Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದರ್ಶನ್ ಕೂಡ ಬಿಜೆಪಿ' : ಸ್ಯಾಂಡಲ್ ವುಡ್ ನ ಈ ಹಿರಿಯ ನಟಿ ಹೀಗೆ ಹೇಳಿದ್ದೇಕೆ?
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯದಿಂದ ತುಂಬನೆ ದೂರ. ಆದ್ರೂ ಸಹ ಆಪ್ತರ ಪರ, ಯಾರು ಉತ್ತಮ ಕೆಲಸ ಮಾಡುತ್ತಾರೆ ಅಂತ ಅನಿಸುತ್ತೊ ಅವರ ಪರ ಪ್ರಚಾರಕ್ಕೆ ಹೋಗುತ್ತಾರೆ. ಅದ್ರಲ್ಲೂ 2019 ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಎಬ್ಬಿಸಿದ ಅಲೆ ಇನ್ನು ಹಸಿರಾಗೆ ಇದೆ.
ಪ್ರಚಾರಕ್ಕೆ ಹೋಗುತ್ತಾರೆ ಅಂದ ಮಾತ್ರಕ್ಕೆ ದರ್ಶನ್ ಯಾವುದೊ ಪಕ್ಷಕ್ಕೆ ಸೀಮಿತವಾಗಿದ್ದಾರೆ ಅಂತ ಹೇಳಲಿಕ್ಕೆ ಆಗಲ್ಲ. ಯಾಕಂದ್ರೆ ದಚ್ಚು ಇದುವರೆಗೂ ಯಾವುದೆ ಪಕ್ಷದ ಪರ ಗುರುತಿಸಿಕೊಂಡವರಲ್ಲ. ಈ ಹಿಂದೆ ವಿಧಾನ ಸಭಾ ಚುನಾವಣಾ ವೇಳೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಪರ ಪ್ರಚಾರ ಮಾಡಿದ್ದರು. ಹಾಗೇ ಬೆಂಗಳೂರು ಸೆಂಟ್ರಲ್ ನ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಮೋಹನ್ ಪರ ಅಖಾಡಕ್ಕೆ ಇಳಿದ್ದಿದ್ದರು.
'ಸುಲ್ತಾನ್ ಆಫ್ ಸ್ಯಾಂಡಲ್ ವುಡ್' : ಡಿ ಬಾಸ್ ಗೆ ಸಿಕ್ತು ಮತ್ತೊಂದು ಹೊಸ ಬಿರುದು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡಿ ಸುಮಲತಾ ಅವರ ಗೆಲುವಿಗೆ ಕಾರಣರಾಗಿದ್ದರು. ಹೀಗೆ ರಾಜಕೀಯದಲ್ಲಿ ಇಲ್ಲದ್ದಿದ್ದರು ರಾಜಕೀಯ ನಂಟು ದರ್ಶನ್ ಅವರಿಗೆ. ಇತ್ತೀಚಿಗೆ 'ಸಿಂಗ' ಚಿತ್ರದ ಆಡಿಯೋ ರಿಲೀಸ್ ಗೆ ಅತಿಥಿಯಾಗಿ ಆಗಮಿಸಿದ್ದ ದಚ್ಚು ಅವರಿಗೆ ಹಿರಿಯ ನಟಿ ತಾರಾ ರಾಜಕೀಯ ಬಗ್ಗೆ ಮಾತನಾಡುತ್ತ ಕಾಲೆಳೆದಿದ್ದಾರೆ.
ದೇಶದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲು ಬಿ ಜೆ ಪಿ ಬರಬೇಕು, ಇಲ್ಲೂ ಕೂಡ ಬಿ ಜೆ ಪಿ ಬರುತ್ತೆ ಅಂತ ಹೇಳುತ್ತಾ, ಇಡೀ ದೇಶ ಬಿ ಜೆ ಪಿ, ಇಡಿ ರಾಜ್ಯ ಬಿ ಜೆ ಪಿ, ದರ್ಶನ್ ಕೂಡ ಬಿ ಜೆ ಪಿ ಎಂದು ಹೇಳಿ ದಚ್ಚು ಕಾಲೆಳೆದಿದ್ದಾರೆ. ತಾರಾ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ದಚ್ಚುಅನ್ನು ತಾರಾ ದೊಡ್ಡ ಮಗ ಅಂತಾನೆ ಕರೆಯುತ್ತಾರೆ. ಇದೆ ಪ್ರೀತಿಯಲ್ಲಿ ದಚ್ಚು ಕೂಡ ಬಿ ಜೆ ಪಿ ಅಂತ ಹೇಳಿದ್ದಾರೆ.