Don't Miss!
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ಪೊಲೀಸರಿಗೆ ಕಾರಣ ನೀಡಿದ ನಟಿ
ನಟಿ ಶರ್ಮಿಳಾ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಐಶಾರಾಮಿ ಕಾರು ಶನಿವಾರ ನಸುಕಿನ ವೇಳೆ ವಸಂತ್ ನಗರ ಫ್ಲೈಓವರ್ ಬಳಿ ಅಪಘಾತಾಗಿದೆ.
ಲಾಕ್ಡೌನ್ ಸಮಯದಲ್ಲಿ ಅವರು ಹೊರಗೆ ಬಂದಿದ್ದು ಏಕೆ? ಅವರ ಬಳಿ ಪೊಲೀಸರು ಅವಶ್ಯಕ ವಸ್ತು ಸರಬರಾಜುದಾರರಿಗೆ ನೀಡುವ ಪಾಸ್ ಬಂದದ್ದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ
ಇಂದು ನಟಿ ಶರ್ಮಿಳಾ ಮಾಂಡ್ರೆ ಅವರು ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ಅಪಘಾತ ಆದದ್ದು ಹೇಗೆ? ತಾವೇಕೆ ಆ ಸರಿ ಹೊತ್ತಲ್ಲಿ ಹೊರಗೆ ಹೋಗಿದ್ದೆ, ಗೆಳೆಯರೇಕೆ ತಮ್ಮ ಜೊತೆಯಲ್ಲಿದ್ದರು ಎಂಬೆಲ್ಲದಕ್ಕೂ ಉತ್ತರ ನೀಡಿದ್ದಾರೆ. ಶರ್ಮಿಳಾ ನೀಡಿರುವ ಉತ್ತರಗಳು ನಿಜವೇ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.
ಪಾರ್ಟಿಮಾಡಲು ಹೋಗಿರಲಿಲ್ಲ
''ನಾನು ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ, ನನಗೆ ಹೊಟ್ಟೆ ನೋವುತ್ತಿತ್ತು, ಔಷಧ ತರಲೆಂದು ಹೊರಗೆ ಹೋಗಿದ್ದೆ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.
ಪಾಸ್ ಹೊಂದಿದ್ದವರನ್ನು ಸಹಾಯಕ್ಕೆ ಕರೆದೆ: ಶರ್ಮಿಳಾ
'ನನ್ನ ಬಳಿ ಪಾಸ್ ಇರಲಿಲ್ಲ, ಹಾಗಾಗಿ ಪಾಸ್ ಹೊಂದಿದ್ದ ಥಾಮಸ್ ಮತ್ತು ಲೋಕೇಶ್ ಸಹಾಯ ಕೇಳಿದೆ ಹಾಗಾಗಿ ಅವರು ಬಂದರು, ನಾನು ಹಿಂದಿನ ಸೀಟಿನಲ್ಲಿ ಇದ್ದೆ, ಕಾರನ್ನು ಸ್ನೇಹಿತ ಥಾಮಸ್ ಓಡಿಸುತ್ತಿದ್ದ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.
ಶರ್ಮಿಳಾ ಕುತ್ತಿಗೆಗೆ ಪೆಟ್ಟಾಗಿದೆ
ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಯಿತು. ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ, ಗೆಳೆಯರಿಗೂ ಹಲವು ಗಾಯಗಳಾಗಿವೆ ಎಂದು ಶರ್ಮಿಳಾ ಮಾಂಡ್ರೆ ಪೊಲೀಸರಿಗೆ ಹೇಳಿದ್ದಾರೆ.
ಅಪಘಾತವಾದಾಗ ಕಾರಿನಲ್ಲಿ ಯಾರ್ಯಾರಿದ್ದರು?
ಅಪಘಾತಕ್ಕೆ ಈಡಾಗಿರುವ ಕಾರು ಥಾಮಸ್ ಎಂಬುವರಿಗೆ ಸೇರಿದೆ. ಅಪಘಾತವಾದಾಗ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ, ಡಾನ್ ಥಾಮಸ್, ಲೋಕೇಶ್, ಶಿಫಾ ಜೋಹರ್ ಎಂಬುವರು ಇದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಲಾಗಿದೆ.