Don't Miss!
- News 1951 ರಿಂದ 2019 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಇಲ್ಲಿದೆ ವಿವರ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಯ ಸರ್ಕಾರದ ವಿರುದ್ಧ ಗುಟುರು ಹಾಕಿದ ಗಣೇಶ್ ಪತ್ನಿ
ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣದಿಂದ ವಿಧಾನ ಮಂಡಲದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅಹೋರಾತ್ರಿ ಧರಣಿ ಮಾಡಿದರೂ ಕೂಡ ಕೆ.ಜೆ.ಜಾರ್ಜ್ ರಾಜೀನಾಮೆ ಕೊಡಲು ತಯಾರಿಲ್ಲ.
ಸಚಿವ ಕೆ.ಜೆ.ಜಾರ್ಜ್ ಪರ ಬ್ಯಾಟಿಂಗ್ ಮುಂದುವರಿಸಿರುವ ಸಿ.ಎಂ.ಸಿದ್ಧರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗುಟುರು ಹಾಕಿದ್ದಾರೆ. ['ಜಾರ್ಜ್ ರಾಜೀನಾಮೆ ಪಡೆದು, ಉತ್ತರ ಕೊಡಿ']
ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕೂಡ ಆಗಿರುವ ಶಿಲ್ಪಾ ಗಣೇಶ್ ಇಂದು ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಇರುವ ಡಿ.ವೈ.ಎಸ್.ಪಿ ಗಣಪತಿ ಅವರ ಸ್ವಗ್ರಾಮ ರಂಗಸಮುದ್ರಕ್ಕೆ ಭೇಟಿ ನೀಡಿ, ಗಣಪತಿ ಪತ್ನಿ ಪಾವನಾ ಅವರಿಗೆ ಸಾಂತ್ವನ ಹೇಳಿದರು. [ನ್ಯಾಯಾಂಗ ತನಿಖೆ ಮೇಲೆ ನಂಬಿಕೆ ಇಲ್ಲ: ಗಣಪತಿ ಪತ್ನಿ ಪಾವನಾ]
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿಲ್ಪಾ ಗಣೇಶ್, ''ನೈತಿಕ ಬೆಂಬಲ ನೀಡಲು ಗಣಪತಿ ನಿವಾಸಕ್ಕೆ ಭೇಟಿ ನೀಡಿದ್ದೇನೆ. ಅವರ ಸಮಸ್ಯೆಗಳನ್ನ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅದನ್ನ ಯಾರಿಗೆ ಹೇಳಬೇಕೋ, ಹೇಳ್ತೀವಿ. ನಾವು ಇಲ್ಲಿ ಬಂದಿದ್ದು ಒಳ್ಳೆಯದ್ದೇ ಆಯ್ತು.''[ರಾಜಕೀಯಕ್ಕೂ ಸಿನಿಮಾಗೂ ಡೈವೋರ್ಸೇ ಹೆಚ್ಚು]
''ಪಕ್ಷದ ಕಡೆಯಿಂದ ಬಂದಿದ್ದೀನಿ ಅಂದ ಮಾತ್ರಕ್ಕೆ ಅದು ಪೊಲಿಟಿಸೈಸ್ ಆಗೋದು ಬೇಡ. ಒಂದು ಹೆಣ್ಣಾಗಿ, ತಾಯಿ ಆಗಿ ನಾನು ಇಲ್ಲಿಗೆ ಬಂದಿದ್ದೇನೆ. ಇವತ್ತು ಬಂದ್ ಇದೆ ಅಂತ ಗೊತ್ತಾದರೂ ಕೂಡ ಬಂದು, ಅವರನ್ನ ಮೀಟ್ ಮಾಡಿದ್ದೇವೆ.'' [ಡಿವೈಎಸ್ಪಿ ಗಣಪತಿ ಯಾರು? ಏನು? ಎತ್ತ?]
''ರಾಜ್ಯ ಸರ್ಕಾರಕ್ಕೆ ಅಷ್ಟು ಧೈರ್ಯ ಇದ್ದರೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನ ಸಿ.ಬಿ.ಐ ತನಿಖೆಗೆ ಕೊಟ್ಟುಬಿಡಲಿ. ಅವರು ತಪ್ಪು ಮಾಡಿದ್ದಾರೆ ಅಂತ ಗೊತ್ತಿರುವುದಕ್ಕೆ ಅದನ್ನ ಮುಚ್ಚಲು ನೋಡುತ್ತಿದ್ದಾರೆ'' ಅಂತ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.