Don't Miss!
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ಬಾಸ್ ಮಾಜಿ ಸ್ಪರ್ಧಿಯ ಸಹಾಯ ನೆನೆದ ಹಿರಿಯ ನಟ ಅಮರ್ನಾಥ್
ಕೊರೊನಾ ಸಂಕಷ್ಟದ ಸಮಯದಲ್ಲಿ ಇಡೀಯ ಚಿತ್ರರಂಗ ಸಂಕಷ್ಟದಲ್ಲಿದೆ. ದೊಡ್ಡ-ದೊಡ್ಡ ನಟ, ನಿರ್ದೇಶಕ, ನಿರ್ಮಾಪಕರು ಆರಾಮವಾಗಿದ್ದಾರಾದರೂ ಸಂಕಷ್ಟಕ್ಕೆ ಸಿಲುಕಿರುವುದು ಸಣ್ಣ ಪುಟ್ಟ ಕಲಾವಿದರು. ಹಿರಿಯ ಕಲಾವಿದರು ಮತ್ತು ಸಿನಿಮಾ ದಿನಗೂಲಿ ಕಾರ್ಮಿಕರು.
Recommended Video
ಕನ್ನಡ ಚಿತ್ರರಂಗದಲ್ಲಿ 48 ವರ್ಷ ಕಾಲ ಸೇವೆ ಸಲ್ಲಿಸಿರುವ ಹಿರಿಯ ನಟ ಅಮರ್ನಾಥ್ ಆರಾಧ್ಯ ಅವರು ಇಂದು ವಿಡಿಯೋ ಒಂದನ್ನು ಮಾಡಿದ್ದು, 'ಈ ಕೋವಿಡ್ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಅವರಿಗೆ ನೆರವಿನ ಅವಶ್ಯಕತೆ ಇದೆ. ಆದರೆ ನೆರವು ನೀಡುವವರ ಸಂಖ್ಯೆ ಬಹಳ ಕಡಿಮೆ ಇದೆ' ಎಂದಿದ್ದಾರೆ.
'ಚಿತ್ರರಂಗದ ಕೊಡುಗೈ ದಾನಿ ಅಂಬರೀಶ್ ಅವರನ್ನು ನಾನು ನೋಡಿದ್ದೆ. ಅದಾದ ನಂತರ ಈಗ ಬಿಗ್ಬಾಸ್ ಭುವನ್ ಅವರು ಕೊಡುಗೈ ದಾನಿ ಆಗಿದ್ದಾರೆ' ಎಂದಿದ್ದಾರೆ ಅಮರ್ನಾಥ್.
'ಕಷ್ಟವಿದೆ ಎಂದು ಒಂದು ಫೋನ್ ಮಾಡಿದ ಕೂಡಲೇ ಭುವನ್ ಸ್ಪಂದಿಸಿದರು. 'ನಿಮಗೆ ಏನು ಬೇಕು ಹೇಳಿ?' ಎಂದು ನನ್ನನ್ನೇ ಕೇಳಿದರು. ಅವರ ಪ್ರೀತಿ ಪೂರ್ವಕ ಪ್ರತಿಕ್ರಿಯೆ ನೋಡಿ ನನಗೆ ಕಣ್ಣೀರು ಬಂತು. ಅವರು ಮಾತು ಕೊಟ್ಟಂತೆ ದಿನಸಿ ಕಿಟ್ಟು ಮತ್ತು ಔಷಧಗಳು ಇಂದು ನನ್ನನ್ನು ಸೇರಿದವು' ಎಂದಿದ್ದಾರೆ ಅಮರ್ನಾಥ್.
'ಭುವನ್ ಅವರಂತೆ ಈ ಕೊರೊನಾ ಸಮಯದಲ್ಲಿ ಎಲ್ಲರೂ ಕೆಲಸ ಮಾಡಬೇಕು. ನಮ್ಮಂಥಹಾ ಸಂಕಷ್ಟದಲ್ಲಿರುವ ಹಿರಿಯ ಕಲಾವಿದರ ಜೀವನಕ್ಕೆ ನೆರವಾಗಬೇಕು' ಎಂದ ಅಮರ್ನಾಥ್ ಭುವನ್ ಅವರಿಗೆ ಹೆಚ್ಚಿಗೆ ದೇವರು ಆರೋಗ್ಯ, ಆಯಸ್ಸು, ಅವಕಾಶಗಳು ಸಿಗಲಿ' ಎಂದು ಹಾರೈಸಿದರು.
ಬಿಗ್ಬಾಸ್ ಭುವನ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಭುವನ್ ಮಾತ್ರವೇ ಅಲ್ಲದೆ ನಟ ಉಪೇಂದ್ರ, ಚಿತ್ರಸಾಹಿತಿ ಕವಿರಾಜ್, ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಅವರುಗಳು ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ಸಹಾಯಕ್ಕೆ ಬಂದಿದ್ದಾರೆ. ಸಾಧು ಕೋಕಿಲ, ನೀತು ಶೆಟ್ಟಿ, ದಿನಕರ್ ತೂಗುದೀಪ ಹಾಗೂ ಇನ್ನೂ ಕೆಲವರು ಆರ್ಥಿಕ ನೆರವು ನೀಡಿದ್ದಾರೆ.