Don't Miss!
- News HSRP; ಸಾರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಕೆಲಸದವರ ಜೊತೆ ಕೂತು ಊಟ ಮಾಡಿದ ಅಣ್ಣಾವ್ರ ಮಗ
ಹೊಸ ವರ್ಷದ ಆಚರಣೆಯನ್ನು ಸ್ಟಾರ್ ಗಳು ಬೇರೆ ಬೇರೆ ರೀತಿಯಲ್ಲಿ ತಮಗೆ ಖುಷಿ ನೀಡುವ ಹಾಗೆ ಆಚರಣೆ ಮಾಡಿದ್ದಾರೆ. ಆದರೆ, ನಟ ರಾಘವೇಂದ್ರ ರಾಜ್ ಕುಮಾರ್ ಅರ್ಥಪೂರ್ಣವಾಗಿ ಈ ವರ್ಷವನ್ನು ಪ್ರಾರಂಭ ಮಾಡಿದ್ದಾರೆ.
ತಮ್ಮ ಮನೆಯಲ್ಲಿ ಕೆಲಸ ಮಾಡುವವರ ಜೊತೆಗೆ ಕೂತು ರಾಘಣ್ಣ ಊಟ ಮಾಡಿದ್ದಾರೆ. ಕಾರ್ ಡೈವರ್, ಅಡುಗೆ ಮಾಡುವವರು, ಕಸ ಹೊಡೆಯುವವರು, ಪಾತ್ರೆ ತೊಳೆಯುವವರು, ತಮ್ಮ ಸಹಾಯಕರು ಹೀಗೆ ತಮ್ಮ ಮನೆಯಲ್ಲಿ ಕೆಲಸ ಮಾಡುವ ಎಲ್ಲರನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾರೆ.
ಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಡಾ.ರಾಜ್ ಕುಟುಂಬ
ಪ್ರತಿ ದಿನ ತಮಗೆ ಊಟ ಬಡಿಸುವವರನ್ನು ಒಂದು ಹೋಟೆಲ್ ಗೆ ಕರೆದುಕೊಂಡು ಬಂದು, ಅವರ ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಊಟ ಮಾಡಿದ್ದಾರೆ. ತಮ್ಮ ಸೇವೆ ಮಾಡುವ ಮನೆ ಕೆಲಸದವರು ನಮ್ಮ ಕುಟುಂಬದವರೇ ಎಂದು ರಾಘವೇಂದ್ರ ರಾಜ್ ಕುಮಾರ ಹೇಳಿದ್ದಾರೆ.
ರಾಜ್ ಕುಮಾರ್ ಈ ರೀತಿ ಮನೆ ಕೆಲಸದವರ ಜೊತೆಗೆ ಊಟ ಮಾಡುತ್ತಿದ್ದರಂತೆ. ಆ ಕೆಲಸವನ್ನು ರಾಘವೇಂದ್ರ ರಾಜ್ ಕುಮಾರ್ ಕೂಡ ಮುಂದುವರೆಸಿಕೊಂಡು ಹೋಗಿದ್ದಾರೆ. ಈ ರೀತಿ ತಮ್ಮ ಈ ವರ್ಷವನ್ನು ರಾಘವೇಂದ್ರ ರಾಜ್ ಕುಮಾರ್ ಶುರು ಮಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ: ಹುಟ್ಟುಹಬ್ಬ ಬೇಡ ಎಂದ ರಾಘಣ್ಣ
ಹೆಂಡತಿ ಮಕ್ಕಳನ್ನು ಇನ್ನಷ್ಟು ಹೆಚ್ಚು ಪ್ರೀತಿಸಬೇಕು ಎನ್ನುವುದು ಅವರ ಪ್ರತಿ ವರ್ಷದ ಸಂಕಲ್ಪವಾಗಿದೆಯಂತೆ. ಇದರೊಂದಿಗೆ ಪ್ಲಾಸ್ಟಿಕ್ ಬಳಸದೆ ಇರುವ ಸಂದೇಶ ನೀಡಿದ್ದಾರೆ. ಹೀಗಾಗಿ ತಮ್ಮ ಸಂಸ್ಥೆಯಿಂದ ಬಟ್ಟೆ ಬ್ಯಾಕ್ ನಲ್ಲಿ ತಯಾರಿಸಲಾಗಿದೆ