ ಸೈನ್ಯ ಚಿತ್ರಮಂದಿರದತ್ತ ಧಾವಿಸುತ್ತಿದೆ.
ಮೊನ್ನೆ ಮೊನ್ನೆಯಷ್ಟೆ ನಿರ್ಮಾಪಕ ಮುನಿರತ್ನ ಮಕ್ಕಳಿಗೆ ತೋರಿಸಲು ಟ್ಯಾಕ್ಸ್ ಫ್ರೀ ನೀಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಆದ್ರೆ ಅದಕ್ಕು ಮುಂಚಿತವಾಗಿಯೆ ಮಕ್ಕಳಿಗೆ ಕುರುಕ್ಷೇತ್ರ ಸಿನಿಮಾ ತೋರಿಸಲಾಗುತ್ತಿದೆ.