ಶಬರಿಮಲೆಯಲ್ಲಿ ಪ್ರಸಾದದ ಕೊರತೆ : ಭಕ್ತರ ಅಸಮಧಾನ

By Staff

ಶಬರಿಮಲೆ, ಡಿ.13 : ಪೂರ್ವ ಸಿದ್ಧತೆಯಿಲ್ಲದ ಕಾರಣ, ಭಕ್ತರಿಗೆ ಪ್ರಸಾದ ವಿನಿಯೋಗಿಸುವಲ್ಲಿ ಶಬರಿಮಲೆ ದೇವಸ್ಥಾನ ವಿಫಲವಾಗಿದೆ. ಈ ಪರಿಣಾಮ ದೇವಸ್ಥಾನಕ್ಕೆ ಸುಮಾರು 3ಕೋಟಿ ರೂಪಾಯಿ ನಷ್ಟ ಉಂಟಾಗಿದ್ದು, ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕರ ಜ್ಯೋತಿ ದರ್ಶನ ಸೇರಿದಂತೆ ಡಿಸೆಂಬರ್ ಮತ್ತು ಜನವರಿ ತಿಂಗಳ ದಿನಗಳು ಅಯ್ಯಪ್ಪನ ಭಕ್ತರಿಗೆ, ಶ್ರದ್ಧಾಭಕ್ತಿಯ ದಿನಗಳು. ಹೆಚ್ಚಿನ ಭಕ್ತರು ಈ ಸಂದರ್ಭದಲ್ಲಿ ಶಬರಿಮಲೆಗೆ ಆಗಮಿಸುತ್ತಾರೆ. ಅರವಣ ಹೆಸರಿನ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಈ ಸಲ ಪ್ರಸಾದದ ಅಭಾವ ಕಂಡು ಬಂದಿದೆ. ಕಳೆದ ಸಲ ಇದೇ ಅವಧಿಯಲ್ಲಿ ದೇವಸ್ಥಾನ ಪ್ರಸಾದ ಮಾರಾಟ ಮಾಡಿ 6.75ಕೋಟಿ ಆದಾಯ ಗಳಿಸಿತ್ತು. ಈ ಸಲ ಆದಾಯದ ಪ್ರಮಾಣ 3.28ಕೋಟಿ ಮಾತ್ರ. ದೇವಸ್ಥಾನದ ಇತಿಹಾಸದಲ್ಲಿ ಎಂದೂ ಪ್ರಸಾದಕ್ಕೆ ಕೊರತೆ ಉಂಟಾಗಿರಲಿಲ್ಲ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X