Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್-ರಜನೀಕಾಂತ್ ಸಿನಿಮಾ ಮಾಡಿದ್ದ ನಿರ್ದೇಶಕ ಇಂದು ದಯನೀಯ ಸ್ಥಿತಿಯಲ್ಲಿ
ಅಂಬರೀಶ್ ಒಬ್ಬರಿಗೇ ಬರೋಬ್ಬರಿ 27 ಸಿನಿಮಾಗಳನ್ನು ನಿರ್ದೇಶಿಸಿದ್ದ ಹೆಸರಾಂತ ನಿರ್ದೇಶಕ ಎಟಿ ರಘು ಇಂದು ದಯನೀಯ ಸ್ಥಿತಿಯಲ್ಲಿದ್ದಾರೆ.
ಅಂಬರೀಶ್ಗೆ ದೊಡ್ಡ ಸ್ಟಾರ್ ಪಟ್ಟ ತಂದುಕೊಟ್ಟ 'ಮಂಡ್ಯದ ಗಂಡು' ಸಿನಿಮಾ ಸೇರಿದಂತೆ, ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ಕೊಟ್ಟಿರುವ ನಿರ್ದೇಶಕ ಎ.ಟಿ.ರಘು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೊತೆಗೆ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದ್ದಾರೆ.
ಚಿರಂಜೀವಿ ಮೆರೆದ ಮಾನವೀಯತೆಗೆ ಜೈ ಎಂದ ಅಭಿಮಾನಿಗಳು
ನಟ ರಜನೀಕಾಂತ್ ನಟಿಸಿದ ಹಿಂದಿ ಸಿನಿಮಾ 'ತೇರಿ ಅದಾಲತ್' ಅನ್ನು ಸಹ ನಿರ್ದೇಶಿಸಿದ್ದ ಎ.ಟಿ.ರಘು ಈಗ ಬಹು ಅಂಗ ವೈಫಲ್ಯಕ್ಕೆ ಒಳಗಾಗಿ ವೀಲ್ ಚೇರ್ ಮೇಲೆ ದಿನ ಕಳೆಯುತ್ತಿದ್ದಾರೆ.
ಎರಡು ಕಾಲು, ಕಣ್ಣು, ಕಿಡ್ನಿ, ಹೃದಯ ಶಸ್ತಚಿಕಿತ್ಸೆಗೆ ಒಳಗಾಗಿರುವ ರಘು, ವಾರಕ್ಕೆರಡು ಬಾರಿ ಡಯಾಲಿಸಿಸ್ ಸಹ ಮಾಡಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ಸತತ ಅಲೆದಾಟದಿಂದ ಆರ್ಥಿಕವಾಗಿ ಸಹ ಸಂಕಷ್ಟಕ್ಕೆ ಸಿಲುಕಿರುವ ಎ.ಟಿ.ರಘು ಈಗ ನೆರವಿನ ಹಸ್ತ ಚಾಚಿದ್ದಾರೆ.
ಸರ್ಕಾರದಿಂದ ತುಸು ನೆರವು ಸಿಕ್ಕಿದೆಯಾದರೂ ರಘು ಅವರ ಆರೋಗ್ಯ ಚಿಕಿತ್ಸೆ ವೆಚ್ಚ ಭರಿಸಲು ಅದು ಏನೂ ಸಾಲದು ಎಂಬ ಸ್ಥಿತಿ. ಚಿತ್ರರಂಗದ ಗಣ್ಯರು, ಸಂಘ-ಸಂಸ್ಥೆಗಳು ರಘು ಅವರಿಗೆ ಸಹಾಯ ಮಾಡಿದರೆ ಒಳಿತು ಎನ್ನುತ್ತಾರೆ ರಘು ಆಪ್ತರು ಮತ್ತು ಕುಟುಂಬ ವರ್ಗ.
Recommended Video
ನೆರವು ನೀಡುವ ಆಸಕ್ತಿ ಇರುವವರಿಗಾಗಿ: ಎಟಿ ರಘು, ಖಾತೆ ಸಂಖ್ಯೆ: 144010031268, ಐಎಫ್ಎಸ್ಸಿ ಕೋಡ್: ಕೆಕೆಬಿಕೆ0008272, ಕೋಟಕ್ ಮಹೀಂದ್ರಾ ಬ್ಯಾಂಕ್.