Don't Miss!
- Sports IPL 2024: ಚಿನ್ನಸ್ವಾಮಿ ಸಾಮ್ರಾಜ್ಯದಲ್ಲಿ ರಾಜ್ಯಭಾರ ಮಾಡಿದ ವಿರಾಟ್; KKRಗೆ ಸವಾಲಿನ ಗುರಿ ನೀಡಿದ RCB
- Lifestyle 10 ವರ್ಷದಿಂದ ನಿರಂತರ ರಕ್ತ ಕುಡಿಯುತ್ತಿರುವ ಯುವತಿ..! ರಕ್ತವೇ ಟೀ, ಅದರಲ್ಲೇ ಊಟ..!
- News Rain Alert: ಕೊಡಗಿನ ವಿವಿಧಡೆ ಮಳೆ ಅಬ್ಬರ: ಮೋಡ ಕವಿದ ವಾತಾವರಣ
- Automobiles Brezza: ಮಾರುತಿ ಸುಜುಕಿ ಬ್ರೆಝಾ ಖರೀದಿಸಬೇಕೇ.. ಆನ್ ರೋಡ್ ಬೆಲೆ ಎಷ್ಟು? EMI ಏನು?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡ್ರಗ್ಸ್ ನಂಟು ಆರೋಪ: ಶರ್ಮಿಳಾ ಮಾಂಡ್ರೆ ಹೇಳಿದ್ದೇನು?
ಚಂದನವನದ ಕೆಲವರಿಗೆ ಮಾದಕ ವಸ್ತು ಮಾಫಿಯಾದೊಂದಿಗೆ ನಂಟು ಹೊಂದಿರುವ ಪ್ರಕರಣದ ತನಿಖೆ ಬಿರುಸಾಗಿ ನಡೆಯುತ್ತಿದ್ದು, ನಟಿ ರಾಗಿಣಿ ಇಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
Recommended Video
ನಟಿ ರಾಗಿಣಿ ಅಲ್ಲದೆ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಇನ್ನೂ ಕೆಲವು ನಟಿಯರ ಹೆಸರು ಮಾಧ್ಯಮಗಳಲ್ಲಿ ದೊಡ್ಡದಾಗಿ ಕೇಳಿಬರುತ್ತಿದೆ. ಅದರಲ್ಲಿ ಒಂದು ಶರ್ಮಿಳಾ ಮಾಂಡ್ರೆ ಹೆಸರು.
ಶರ್ಮಿಳಾ ಮಾಂಡ್ರೆ ಅವರಿಗೆ ಸಿಸಿಬಿಯಿಂದ ನೋಟೀಸ್ ಹೋಗಿರುವುದು ಅಧಿಕೃತವಾಗಿಲ್ಲವಾದರೂ, ಮಾಧ್ಯಮಗಳಲ್ಲಿ ಶರ್ಮಿಳಾ ಮಾಂಡ್ರೆ ಹೆಸರು ಕೇಳಿಬರುತ್ತಿದೆ. ಇಂದ್ರಜಿತ್ ಲಂಕೇಶ್ ಸಹ, 'ಜಾಗ್ವಾರ್ ರಾಣಿ' ಎಂದು ಪರೋಕ್ಷವಾಗಿ ಶರ್ಮಿಳಾ ಅವರ ಹೆಸರು ಎಳೆದಿದ್ದಾರೆ. ಈ ಆರೋಪಗಳಿಗೆ ಶರ್ಮಿಳಾ ಮಾಂಡ್ರೆ ಟ್ವಿಟ್ಟರ್ನಲ್ಲಿ ಉತ್ತರ ಕೊಟ್ಟಿದ್ದಾರೆ.
'ಮಾಧ್ಯಮಗಳು, ಕೆಲವು ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿವೆ'
'ನನ್ನ ವಿರುದ್ಧ ಕೆಲವು ಮಾಧ್ಯಮಗಳು ಹಾಗೂ ವ್ಯಕ್ತಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಕೆಲವು ಮಾಧ್ಯಮಗಳು ಹಾಗೂ ವ್ಯಕ್ತಿಗಳು ದುರುದ್ಧೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದಿದ್ದಾರೆ ಶರ್ಮಿಳಾ.
ಟಿಆರ್ಪಿ ಹೆಚ್ಚಿಸಿಕೊಳ್ಳಲು ಸುಳ್ಳು ಹೇಳಲಾಗುತ್ತಿದೆ: ಶರ್ಮಿಳಾ
'ಚಾನೆಲ್ನ ಟಿಆರ್ಪಿ ಹೆಚ್ಚಿಸಿಕೊಳ್ಳಲು, ತಾವು ಹಣ ಮಾಡಿಕೊಳ್ಳಲು, ವಾಕ್ ಸ್ವಾತಂತ್ರ್ಯವನ್ನು ಸುಳ್ಳು ಆರೋಪಗಳಿಗೆ, ಸಾಕ್ಷ್ಯರಹಿತ ಆರೋಪಗಳನ್ನು ಮಾಡಲು ಬಳಸಲಾಗುತ್ತಿದೆ. ನಾನು ಒಬ್ಬ ವ್ಯಕ್ತಿಯಾಗಿ ಹಲವು ವರ್ಷಗಳ ಶ್ರಮದಿಂದ ಸಂಪಾದಿಸಿದ ಗೌರವವನ್ನು ಮಣ್ಣುಪಾಲು ಮಾಡುವ ಯತ್ನ ಮಾಡಲಾಗುತ್ತಿದೆ' ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಶರ್ಮಿಳಾ.
ನನಗೆ ಅವರು ಯಾರೆಂಬುದು ಗೊತ್ತಿಲ್ಲ: ಶರ್ಮಿಳಾ ಮಾಂಡ್ರೆ
'ಡ್ರಗ್ಸ್ ಪ್ರಕರಣದ ಕೆಲವರೊಂದಿಗೆ ನನ್ನ ಹೆಸರನ್ನು ಜೋಡಿಸಲಾಗುತ್ತಿದೆ. ಆದರೆ ಆ ವ್ಯಕ್ತಿಗಳು ಯಾರೆಂಬದು ನನಗೆ ಗೊತ್ತಿಲ್ಲ. ಈ ವರೆಗೆ ನಾನು ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲವೇಕೆಂದರೆ ಇವೆಲ್ಲವೂ ಸುಳ್ಳು ಸುದ್ದಿಗಳಾಗಿದ್ದರಿಂದ ಅವುಗಳ ಬಗ್ಗೆ ಪ್ರತಿಕ್ರಿಯಿಸುವ ಅವಶ್ಯಕತೆ ಕಾಣಲಿಲ್ಲ' ಎಂದಿದ್ದಾರೆ ಶರ್ಮಿಳಾ.
ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶರ್ಮಿಳಾ ಮಾಂಡ್ರೆ
ನನ್ನ ಮೌನವಾಗಿದ್ದಷ್ಟೂ ನನ್ನ ವಿರುದ್ಧ ಆರೋಪಗಳು ಹೆಚ್ಚಾಗುತ್ತಿವೆ. ಹಾಗಾಗಿ ನಾನು ಮೌನವಾಗಿ ಮುಂದುವರೆಯಲಾರೆ. ಇದು ಹೀಗೆ ಮುಂದುವರೆದರೆ, ಮಾನನಷ್ಟ ಮೊಕದ್ದಮೆ ಹೂಡಲು ಸಹ ಹಿಂದೆ ನೋಡುವುದಿಲ್ಲ' ಎಂದಿದ್ದಾರೆ ಶರ್ಮಿಳಾ. ಶರ್ಮಿಳಾ ಮತ್ತು ಕುಟುಂಬದವರಿಗೆ ಕೊರೊನಾ ಸೋಂಕಾಗಿರುವ ಕಾರಣ ಅವರು ಪ್ರಸ್ತುತ ಕ್ವಾರಂಟೈನ್ನಲ್ಲಿದ್ದಾರೆ.