Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಲಗೂರಿನ ಬೆಣ್ಣೆ ದೋಸೆ ಸವಿದ ಸೆಂಚುರಿ ಸ್ಟಾರ್ ಶಿವಣ್ಣ
Recommended Video
ಹಲಗೂರಿನ ಬೆಣ್ಣೆ ದೋಸೆ ಅಂದ್ರೆ ಮಳವಳ್ಳಿ ಸುತ್ತಮುತ್ತ ಬಹಳ ಫೇಮಸ್. ಹಲಗೂರಿನಲ್ಲಿ ಖ್ಯಾತಿ ಹೊಂದಿರುವ ಬಾಬು ಅವರ ಶೆಡ್ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿನ್ನುವ ಮೂಲಕ ಶಿವರಾಜ್ ಕುಮಾರ್ ಗಮನ ಸೆಳೆದಿದ್ದಾರೆ.
ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ಆಗಿರುವ ಹ್ಯಾಟ್ರಿಕ್ ಹೀರೋ ಸಾಮಾನ್ಯ ವ್ಯಕ್ತಿಯಿಂದ ಶೆಡ್ ಹೋಟೆಲ್ ನಲ್ಲಿ ದೋಸೆ ತಿಂದಿರುವುದು ಶಿವಣ್ಣ ಸರಳತೆ ಏನು ಎಂಬುದನ್ನ ತೋರಿಸುತ್ತದೆ. ಹಲಗೂರಿನ ದೋಸೆ ಅಂಗಡಿಯಲ್ಲಿ ನಿರ್ದೇಶಕ ರಘುರಾಮ್ ಮತ್ತು ಶಿವಣ್ಣನ ಆತ್ಮೀಯ ಸ್ನೇಹಿತ ನಟ ಗುರುರಾಜ್, ಕೆಪಿ ಶ್ರೀಕಾಂತ್ ಸಾಥ್ ನೀಡಿದ್ದಾರೆ.
ಅಣ್ಣಾವ್ರ ಮಗ ಶಿವಣ್ಣನ ಸರಳತೆಗೆ ಈ ಫೋಟೋ ಸಾಕ್ಷಿ.!
ಶಿವರಾಜ್ ಕುಮಾರ್ ಅವರಿಗೆ ದೋಸೆ ಅಂದ್ರೆ ಹೆಚ್ಚು ಇಷ್ಟ. ಇದಕ್ಕೆ ಮುಂಚೆ ದಾವಣಗೆರೆಯ ಹೋಟೆಲ್ ವೊಂದರಲ್ಲಿ ಸ್ವತಃ ತಾವೇ ಬೆಣ್ಣೆ ದೋಸೆ ಮಾಡಿದ್ದರು. ಆ ಫೋಟೋ ಬಹಳ ವೈರಲ್ ಆಗಿತ್ತು. ಈಗ ಸಾಮಾನ್ಯ ವ್ಯಕ್ತಿಯಂತೆ ಶೆಡ್ ಹೋಟೆಲ್ ನಲ್ಲಿ ದೋಸೆ ತಿನ್ನುವ ಮೂಲಕ ಗಮನ ಸೆಳೆದಿದ್ದಾರೆ.
ಅಂದ್ಹಾಗೆ, ನಟ ಶಿವರಾಜ್ ಕುಮಾರ್ ಅವರು ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನದ ಬಳಿಕ ಅನ್ನ ದಾಸೋಹ ಭವನಕ್ಕೆ ಭೇಡಿ ದೇಣಿಗೆ ನೀಡಿದ್ದರು.
ಸರ್ಜರಿ ನಂತರ ಚಿತ್ರೀಕರಣಕ್ಕೆ ಸಜ್ಜಾದ ಶಿವರಾಜ್ ಕುಮಾರ್
ಇದಕ್ಕೂ ಮುಂಚೆ ಮುತ್ತತ್ತಿಗೂ ಕರುನಾಡ ಚಕ್ರವರ್ತಿ ಭೇಟಿ ಮಾಡಿದ್ದರು. ಆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಲಗೂರಿನ ಬಳಿ ಬಾಬು ಶೆಡ್ ಹೋಟೆಲ್ ಬಳಿ ನಿಲ್ಲಿಸಿ ದೋಸೆ ಸವಿದಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.
ಭುಜದ ಸಮಸ್ಯೆಯಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಲಂಡನ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗಿದ್ದರು. ಇದೀಗ, ಮತ್ತೆ ಚಿತ್ರೀಕರಣಕ್ಕೆ ಮರಳಲು ಸಜ್ಜಾಗಿದ್ದಾರೆ.
ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನ ಶಿವಣ್ಣ ಕೈಗೆತ್ತಿಕೊಂಡಿದ್ದಾರೆ. ದ್ರೋಣ ಮತ್ತು ಆಯುಷ್ಮಾನ್ ಭವ ಚಿತ್ರಗಳ ಶೂಟಿಂಗ್ ಬಹುತೇಕ ಮುಗಿದಿದೆ. ಜೊತೆಗೆ ಎಸ್.ಆರ್.ಕೆ ಚಿತ್ರವನ್ನ ಕೂಡ ಆರಂಭಿಸಲಿದ್ದಾರೆ.