Don't Miss!
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- News ಚೊಂಬನ್ನು ಅರಗಿಸಿಕೊಳ್ಳಲಾಗದೇ ಬಿಜೆಪಿ ಪಿಕ್ಪಾಕೆಟ್ ಜಾಹೀರಾತು- ಡಿಕೆಶಿ ವಾಗ್ದಾಳಿ
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶರ್ಮಿಳಾ ಮಾಂಡ್ರೆ ಕಾರು ಅಪಘಾತ: ಪೊಲೀಸರಿಗೆ ಕಾರಣ ನೀಡಿದ ನಟಿ
ನಟಿ ಶರ್ಮಿಳಾ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಐಶಾರಾಮಿ ಕಾರು ಶನಿವಾರ ನಸುಕಿನ ವೇಳೆ ವಸಂತ್ ನಗರ ಫ್ಲೈಓವರ್ ಬಳಿ ಅಪಘಾತಾಗಿದೆ.
ಲಾಕ್ಡೌನ್ ಸಮಯದಲ್ಲಿ ಅವರು ಹೊರಗೆ ಬಂದಿದ್ದು ಏಕೆ? ಅವರ ಬಳಿ ಪೊಲೀಸರು ಅವಶ್ಯಕ ವಸ್ತು ಸರಬರಾಜುದಾರರಿಗೆ ನೀಡುವ ಪಾಸ್ ಬಂದದ್ದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ
ಇಂದು ನಟಿ ಶರ್ಮಿಳಾ ಮಾಂಡ್ರೆ ಅವರು ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದು, ಅಪಘಾತ ಆದದ್ದು ಹೇಗೆ? ತಾವೇಕೆ ಆ ಸರಿ ಹೊತ್ತಲ್ಲಿ ಹೊರಗೆ ಹೋಗಿದ್ದೆ, ಗೆಳೆಯರೇಕೆ ತಮ್ಮ ಜೊತೆಯಲ್ಲಿದ್ದರು ಎಂಬೆಲ್ಲದಕ್ಕೂ ಉತ್ತರ ನೀಡಿದ್ದಾರೆ. ಶರ್ಮಿಳಾ ನೀಡಿರುವ ಉತ್ತರಗಳು ನಿಜವೇ ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.
ಪಾರ್ಟಿಮಾಡಲು ಹೋಗಿರಲಿಲ್ಲ
''ನಾನು ಪಾರ್ಟಿ ಮಾಡಲು ಹೊರಗೆ ಹೋಗಿರಲಿಲ್ಲ, ನನಗೆ ಹೊಟ್ಟೆ ನೋವುತ್ತಿತ್ತು, ಔಷಧ ತರಲೆಂದು ಹೊರಗೆ ಹೋಗಿದ್ದೆ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.
ಪಾಸ್ ಹೊಂದಿದ್ದವರನ್ನು ಸಹಾಯಕ್ಕೆ ಕರೆದೆ: ಶರ್ಮಿಳಾ
'ನನ್ನ ಬಳಿ ಪಾಸ್ ಇರಲಿಲ್ಲ, ಹಾಗಾಗಿ ಪಾಸ್ ಹೊಂದಿದ್ದ ಥಾಮಸ್ ಮತ್ತು ಲೋಕೇಶ್ ಸಹಾಯ ಕೇಳಿದೆ ಹಾಗಾಗಿ ಅವರು ಬಂದರು, ನಾನು ಹಿಂದಿನ ಸೀಟಿನಲ್ಲಿ ಇದ್ದೆ, ಕಾರನ್ನು ಸ್ನೇಹಿತ ಥಾಮಸ್ ಓಡಿಸುತ್ತಿದ್ದ'' ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.
ಶರ್ಮಿಳಾ ಕುತ್ತಿಗೆಗೆ ಪೆಟ್ಟಾಗಿದೆ
ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಯಿತು. ಅಪಘಾತದಲ್ಲಿ ನನ್ನ ಕುತ್ತಿಗೆಗೆ ಪೆಟ್ಟಾಗಿದೆ, ಗೆಳೆಯರಿಗೂ ಹಲವು ಗಾಯಗಳಾಗಿವೆ ಎಂದು ಶರ್ಮಿಳಾ ಮಾಂಡ್ರೆ ಪೊಲೀಸರಿಗೆ ಹೇಳಿದ್ದಾರೆ.
ಅಪಘಾತವಾದಾಗ ಕಾರಿನಲ್ಲಿ ಯಾರ್ಯಾರಿದ್ದರು?
ಅಪಘಾತಕ್ಕೆ ಈಡಾಗಿರುವ ಕಾರು ಥಾಮಸ್ ಎಂಬುವರಿಗೆ ಸೇರಿದೆ. ಅಪಘಾತವಾದಾಗ ಕಾರಿನಲ್ಲಿ ಶರ್ಮಿಳಾ ಮಾಂಡ್ರೆ, ಡಾನ್ ಥಾಮಸ್, ಲೋಕೇಶ್, ಶಿಫಾ ಜೋಹರ್ ಎಂಬುವರು ಇದ್ದರು ಎಂದು ಪೊಲೀಸರಿಗೆ ಹೇಳಿಕೆ ನೀಡಲಾಗಿದೆ.