Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ, ನಿರೂಪಕಿ ಶೀತಲ್ ಶೆಟ್ಟಿ 'ಕಾರು' ಬಿಡುಗಡೆಗೆ ಸಿದ್ಧ
ಕನ್ನಡದ ಕೆಲವು ನಟಿಯರು ಈಗಾಗಲೇ ಕಿರುಚಿತ್ರಗಳ ಮೂಲಕ ನಿರ್ದೇಶಕಿಯರಾಗಿದ್ದಾರೆ. ನಿರೂಪಕಿ, ನಟಿ, ಶೀತಲ್ ಶೆಟ್ಟಿ ಕೂಡ ಶಾರ್ಟ್ ಫಿಲ್ಮ್ ಮೂಲಕ ನಿರ್ದೇಶಕಿ ಆಗಿದ್ದಾರೆ.
'ಕಾರು' ಎಂಬ ಕಿರುಚಿತ್ರದ ತಯಾರಿಯಲ್ಲಿ ಶೀತಲ್ ಶೆಟ್ಟಿ ಬ್ಯುಸಿ ಇದ್ದಾರೆ. ಮಾಕೋನಹಳ್ಳಿ ಡ್ಯಾಂ ಬಳಿಯ ಕೆಲವು ಸ್ಥಳಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿದೆ. ಕಿರುಚಿತ್ರದ ಕೆಲಸಗಳು ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.
''ಯುವಕರಿಲ್ಲದ ಮಲೆನಾಡು ವೃದ್ಧಾಶ್ರಮವಾಗಿದೆ''- ಸಿನಿಮಾ ಚಿಕ್ಕದು, ವಿಷಯ ದೊಡ್ಡದು
ಡಿಸೆಂಬರ್ 15 'ಕಾರು' ಕಿರುಚಿತ್ರ ಬಿಡುಗಡೆ ಆಗುತ್ತಿದೆ. ಇದು ಪುಟ್ಟ ಹುಡುಗಿಯ ಕಥೆಯಾಗಿದೆ. ಆ ಪಾತ್ರದಲ್ಲಿ ಪುಟ್ಟಿ ನಟಿಸಿದ್ದಾರೆ. ಬಾಲ್ಯದ ಹುಡುಗಿಗೆ ಕಾರ್ ಮೇಲೆ ಹೇಗೆ ಆಕರ್ಷಣೆ ಆಗುತ್ತದೆ, ಸಣ್ಣ ಹುಡುಗಿ ಮೇಲೆ ಹೇಗೆ ಕಾರ್ ಪರಿಣಾಮ ಬೀರುತ್ತದೆ ಎನ್ನುವುದು ಕಿರುಚಿತ್ರದ ಕಥೆಯಾಗಿದೆ.
ಅನಂತ್ ಕಾಮತ್ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಯೋಗೀಶ್ವರ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಋತ್ವಿಕ್ ಸಂಕಲನ ಇದೆ. ಇಡೀ ತಂಡ ಒಂದು ಒಳ್ಳೆಯ ಕಿರುಚಿತ್ರ ನೀಡುವ ಸಂತೋಷದಲ್ಲಿ ಇದೆ.
ಭಾವನೆಗಳು ತುಂಬಿದ 'ಬಿಸಿ ಬೆಳೆ ಬಾತ್' ರುಚಿಯಾಗಿದೆ
'ಸಂಗಾತಿ' ಕಿರುಚಿತ್ರದ ಮೂಲಕ ಶೀತಲ್ ಶೆಟ್ಟಿ ನಿರ್ದೇಶಕಿ ಆಗಿದ್ದಾರೆ. ಅದಕ್ಕೂ ಹಿಂದೆ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಆ ನಂತರ 'ಪತಿ ಬೇಕು.ಕಾಮ್' ಸಿನಿಮಾದಲ್ಲಿ ನಾಯಕಿಯಾಗಿದ್ದರು.