Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?
Recommended Video
ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ 'ನಾಗರಹಾವು' ಸಿನಿಮಾ ಸಿನಿಮಾಸ್ಕೋಪ್ ನಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ. ಹೊಸ ರೂಪದ ದೃಶ್ಯ ಮತ್ತು ಆಡಿಯೋ ಬಳಸಿ ರಿಲೀಸ್ ಮಾಡಲಾಗುತ್ತಿದೆ.
ಪುಟ್ಟಣ್ಣ ಕಣಗಲ್ ನಿರ್ದೇಶನ ಮಾಡಿ, ವಿಷ್ಣು, ಅಂಬರೀಶ್, ಆರತಿ, ಆಶ್ವತ್ಥ್, ಲೀಲಾವತಿ, ಅಭಿನಯಿಸಿದ್ದ ಎವರ್ ಗ್ರೀನ್ ಸಿನಿಮಾವನ್ನ ಕೇವಲ ಅಭಿಮಾನಿಗಳು ಮಾತ್ರವಲ್ಲ, ಸ್ಯಾಂಡಲ್ ವುಡ್ ಸಿನಿತಾರೆಯರು ಕೂಡ ಕಾಯುತ್ತಿದ್ದಾರೆ.
ಟಿಕೆಟ್ ತಗೊಂಡು 'ನಾಗರಹಾವು' ಸಿನಿಮಾ ನೋಡ್ತಿನಿ ಎಂದ ಅಂಬಿ
ವಿಷ್ಣುವರ್ಧನ್ ಜೊತೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕೂಡ ಇದೇ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇಂತಹ ಅಂಬಿ ಈಗ 'ಟಿಕೆಟ್ ತಗೊಂಡು ಈ ಸಿನಿಮಾ ನೋಡ್ತೀನಿ' ಎಂದಿದ್ದಾರೆ. ಇಂತಹ ಚಿತ್ರದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿದ್ದು, ನಾಗರಹಾವು ಯಾಕೆ ಅಷ್ಟೊಂದು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ.....
ಆಗ ನನಗೆ ಹನ್ನೊಂದು ವರ್ಷ ಆಗಿತ್ತು
''ನಾಗರಹಾವು ಸಿನಿಮಾ ನೋಡಿದಾಗ ಬಹುಶಃ ನನಗೆ ಹನ್ನೊಂದು ವರ್ಷ ಇರಬಹುದು. ಪುಟ್ಟಣ್ಣ, ವೀರಾಸ್ವಾಮಿ, ಎಲ್ಲರೂ ಇದ್ದಾರೆ. ನಾನು ಆಗ ಸಿನಿಮಾ ನೋಡಿದ್ದೆ. ಅಲ್ಲಿವರೆಗೂ ಅಪ್ಪಾಜಿ ಸಿನಿಮಾಗಳು ಮಾತ್ರ ನೋಡ್ತಿದ್ವಿ. ಬಟ್, ಈ ಸಿನಿಮಾ ನೋಡಿದಾಗ, ಅಬ್ಬಾ ಯಾರೂ ಈ ಆಕ್ಟರ್, ಇಷ್ಟೊಂದು ಹ್ಯಾಂಡ್ ಸಮ್, ಇಷ್ಟೊಂದು ಎನರ್ಜಿ, ಲವಲವಿಕೆ, ಬಾಡಿ ಲಾಂಗ್ವೇಜ್ ಎಂದು ಆಶ್ಚರ್ಯದಿಂದ ನೋಡಿದ್ದೆ'' - ಶಿವರಾಜ್ ಕುಮಾರ್, ನಟ
'ನಾಗರಹಾವು' ಸಿನಿಮಾ ಬಗ್ಗೆ ಮಾತನಾಡುವ ಯೋಗ್ಯತೆ ನನಗೆ ಇಲ್ಲ
ವಿಷ್ಣು ಸರ್ ಗೆ ನಾನು ಫ್ಯಾನ್ ಆಗೋದೆ
''ಸಿನಿಮಾ ನೋಡಿ ಹೊರಗೆ ಬಂದಮೇಲೆ ಅಪ್ಪಣ್ಣ ಅವರ ಬಳಿ ಕೇಳಿದೆ ಯಾರು ಈ ಸಿನಿಮಾಗೆ ಡೈರೆಕ್ಟರ್ ಅಂತ. ಆಗ ಅವರ ಪುಟ್ಟಣ್ಣ ಅಂದ್ರು. ಪುಟ್ಟಣ್ಣ ಬಳಿ ಹೋಗಿ 'ಸರ್ ಈ ಸಿನಿಮಾ ಸೂಪರ್ ಹಿಟ್, ಸಿಲ್ವರ್ ಜೂಬ್ಲಿ. ಆ ಹೀರೋ ತುಂಬಾ ಚೆನ್ನಾಗಿ ಮಾಡಿದ್ದಾರೆ, ನನಗೆ ಸಿಕ್ಕಾಪಟ್ಟೆ ಇಷ್ಟವಾದ್ರು, ಐ ಲವ್ ಹಿಮ್ ಸರ್' ಅಂತ ಹೇಳಿದ್ದೆ'' - ಶಿವಣ್ಣ
ಪುಟ್ಟಣ್ಣನ ಬಗ್ಗೆ ಅಂಬರೀಶ್ ಹೇಳಿದ ಕುತೂಹಲಕಾರಿ ಸಂಗತಿಗಳು
ವಿಷ್ಣುವರ್ಧನ್ ಅತ್ಯದ್ಭುತ ನಟ
''ವಿಷ್ಣು ಸರ್ ಅವರನ್ನ ಹಲವು ಅವತಾರಗಳಲ್ಲಿ ನೋಡಿದ್ದೀನಿ. ಅವರೊಬ್ಬ ಅದ್ಭುತ ನಟ. ಅದರಲ್ಲೂ ಮೊದಲ ಸಿನಿಮಾ ಅಂತೂ ಅತ್ಯದ್ಭುತ. ಆಗಲೇ ರಿವೇಂಜ್ ಕಥೆ ಹೊಂದಿತ್ತು. ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ. ಭಾವನೆ ಇತ್ತು. ಆಗಿನ ಸಮಯಕ್ಕೆ ಇದು ಒಂದೊಳ್ಳೆ ದೃಶ್ಯದ ಉಡುಗೊರೆಯಾಗಿತ್ತು''
ಪಾತ್ರಗಳು ಮರೆಯಲಾಗುವುದಿಲ್ಲ
''ಚಿತ್ರದಲ್ಲಿದ್ದ ಎರಡು ಲವ್ ಸ್ಟೋರಿ ತುಂಬಾ ಚೆನ್ನಾಗಿತ್ತು. ಆ ಕಡೆ ಅಲಮೇಲು, ಈ ಕಡೆ ಕ್ರಿಶ್ವಿಯನ್ ಹುಡುಗಿ ಜೊತೆ ಮತ್ತೊಂದು ಲವ್. ಚಾಮಯ್ಯ ಮೇಷ್ಟ್ರು, ಶಿವರಾಂ ಅವರು ಅಲಮೇಲು ಅಣ್ಣನ ಪಾತ್ರ, ಲೀಲಾವತಿ ಅವರ ಅಭಿನಯ, ಅಂಬರೀಶ್ ಅವರ ಜಲೀಲಾ ಪಾತ್ರ ಎಲ್ಲವೂ ಅಮೋಘ. ಅದಕ್ಕೆ ಇದನ್ನ ಕಲ್ಟ್ ಸಿನಿಮಾ ಎನ್ನೋದು''
''ಕಲಿಯುಗ ಇರುವವರೆಗೆ ನಾಗರಹಾವು ಸಿನಿಮಾ ಇರುತ್ತದೆ'' - ಭಾರತಿ ವಿಷ್ಣುವರ್ಧನ್
ಒಂದಕ್ಕಿಂತ ಒಂದು ವಿಶೇಷ
''ಎಲ್ಲ ಹಾಡುಗಳು ಸೂಪರ್ ಆಗಿದೆ. ಹಾವಿನ ದ್ವೇಷ, ಬಾರೇ ಬಾರೇ, ಕಥೆ ಹೇಳುವೆ ನನ್ನ ಕಥೆ ಹೇಳುವೆ...ಎಲ್ಲಾ ಚೆನ್ನಾಗಿದೆ. ಇನ್ನು ಸೀನ್ ಅಂದ್ರೆ ಕ್ಲೈಮ್ಯಾಕ್ಸ. ನಾನು ಸಿನಿಮಾ ನೋಡಿ ಬಹುತೇಕ 30 ವರ್ಷ ಆಯಿತು. ಈಗಲೂ ಆ ಸಿನಿಮಾದ ದೃಶ್ಯಗಳು ಕಣ್ಮುಂದೆ ಬರುತ್ತೆ. ಚಿತ್ರದುರ್ಗದ ಇತಿಹಾಸ ಹೇಳುವ ಒಬ್ಬವ್ವನ ಹಾಡು ತುಂಬಾ ಅಟ್ರಾಕ್ಟ್ ಆಗಿದೆ.''
ಅಪ್ಪಾಜಿ ಕೂಡ ಇಷ್ಟಪಟ್ಟಿದ್ರು
''ನಾಗರಹಾವು ಬಗ್ಗೆ ಅಪ್ಪಾಜಿ ಅವರು ತುಂಬಾ ಮಾತಾಡಿದ್ದಾರೆ. ಇಂಡಸ್ಟ್ರಿಗೆ ಯಾರೇ ಬಂದ್ರು ತುಂಬಾ ಖುಷಿ ಪಡ್ತಿದ್ರು. ಅವರಿಬ್ಬರ ಬಾಂಧವ್ಯ ಚೆನ್ನಾಗಿತ್ತು. ಅದಕ್ಕೆ ಅವರಿಬ್ಬರು ಗಂಧದಗುಡಿ ಸಿನಿಮಾ ಮಾಡಿದ್ದು. ಆಗಿನ ಕಲಾವಿದರ ಮಧ್ಯೆ ಇದ್ದ ಸಂಬಂಧ ಸೂಪರ್ ಬಿಡಿ. ಪ್ರತಿಯೊಬ್ಬರು ಇನ್ನೊಬ್ಬರ ಸಿನಿಮಾ ನೋಡಿ ಮೆಚ್ಚಿಕೊಳ್ತಿದ್ರು. ಎಲ್ಲರೂ ಫ್ಯಾಮಿಲಿ ರೀತಿ ಇರ್ತಿದ್ರು''.
'ನಾಗರಹಾವು' ಚಿತ್ರಕ್ಕಾಗಿ ವಿಷ್ಣು ಅಭಿಮಾನಿಗಳು ಮಾಡ್ತಿರೋ ಒಳ್ಳೆ ಕೆಲಸ
ಅದಕ್ಕಿಂತ ಹೆಚ್ಚು ಕಿಕ್ ಈಗಿದೆ
''ಮೊದಲನೇ ಸಿನಿಮಾನೇ ಕಲ್ಟ್ ಸಿನಿಮಾ. ಎಲ್ಲರಿಗೂ ಸಿಗಲ್ಲ ಈ ಅದೃಷ್ಟ. ವಿಷ್ಣು ಸರ್ ಗೆ ಸಿಕ್ಕಿದೆ. ಆಗಿನ ಕಾಲದಲ್ಲೇ ಈ ಸಿನಿಮಾ ಎಷ್ಟು ಫಾರ್ವಡ್ ಆಗಿ ಮಾಡಿದ್ರು. ಈವಾಗ ಬರ್ತಿದೆ ಅಂದ್ರೆ ಈಗಿನವರು ಅಷ್ಟೇ ಕಿಕ್ ಕೊಡುತ್ತೆ. ನಾನು ಕಾಯ್ತಿದ್ದೀನಿ ಬಿಗ್ ಸ್ಕ್ರೀನ್ ನಲ್ಲಿ ನೋಡೋದಕ್ಕೆ. ನಾಗರಹಾವು ಈಗಲೂ ಅಷ್ಟೇ ಕ್ರೇಜ್ ಹುಟ್ಟುಹಾಕುತ್ತೆ.''