Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಕಾರ್ಮಿಕರಿಗೆ ನೆರವು ಒದಗಿಸಿದ ಹಿರಿಯ ನಟಿ ಲೀಲಾವತಿ
ಹಿರಿಯ ನಟಿ ಲೀಲಾವತಿ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಸೇವೆಯಲ್ಲಿ ತೊಡಗಿದ್ದಾರೆ. ಕೋವಿಡ್ ಭಯ ತೊರೆದು ಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರು, ಸಹ ಕಲಾವಿದರ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ.
ಚಿತ್ರೀಕರಣ ಇಲ್ಲದೇ ಇರುವ ಕಾರಣ ಹಲವಾರು ಮಂದಿ ಸಿನಿಮಾ ಕಾರ್ಮಿಕರು, ದಿನ ಭತ್ಯೆ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅಂಥಹಾ ದಿನ ಭತ್ಯೆ ಕಲಾವಿದರಿಗೆ ದಿನಸಿ ವಿತರಣೆ ಮಾಡಿದ್ದಾರೆ ಲೀಲಾವತಿ.
ಚಿತ್ರರಂಗದಿಂದ ದೂರವಾಗಿ ನೆಲಮಂಗಲದ ಬಳಿಯ ಸಾಣೆಹಳ್ಳಿಯಲ್ಲಿ ಮಗ ವಿನೋದ್ ರಾಜ್ಕುಮಾರ್ ಜೊತೆಗೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲೀಲಾವತಿ ಅವರು ಇಂದು ಸಿನಿಮಾ ಕಲಾವಿದರಿಗೆ ಆಹಾರ ಧಾನ್ಯ ವಿತರಣೆ ಮಾಡಿದರು.
ಈ ಸಮಯ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಲೀಲಾವತಿ ಅವರು, 'ದೇವರ ಅಪ್ಪಣೆಯಂತೆ ನಮ್ಮಿಂದ ಏನಾಗುತ್ತದೆಯೋ ಮಾಡಲು ಬಂದಿದ್ದೇವೆ. ನಾವು ಕೊಡುತ್ತಿರುವುದರಿಂದ ಯಾರಿಗೆ ಹೊಟ್ಟೆ ತುಂಬುತ್ತೊ ಗೊತ್ತಿಲ್ಲ ಆದರೆ ಮನಸ್ಸು ತುಂಬುತ್ತೆ. ಯಾರಿಗೂ ಇನ್ನೊಬ್ಬರ ಮುಂದೆ ಕೈಚಾಚುವ ಸ್ಥಿತಿ ಬರುವುದು ಬೇಡ' ಎಂದು ಲೀಲಾವತಿ ಹೇಳಿದ್ದಾರೆ.
ಲೀಲಾವತಿ ಅವರೊಟ್ಟಿಗೆ ಮತ ವಿನೋದ್ ರಾಜ್ ಸಹ ಇದ್ದು ಆಹಾರ ಧಾನ್ಯ ವಿತರಣೆ ಮಾಡಿದ್ದರು. ಕಳೆದ ಬಾರಿ ಲಾಕ್ಡೌನ್ ಆದಾಗಲೂ ಲೀಲಾವತಿ ಹಾಗೂ ವಿನೋದ್ ರಾಜ್ ಅವರುಗಳು ಸಿನಿಮಾ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ ಮಾಡಿದ್ದರು.
Recommended Video
ಕನ್ನಡದ ಕೆಲವಾರು ನಟ-ನಟಿಯರು ಕೊರೊನಾ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರುತ್ತಿದ್ದಾರೆ. ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಪ್ರಣಿತಾ ಸುಭಾಷ್, ಗೀತರಚನೆಕಾರ ಕವಿರಾಜ್ ಇನ್ನೂ ಹಲವರು ಕೊರೊನಾ ಸಮಯದಲ್ಲಿ ಜನರ ಸಹಾಯಕ್ಕೆ ಧಾವಿಸಿದ್ದಾರೆ.