Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ತೆರೆಕಾಣುತ್ತಿರುವ 'ಏಳು' ಚಿತ್ರಗಳ ಸುತ್ತ ಒಂದು ನೋಟ
ಬಹುಶಃ ಜುಲೈ ತಿಂಗಳು ಸಿನಿಮಾ ಸುಗ್ಗಿ ಎನಿಸುತ್ತಿದೆ. ಕಳೆದ ವಾರ ಆರು ಸಿನಿಮಾಗಳು ಬಿಡುಗಡೆಯಾಗಿದ್ದವು. ಇನ್ನು ಆ ಸಿನಿಮಾಗಳನ್ನೇ ಪ್ರೇಕ್ಷಕರು ನೋಡಿರಲ್ಲ. ಒಂದು ವಾರದ ಅಂತರದಲ್ಲೇ ಮತ್ತೆ ಏಳು ಸಿನಿಮಾಗಳು ಥಿಯೇಟರ್ ಗೆ ಲಗ್ಗೆಯಿಡ್ತಿದೆ.
ಯಾವ ಚಿತ್ರವನ್ನ ನೋಡ್ಬೇಕೋ ಯಾವ ಚಿತ್ರವನ್ನ ಬಿಡ್ಬೇಕೋ ಎನ್ನೋದು ಸ್ವತಃ ಚಿತ್ರಪ್ರೇಮಿಗಳಿಗೆ ಗೊಂದಲವಾಗಿದೆ.
ಅಂದ್ಹಾಗೆ, ಈ ವಾರ ರಿಲೀಸ್ ಆಗುತ್ತಿರುವ ಏಳು ಚಿತ್ರಗಳಲ್ಲಿ ಈಗಾಗಲೇ ಮೂರು ಸಿನಿಮಾಗಳು ಪ್ರೀಮಿಯರ್ ಶೋ ಆಗಿದೆ. 'ಕರಾಳ ರಾತ್ರಿ', 'ಹಸಿರು ರಿಬ್ಬನ್', ಹಾಗೂ 'ಟ್ರಂಕ್' ಸಿನಿಮಾ ಶೋ ಆಗಿದೆ. ಇನ್ನುಳಿದಂತೆ ಯಾವ ಚಿತ್ರಗಳು ಹಾಗೂ ಆ ಚಿತ್ರಗಳ ವಿಶೇಷತೆ ಏನು.? ಮುಂದೆ ಓದಿ.....
ಸ್ಟಾರ್ಸ್ ಮಕ್ಕಳ 'ಎಂ.ಎಂ.ಸಿ.ಹೆಚ್'
ಮುಸ್ಸಂಜೆ ಮಹೇಶ್ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ 'ಎಂ.ಎಂ.ಸಿ.ಹೆಚ್' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟಿಯರ ಮಕ್ಕಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಮೇಘನರಾಜ್, ರಾಗಿಣಿ, ದೀಪ್ತಿ ಡಿ.ಬಾಬು, ಪ್ರಥಮ ಪ್ರಸಾದ್, ಸಂಯುಕ್ತ ಹೊರನಾಡು ಆ ನಟಿಯರು. ವಿಶೇಷ ಪಾತ್ರದಲ್ಲಿ ರಾಗಿಣಿ ಕೂಡ ಕಾಣಿಸಿಕೊಂಡಿದ್ದಾರೆ.
ಡಬಲ್ ಇಂಜಿನ್
ಟ್ರೈಲರ್ ಮೂಲಕ ಸದ್ದು ಮಾಡಿರುವ 'ಡಬಲ್ ಇಂಜಿನ್' ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ 'ಬಾಂಬೆ ಮಿಠಾಯಿ' ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸುಮನ್ ರಂಗನಾಥ್, ಚಿಕ್ಕಣ್ಣ, ಅಶೋಕ್, ಪ್ರಭು, ಪ್ರಿಯಾಂಕ ಮಲ್ನಾಡ್, ಸಾಧು ಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ಸುಚೀಂದ್ರ ಪ್ರಸಾದ್ ತಾರಾಗಣದ ಈ ಚಿತ್ರ ಮೂವರು ಯುವಕರು ಹಳ್ಳಿಯಲ್ಲಿ ವ್ಯವಸಾಯವನ್ನು ಬಿಟ್ಟು ಬಹುಬೇಗ ಶ್ರೀಮಂತರಾಗಲು ಹೊರಟು ಅನುಭವಿಸುವ ಸಂದರ್ಭಗಳು ಪ್ರಮುಖವಾದವು.
ಇದೇ ವಾರ 'ಅಥರ್ವ' ಬರುತ್ತಿದ್ದಾನೆ
'ಅಥರ್ವ' ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದ ಕುಡಿ ಪವನ್ ತೇಜ ಅಭಿನಯದ ಚೊಚ್ಚಲ ಸಿನಿಮಾ ಇದೇ ವಾರ ಬರ್ತಿದೆ. ಅರುಣ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚಿಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಈ ವಾರ ತೆರೆಗೆ 'ಆ ಕರಾಳ ರಾತ್ರಿ'
ದಯಾಳ್ ಪದ್ಮನಾಭನ್ ನಿರ್ದೇಶಿಸಿ, ನಿರ್ಮಿಸಿರುವ 'ಆ ಕರಾಳ ರಾತ್ರಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾರ್ತಿಕ್ ಜಯರಾಂ(ಜೆ ಕೆ), ಅನುಪಮ ಗೌಡ, ನವೀನ್ ಕೃಷ್ಣ, ರಂಗಾಯಣ ರಘು, ವೀಣಾಸುಂದರ್, ಸಿಹಿಕಹಿ ಚಂದ್ರು, ಜಯ್ ಶ್ರೀನಿವಾಸ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಪ್ರೀಮಿಯರ್ ಶೋ ಆಗಿದ್ದು, ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ.
ಈ ವಾರ ತೆರೆಗೆ 'ಹಸಿರು ರಿಬ್ಬನ್'
ಖ್ಯಾತ ಸಾಹಿತಿ ಡಾ||ಎಚ್.ಎಸ್.ವೆಂಕಟೇಶಮೂರ್ತಿ ಕಥೆ, ಚಿತ್ರಕಥೆ, ಹಾಡು ಬರೆದು ನಿರ್ದೇಶಿಸಿರುವ 'ಹಸಿರು ರಿಬ್ಬನ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಉಪಾಸನ ಮೋಹನ್ ಸಂಗೀತ ನೀಡಿದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ ಹಾಗೂ ನರಸಿಂಹ ಪ್ರಸಾದ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ನಿಖಿಲ್ ಮಂಜು, ಚೈತ್ರ, ಸುಪ್ರಿಯ ರಾವ್, ಗಿರಿಜಾ ಲೋಕೇಶ್, ಬಿ.ಜಯಶ್ರೀ ಮುಂತಾದವರಿದ್ದಾರೆ.
ಹಾರರ್ 'ಟ್ರಂಕ್'
ರಾಜೇಶ್ ಭಟ್ ನಿರ್ಮಿಸಿರುವ 'ಟ್ರಂಕ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಿಷಿಕಾ ಶರ್ಮ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಿಹಾಲ್, ವೈಶಾಲಿ ದೀಪಕ್, ಅರುಣ ಬಾಲರಾಜ್, ಸುಂದರಶ್ರೀ ಗುಬ್ಬಿ ಅಭಿನಯಿಸಿದ್ದಾರೆ. ಕಾರ್ತಿಕ್, ಪ್ರದೀಪ್, ಗಣೇಶನ್ ಸಂಗೀತ ನೀಡಿದ್ದಾರೆ. ಅಲ್ವಿನ್ ಡೊಮಿನಿಕ್ ಹಿನ್ನಲೆ ಸಂಗೀತ, ಭಜರಂಗ್ ಕೊನಧಮ್, ಸಂದೀಪ್ ಅಲುರಿ ಛಾಯಾಗ್ರಹಣ ಹಾಗೂ ಹೇಮಂತ್ ಕುಮಾರ್ ಸಂಕಲನವಿರುವ ಈ ಚಿತ್ರಕ್ಕೆ ಸುಕೇಶ್ ಶೆಟ್ಟಿ ಸಂಭಾಷಣೆ ಬರೆದಿದ್ದಾರೆ.
ಹೊಸಬರ 'ಲವ್ ಯು 2'
ಪವನ್ ಕುಮಾರ್ ಅವರು ನಿರ್ಮಿಸಿರುವ 'ಲವ್ ಯು 2' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಸ್ಟ್ ಬಿ ಕೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗಂಧರ್ವ ಸಂಗೀತ ನೀಡಿದ್ದಾರೆ. ಜಯಪ್ರಕಾಶ್ ಛಾಯಾಗ್ರಹಣ, ಅರುಣ್ ಥಾಮಸ್ ಸಂಕಲನ, ನಾಗಚೈತನ್ಯ ಸಾಹಸ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪವನ್ ಕುಮಾರ್, ಕೀರ್ತಿಲಕ್ಷ್ಮೀ, ರಘು ಭಟ್, ಮಿಮಿಕ್ರಿ ಗೋಪಿ, ಕೆಂಪೇಗೌಡ, ರಾಮಸ್ವಾಮಿ ಮುಂತಾದವರಿದ್ದಾರೆ.