'ಯಜಮಾನ' ವಿಲನ್ ಜೊತೆಗೆ ಶ್ರೀಮನ್ನಾರಾಯಣ ನಟಿ
ನಟ ಅನೂಪ್ ಠಾಕೂರ್ ಸಿಂಗ್ ಜೊತೆಗೆ ನಟಿ ಶಾನ್ವಿ ಶ್ರೀವಾತ್ಸವ ಕಾಣಿಸಿಕೊಂಡಿದ್ದಾರೆ. ಇಬ್ಬರು ಒಂದು ಪ್ರಾಜೆಕ್ಟ್ ಗಾಗಿ ಒಂದಾಗಿದ್ದಾರೆ.
Recommended Video
ಜಾಹಿರಾತು ಒಂದರಲ್ಲಿ ಅನೂಪ್ ಠಾಕೂರ್ ಸಿಂಗ್ ನಟಿಸುತ್ತಿದ್ದಾರೆ ಅವರಿಗೆ ಶಾನ್ವಿ ಶ್ರೀವಾತ್ಸವ ಸಾಥ್ ನೀಡಿದ್ದಾರೆ. ಇದು ಬಟ್ಟೆಯ ಬ್ರಾಂಡ್ ಒಂದರ ಜಾಹಿರಾತು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನೂಪ್ ಠಾಕೂರ್ ಸಿಂಗ್ ಇದು ನನ್ನ ಮೊದಲ ಜಾಹಿರಾತು ಎಂದು ಹೇಳಿದ್ದಾರೆ. ಶಾನ್ವಿ ಶ್ರೀವಾತ್ಸವ ಪ್ರತಿಭಾವಂತ ನಟಿ ಎಂದು ಕರೆದಿದ್ದಾರೆ. ಇಬ್ಬರ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ಅನೂಪ್ ಠಾಕೂರ್ ಸಿಂಗ್ ನಂತರ ಕನ್ನಡಕ್ಕೆ ಬಂದರು. 'ರೋಗ್' ಅವರ ಮೊದಲ ಕನ್ನಡ ಚಿತ್ರ. ಆ ನಂತರ 'ಯಜಮಾನ', 'ಉದ್ಘರ್ಷ' ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ನಟಿ ಶಾನ್ವಿ ಶ್ರೀವಾತ್ಸವ ಇತ್ತೀಚಿಗಷ್ಟೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾದ ಲಕ್ಷ್ಮಿ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಈ ಸಿನಿಮಾದ ನಂತರ ಉಪೇಂದ್ರಗೆ ಜೋಡಿಯಾಗಿ 'ರವಿಚಂದ್ರ' ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











