Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Education
KTIL Recruitment 2021: 38 ಡಿಟಿಸಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಸಮುದ್ರದಲ್ಲಿ 12 ಕಿ.ಮೀ ಒಬ್ಬಂಟಿಯಾಗಿ ಕಯಾಕ್ ಮಾಡಿ ಸಾಹಸ ಮೆರೆದ ಪತ್ರಕರ್ತ!
- Automobiles
ಕಾಡುತ್ತಿರುವ ಬಿಡಿಭಾಗದ ಕೊರತೆ, ಉತ್ಪಾದನಾ ಘಟಕವನ್ನು ಮುಚ್ಚಿದ ಕಾರು ತಯಾರಕ ಕಂಪನಿ
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದರ್ಶನ್ ಕೂಡ ಬಿಜೆಪಿ' : ಸ್ಯಾಂಡಲ್ ವುಡ್ ನ ಈ ಹಿರಿಯ ನಟಿ ಹೀಗೆ ಹೇಳಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯದಿಂದ ತುಂಬನೆ ದೂರ. ಆದ್ರೂ ಸಹ ಆಪ್ತರ ಪರ, ಯಾರು ಉತ್ತಮ ಕೆಲಸ ಮಾಡುತ್ತಾರೆ ಅಂತ ಅನಿಸುತ್ತೊ ಅವರ ಪರ ಪ್ರಚಾರಕ್ಕೆ ಹೋಗುತ್ತಾರೆ. ಅದ್ರಲ್ಲೂ 2019 ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಎಬ್ಬಿಸಿದ ಅಲೆ ಇನ್ನು ಹಸಿರಾಗೆ ಇದೆ.
ಪ್ರಚಾರಕ್ಕೆ ಹೋಗುತ್ತಾರೆ ಅಂದ ಮಾತ್ರಕ್ಕೆ ದರ್ಶನ್ ಯಾವುದೊ ಪಕ್ಷಕ್ಕೆ ಸೀಮಿತವಾಗಿದ್ದಾರೆ ಅಂತ ಹೇಳಲಿಕ್ಕೆ ಆಗಲ್ಲ. ಯಾಕಂದ್ರೆ ದಚ್ಚು ಇದುವರೆಗೂ ಯಾವುದೆ ಪಕ್ಷದ ಪರ ಗುರುತಿಸಿಕೊಂಡವರಲ್ಲ. ಈ ಹಿಂದೆ ವಿಧಾನ ಸಭಾ ಚುನಾವಣಾ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಪರ ಪ್ರಚಾರ ಮಾಡಿದ್ದರು. ಹಾಗೇ ಬೆಂಗಳೂರು ಸೆಂಟ್ರಲ್ ನ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಮೋಹನ್ ಪರ ಅಖಾಡಕ್ಕೆ ಇಳಿದ್ದಿದ್ದರು.
'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' : ಡಿ ಬಾಸ್ ಗೆ ಸಿಕ್ತು ಮತ್ತೊಂದು ಹೊಸ ಬಿರುದು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡಿ ಸುಮಲತಾ ಅವರ ಗೆಲುವಿಗೆ ಕಾರಣರಾಗಿದ್ದರು. ಹೀಗೆ ರಾಜಕೀಯದಲ್ಲಿ ಇಲ್ಲದ್ದಿದ್ದರು ರಾಜಕೀಯ ನಂಟು ದರ್ಶನ್ ಅವರಿಗೆ. ಇತ್ತೀಚಿಗೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ಅತಿಥಿಯಾಗಿ ಆಗಮಿಸಿದ್ದ ದಚ್ಚು ಅವರಿಗೆ ಹಿರಿಯ ನಟಿ ತಾರಾ ರಾಜಕೀಯ ಬಗ್ಗೆ ಮಾತನಾಡುತ್ತ ಕಾಲೆಳೆದಿದ್ದಾರೆ.
ದೇಶದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲು ಬಿ ಜೆ ಪಿ ಬರಬೇಕು, ಇಲ್ಲೂ ಕೂಡ ಬಿ ಜೆ ಪಿ ಬರುತ್ತೆ ಅಂತ ಹೇಳುತ್ತಾ, ಇಡೀ ದೇಶ ಬಿ ಜೆ ಪಿ, ಇಡಿ ರಾಜ್ಯ ಬಿ ಜೆ ಪಿ, ದರ್ಶನ್ ಕೂಡ ಬಿ ಜೆ ಪಿ ಎಂದು ಹೇಳಿ ದಚ್ಚು ಕಾಲೆಳೆದಿದ್ದಾರೆ. ತಾರಾ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ದಚ್ಚುಅನ್ನು ತಾರಾ ದೊಡ್ಡ ಮಗ ಅಂತಾನೆ ಕರೆಯುತ್ತಾರೆ. ಇದೆ ಪ್ರೀತಿಯಲ್ಲಿ ದಚ್ಚು ಕೂಡ ಬಿ ಜೆ ಪಿ ಅಂತ ಹೇಳಿದ್ದಾರೆ.