twitter
    For Quick Alerts
    ALLOW NOTIFICATIONS  
    For Daily Alerts

    ಬಡವರಿಗೆ ಸಹಾಯ ಮಾಡುತ್ತಿರುವ ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್ ಶೆಟ್ಟಿ

    |

    ಕೊರೊನಾ ವಿರುದ್ಧ ಹೋರಾಟಕ್ಕೆ ಸಾಕಷ್ಟು ಮಂದಿ ದೇಣಿಗೆ ನೀಡುತ್ತಿದ್ದಾರೆ. ಚಿತ್ರರಂಗದ ಸಾಕಷ್ಟು ಗಣ್ಯರು ಕೋಟಿ ಕೋಟಿ ನೀಡುವ ಮೂಲಕ ಬಡವರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಇದೀಗ ಬಿಗ್ ಬಾಸ್ ವಿನ್ನರ್, ನಟ ಶೈನ್ ಶೆಟ್ಟಿ ಕೂಡ ಬಡವರು, ದಿನಗೂಲಿ ಕಾರ್ಮಿಕರ ನೆರವಿಗೆ ದಾವಿಸಿದ್ದಾರೆ.

    Recommended Video

    Karabu song released date postponed | Pogaru | Dhruva sarja | Filmibeat kannada

    ಬಡವರ ಕಷ್ಟಕ್ಕೆ ಮಿಡಿದ ಶೈನ್ ತಿಂಗಳ ರೇಷನ್ ಮತ್ತು ಮನೆ ಬಾಡಿಗೆ ಕಟ್ಟಲು ಸಹಾಯ ಮಾಡುತ್ತಿದ್ದಾರೆ. ಇನ್ನು ಲಾಕ್ ಡೌನ್ ಹಿನ್ನಲೆ ಪೊಲೀಸರು ಹಗಲಿರುಳೆನ್ನದೆ ಕಾರ್ಯನಿರ್ವಹಿಸುವ ಜೊತೆಗೆ ಬಡವರ ಕಷ್ಟಕ್ಕು ನೆರವಾಗಿ ಊಟದ ವ್ಯವಸ್ತೆಯನ್ನು ಮಾಡುತ್ತಿದ್ದಾರೆ. ಅಂತಹ ಪೊಲೀಸರಿಗೆ ಶೈನ್ ದಿನಸಿ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಮುಂದೆ ಓದಿ..

    ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್

    ಪೊಲೀಸರಿಗೆ ದಿನಸಿ ನೀಡುತ್ತಿರುವ ಶೈನ್

    ಲಾಕ್ ಡೌನ್ ಹಿನ್ನಲೆ ಸಾಕಷ್ಟು ಮಂದಿ ಊಟಕ್ಕು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಪೊಲೀಸರು ತಮ್ಮ ಕೆಲಸದ ಜೊತೆಗೆ ಬಡವರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಅಂತಹ ಪೊಲೀಸರಿಗೆ ಶೈನ್ ಶೆಟ್ಟಿ ದಿನಸಿ ನೀಡುವ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು, ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲೆ ಅಡುಗೆ ಮಾಡಿ ಬಡವರ ಹೊಟ್ಟೆ ತುಂಬಿಸುತ್ತಿರುವ ಪೊಲೀಸರಿಗೆ ಶೈನ್ ಶೆಟ್ಟಿ ದಿನಸಿ ವಸ್ತುಗಳನ್ನು ನೀಡುತ್ತಿದ್ದಾರೆ.

    ಪೊಲೀಸರಿಗೆ ಧನ್ಯವಾದ ತಿಳಿಸಿದ ಶೈನ್

    ಪೊಲೀಸರಿಗೆ ಧನ್ಯವಾದ ತಿಳಿಸಿದ ಶೈನ್

    "ಹೋಟೆಗಳು ಬಂದ್ ಆಗಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳೆ ಆಹಾರ ತಯಾರಿಸಿ ಅಗತ್ಯವಿರುವ ಜನರಿಗೆ ನೀಡುತ್ತಿದ್ದಾರೆ. ಜನರಿಗೆ ಸಂಪರ್ಕದಲ್ಲಿರುವರು ಅಂದರೆ ಸದ್ಯ ಪೋಲೀಸರು. ಹಾಗಾಗಿ ಪೊಲೀಸರೆ ಅಡುಗೆ ಮಾಡಿ ಊಟವಿಲ್ಲದ ಜನರಿಗೆ ನೀಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ತುಂಬ ಧನ್ಯವಾದಗಳು" ಎಂದು ಶೈನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ದಿನಗೂಲಿ ಕಾರ್ಮಿಕರಿಗೆ ಶೈನ್ ನೆರವು

    ದಿನಗೂಲಿ ಕಾರ್ಮಿಕರಿಗೆ ಶೈನ್ ನೆರವು

    ಬಡವರ ಹೊಟ್ಟೆ ತುಂಬಿಸುತ್ತಿರುವ ಪೊಲೀಸರಿಗೆ ನೆರವಾಗಿದ್ದಲ್ಲದೆ, ದಿನಗೂಲಿ ಕಾರ್ಮಿಕರ ಕಷ್ಟಕ್ಕು ಸ್ಪಂದಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ಇಸ್ತ್ರಿ ಮಾಡುವವರು, ಗಾರೆ ಕೆಲಸ ಮಾಡುವರು ಸೇರಿದಂತೆ ಅನೇಕರ ಕಷ್ಟಕ್ಕೆ ನೆರವಾಗಿದ್ದಾರೆ. ಅವರಿಗೆ ತಿಂಗಳ ರೇಷನ್ ನೀಡುವುದಲ್ಲದೆ, ಅವರ ಮನೆ ಬಾಡಿಗೆ ಕಟ್ಟಲು ಶೈನ್ ಮುಂದಾಗಿದ್ದಾರೆ.

    'ನಾನು ಕೂಡ ಬೀದಿ ಬದಿ ವ್ಯಾಪಾರಿ'

    "ಬೀದಿ ಬದಿಯ ವ್ಯಾಪಾರಿ ನಾನು, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಫುಡ್‍ಟ್ರಕ್ ಇಟ್ಟುಕೊಂಡು ತಿಂಗಳು ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದೆ. ನಟನಾಗಬೇಕೆಂದು ಕನಸು ಕಂಡಿದ್ದೆ. ನಡುವೆ ಬಿಗ್ ಬಾಸ್ ಗೆ ಹೋದೆ. ಬಿಗ್ ಬಾಸ್ ಇಲ್ಲದಿದ್ದರೆ ನನ್ನ ಪರಿಸ್ಥಿತಿ ಏನಾಗುತ್ತಿತ್ತು? ಬಾಡಿಗೆ, ಊಟಕ್ಕೆ ಏನು ಮಾಡಬೇಕಿತ್ತು? ಎಷ್ಟು ಕಷ್ಟಗಳು ಎದುರಿಸಬೇಕಾಗಿತ್ತು? ನನ್ನ ಜೊತೆ ಕೆಲಸಗಾರರಿದ್ದಾರೆ, ಅವರಿಗೆ ಸಂಬಳ ಹೇಗೆ ಕೊಡುವುದು, ಅವರನ್ನು ಊರಿಗೆ ಕಳಿಸುವುದಕ್ಕೆ ಆಗಲ್ಲ? ಮುಂತಾದ ಪ್ರಶ್ನೆ ಮೂಡಿದಾಗ ನನಗೊಂದು ಯೋಚನೆ ಬಂತು". ಹಾಗಾಗಿ ಕಷ್ಟದಲ್ಲಿರುವವರಿಗೆ ತಂಡವನ್ನು ಕಟ್ಟಿಕೊಂಡು ಸಹಾಯ ಮಾಡಲು ಮುಂದಾಗಿರುವುದಾಗಿ ಶೈನ್ ಹೇಳಿದ್ದಾರೆ.

    English summary
    Kannada Actor Shine Shetty provide ration to Police who help poor people.
    Monday, March 30, 2020, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X