Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರೆಬಲ್ ಸ್ಟಾರ್ ಅಂಬರೀಶ್ಗೆ ಶತ್ರುಘ್ನ ಸಿನ್ಹಾ ಗುರುಗಳು!
ಬಿಜೆಪಿ ಸಂಸದ ಮತ್ತು ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಕನ್ನಡದ ರೆಬಲ್ ಸ್ಟಾರ್ ಮತ್ತು ವಸತಿ ಸಚಿವ ಅಂಬರೀಶ್ ಅವರು ರಾಜಕೀಯಕ್ಕೆ ಬರಲು ಸ್ಫೂರ್ತಿ ತುಂಬಿದವರು. ಕಳೆದ ವಾರ ಬಿಡುಗಡೆಗೊಂಡ 'ಎನಿಥಿಂಗ್ ಬಟ್ ಖಾಮೋಶ್' ಪುಸ್ತಕದಲ್ಲಿ ಸಿನ್ಹಾ ಅವರು ಈ ಕುರಿತು ಬರೆದಿದ್ದಾರೆ.
ಶತ್ರುಘ್ನ ಸಿನ್ಹಾ ಅವರು ತಮ್ಮ ಪುಸ್ತಕದಲ್ಲಿ ದಕ್ಷಿಣ ಭಾರತದ ಹಲವಾರು ನಟರು ನನ್ನಿಂದ ಸ್ಫೂರ್ತಿ ಪಡೆದಿದ್ದಾರೆ. ಹಾಗೇ ಸ್ಫೂರ್ತಿ ಪಡೆದವರಲ್ಲಿ ಅನೇಕರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು, ಈಗಲೂ ಸಕ್ರಿಯರಾಗಿದ್ದಾರೆ ಎಂದು ಅಂಬರೀಶ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. [ಸಿನ್ಹಾ ಪುಸ್ತಕದಲ್ಲೇನಿದೆ?]
'ಎನಿಥಿಂಗ್ ಬಟ್ ಖಾಮೋಶ್' ಕೃತಿಯಲ್ಲಿನ 'ಸದರನ್ ಕಂಫರ್ಟ್' ಭಾಗದಲ್ಲಿ ದಕ್ಷಿಣ ಭಾರತದ ನಟರೊಂದಿಗೆ ಕಳೆದ ಸಂತಸದ ಘಟನೆಗಳನ್ನು ಸಿನ್ಹಾ ಮೆಲುಕು ಹಾಕಿದ್ದಾರೆ. 'ನಾನೀಗ ಜೀವನದಲ್ಲಿ ಏನಾಗಿದ್ದೇನೋ ಅದಕ್ಕೆಲ್ಲ ಸಿನ್ಹಾ ಪ್ರೇರಣೆ. ನನ್ನ ವೃತ್ತಿ ಜೀವನ ಸಿನ್ಹಾ ಅವರಂತೆ ಮುನ್ನಡೆದಿದೆ' ಎಂದು ಅಂಬರೀಶ್ ಅವರು ಹೇಳಿಕೊಂಡಿದ್ದಾರೆ.
ಅಂಬರೀಶ್ ಜೊತೆಗಿನ ಒಂದು ಸನ್ನಿವೇಶವನ್ನು ಸಹ ಸಿನ್ಹಾ ಅವರು ವಿವರಿಸಿದ್ದಾರೆ. ಅಂಬರೀಶ್ ಅವರಿಗೆ ಕುಡಿತವನ್ನು ಬಿಡುವಂತೆ ಹೇಳಿದ್ದೆ. ನಾನು ಹೇಳಿದರೂ ಅವರು ನಿಲ್ಲಿಸಲಿಲ್ಲ ಎಂದು ಸಿನ್ಹಾ ಅವರು ಪುಸ್ತದಲ್ಲಿ ಹೇಳಿದ್ದಾರೆ. ಸಿನ್ಹಾ ಅವರ ಪುಸ್ತಕದಲ್ಲೇನಿದೆ? ಚಿತ್ರಗಳಲ್ಲಿ ನೋಡಿ......
ಪುಸ್ತಕದಲ್ಲಿ ಅಂಬರೀಶ್ ನೆನೆಪು
ಪಾಟ್ನಾ ಸಾಹಿಬ್ ಸಂಸದ (ಬಿಜೆಪಿ) ಶತ್ರುಘ್ನ ಸಿನ್ಹಾ ‘ಎನಿಥಿಂಗ್ ಬಟ್ ಖಾಮೋಶ್' ಪುಸ್ತಕದಲ್ಲಿ ದಕ್ಷಿಣ ಭಾರತದ ನಟರೊಂದಿಗೆ ಕಳೆದ ಸಂತಸದ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಇದರಲ್ಲಿ ನಟ ಮತ್ತು ವಸತಿ ಸಚಿವ ಅಂಬರೀಶ್ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
'ಕಲರ್ಫುಲ್ ಸೂಪರ್ ಸ್ಟಾರ್'
ಸಿನ್ಹಾ ತಮ್ಮ ಪುಸ್ತಕದಲ್ಲಿ ದಕ್ಷಿಣ ಭಾರತದಲ್ಲಿ ನನಗೆ ಹಲವಾರು ನಟರು ಆತ್ಮೀಯರಾಗಿದ್ದರು ಎಂದು ಹೇಳಿದ್ದಾರೆ. ಅವರಲ್ಲಿ ಕೆಲವರು ಕೇಂದ್ರ ಹಾಗೂ ರಾಜ್ಯಗಳಲ್ಲಿ ಸಚಿವರು ಆಗಿದ್ದಾರೆ. ಅಂಬರೀಶ್ ನನ್ನನ್ನು ‘ಕಲರ್ಫುಲ್ ಸೂಪರ್ ಸ್ಟಾರ್' ಎಂದು ಕರೆಯುತ್ತಿದ್ದರು ಎಂದು ನೆನೆಪು ಮಾಡಿಕೊಂಡಿದ್ದಾರೆ.
ಅಂಬರೀಶ್ ಅವರಿಗೆ ಸಿನ್ಹಾ ಸ್ಫೂರ್ತಿ
ಅಂಬರೀಶ್ ಅವರು ರಾಜಕೀಯಕ್ಕೆ ಬರಲು ಶತ್ರುಘ್ನ ಸಿನ್ಹಾ ಅವರು ಸ್ಫೂರ್ತಿಯಾಗಿದ್ದರು. 'ನಾನೀಗ ಜೀವನದಲ್ಲಿ ಏನಾಗಿದ್ದೇನೋ ಅದಕ್ಕೆಲ್ಲ ಸಿನ್ಹಾ ಪ್ರೇರಣೆ. ನನ್ನ ವೃತ್ತಿ ಜೀವನ ಸಿನ್ಹಾ ಅವರಂತೆ ಮುನ್ನಡೆದಿದೆ' ಎಂದು ಅಂಬರೀಶ್ ಹೇಳಿಕೊಂಡಿದ್ದಾರೆ.
ಕುಡಿತ ಬಿಡುವಂತೆ ಹೇಳಿದ್ದರು
ಸಿನ್ಹಾ ತಮ್ಮ ಪುಸ್ತಕದಲ್ಲಿ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಬೆಂಗಳೂರಿನ ತಾಜ್ ಹೋಟೆಲ್ನಲ್ಲಿ ಬ್ಲ್ಯಾಕ್ ಲೇಬಲ್ ಸ್ಕಾಚ್ ಬಾಟಲಿಯನ್ನು ಅಂಬರೀಶ್ ಅವರು ತಲೆಯ ಮೇಲೆ ಹೊತ್ತುಕೊಳ್ಳುತ್ತಿದ್ದರು. ತಮ್ಮ ಮೆಚ್ಚಿನ ಬ್ರ್ಯಾಂಡ್ ಅನ್ನೇ ಅವರು ಯಾವಾಗಲೂ ಕುಡಿಯುತ್ತಿದ್ದರು. ಕುಡಿತ ಬಿಡುವಂತೆ ಅವರಿಗೆ ನಾನು ಸಲಹೆಯನ್ನು ನೀಡಿದ್ದೆ ಎಂದು ಸಿನ್ಹಾ ಹೇಳಿದ್ದಾರೆ.
ಸಿನ್ಹಾ ನನ್ನ ಗುರುಗಳು
'ನಾನು ಸಿನ್ಹಾ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ಅಂಬರೀಶ್ ಅವರು, ನಾನು ಸಿನ್ಹಾ ಅವರ ಅಭಿಯಾನಿಯಾಗಿರುವುದಕ್ಕಿಂತ ನಮ್ಮದು ಏಕಲವ್ಯ ಮತ್ತು ದ್ರೋಣಾಚಾರ್ಯ ಅವರ ಕತೆಯಂತೆ. ಅವರು ನನ್ನ ಗುರು' ಎಂದು ಹೇಳಿದ್ದಾರೆ.