Don't Miss!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
ನಿನ್ನೆ ( ಫೆಬ್ರವರಿ 3 ) ಕ್ರಾಂತಿ ಚಿತ್ರತಂಡ ತಮ್ಮ ಚಿತ್ರ ಗೆದ್ದಿದೆ ಎಂದು ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿತು. ಹೌದು, ಕಳೆದ ವಾರದ ಗುರುವಾರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ನ ಎರಡನೇ ಚಿತ್ರ ಕ್ರಾಂತಿ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಹ ನೂರು ಕೋಟಿ ಕ್ಲಬ್ ಸೇರಿದೆ.
ಚಿತ್ರಮಂದಿರದ ಗಳಿಕೆ, ಡಿಜಿಟಲ್ ಹಕ್ಕು ಮಾರಾಟವಾದ ಮೊತ್ತ ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟವಾದ ಮೊತ್ತ ಎಲ್ಲವನ್ನೂ ಸೇರಿಸಿ ಕ್ರಾಂತಿ ಚಿತ್ರ ನೂರು ಕೋಟಿಯನ್ನು ಗಳಿಸಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಎಲ್ಲೆಡೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ದರ್ಶನ್ ಅವರನ್ನೂ ಸಹ ಭೇಟಿಯಾದ ಅಭಿಮಾನಿಗಳು ನೆಚ್ಚಿನ ನಟನಿಗೆ ಹಾರ ಹಾಕಿ ಸನ್ಮಾನಿಸಿ, ದರ್ಶನ್ ಕೈನಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.
ಅಭಿಮಾನಿಗಳು ಮಾತ್ರವಲ್ಲದೇ ಕ್ರಾಂತಿ ಚಿತ್ರತಂಡ ಸಹ ಸಕ್ಸಸ್ ಮೀಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಚಿತ್ರದ ಯಶಸ್ಸನ್ನು ಆಚರಿಸಿತು ಹಾಗೂ ಚಿತ್ರದ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿತು. ಹೀಗೆ ನಿನ್ನೆ ಕ್ರಾಂತಿ ಚಿತ್ರತಂಡ ಒಂದೆಡೆ ಕೇಕ್ ಕತ್ತರಿಸಿ ಚಿತ್ರ ಗೆದ್ದದ್ದರ ಸಂಭ್ರಮಾಚರಣೆ ಮಾಡಿದರೆ, ಮತ್ತೊಂದೆಡೆ ಶಿವ ರಾಜ್ಕುಮಾರ್ ತಮ್ಮ ಆಪ್ತ ಕಿಚ್ಚ ಸುದೀಪ್ ಅವರ ಸಿನಿ ಜರ್ನಿಯ ಮೈಲಿಗಲ್ಲನ್ನು ಇದೇ ರೀತಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದು, ಈ ಸಂಭ್ರಮಾಚರಣೆಗಳು ನಿನ್ನೆಯ ವೈರಲ್ ವಿಡಿಯೊಗಳಾಗಿವೆ.
ಕಿಚ್ಚನ 27 ವರ್ಷಗಳ ಸಿನಿ ಜರ್ನಿಗೆ ಕೇಕ್ ಸಂಭ್ರಮಾಚರಣೆ
ನಟ ಕಿಚ್ಚ ಸುದೀಪ್ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು 27 ವರ್ಷಗಳು ತುಂಬಿವೆ. 1997ರಲ್ಲಿ ಬಿಡುಗಡೆಗೊಂಡಿದ್ದ ತಾಯವ್ವ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿದ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ರಾಮು ಎಂಬ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ತೆರೆಕಂಡು ಜನವರಿ 31ಕ್ಕೆ 27 ವರ್ಷಗಳು ಸಂದಿದ್ದು, ಈ ವಿಶೇಷ ಮೈಲಿಗಲ್ಲನ್ನು ಶಿವ ರಾಜ್ಕುಮಾರ್ ಕೇಕ್ ಕತ್ತರಿಸುವ ಮೂಲಕ ಸುದೀಪ್ ಜತೆ ಆಚರಿಸಿದ್ದಾರೆ. ಪ್ರಸ್ತುತ ಕೆಸಿಸಿ ಪಂದ್ಯಾವಳಿಗಾಗಿ ಅಭ್ಯಾಸ ನಡೆಸುತ್ತಿರುವ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಇದೇ ಸಮಯದಲ್ಲಿ ಈ ವಿಶೇಷ ಆಚರಣೆಯನ್ನು ಮಾಡಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಗೀತಾ ಶಿವರಾಜ್ಕುಮಾರ್, ಗಣೇಶ್, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕೇಕ್ ತಿನ್ನಿಸಿ ಆಶೀರ್ವಾದ ಪಡೆದ ಕಿಚ್ಚ
ಈ ಸಮಾರಂಭದಲ್ಲಿ ಕೇಕ್ ಕತ್ತರಿಸಿ, ಶಿವ ರಾಜ್ಕುಮಾರ್ ಹಾಗೂ ಗೀತಾ ಶಿವ ರಾಜ್ಕುಮಾರ್ ಅವರಿಗೆ ತಿನ್ನಿಸಿದ ಕಿಚ್ಚ ಸುದೀಪ್ ಗೀತಾ ಶಿವ ರಾಜ್ಕುಮಾರ್ ಅವರ ಕಾಲು ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದಾರೆ ಹಾಗೂ ಶಿವ ರಾಜ್ಕುಮಾರ್ ಅವರನ್ನು ಅಪ್ಪಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಿವ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಬಾಂಧವ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.
ಎರಡನೇ ವಾರಕ್ಕೆ ಕಾಲಿಟ್ಟ ಕ್ರಾಂತಿ
ಇತ್ತ ಕ್ರಾಂತಿ ಚಿತ್ರ ಮೊದಲ ವಾರದ ಓಟವನ್ನು ಪೂರೈಸಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರತಂಡ ಚಿತ್ರ ಗೆದ್ದಿದೆ ಎಂದು ಸಕ್ಸಸ್ ಮೀಟ್ ಅನ್ನೂ ಸಹ ಆಯೋಜಿಸಿದ್ದು, ಎಲ್ಲಾ ಹಕ್ಕುಗಳ ಮಾರಾಟ ಹಾಗೂ ಕಲೆಕ್ಷನ್ನಿಂದಾಗಿ ಚಿತ್ರ ನೂರು ಕೋಟಿ ಕ್ಲಬ್ ಸಹ ಸೇರಿದೆ. ಈ ಮೂಲಕ ಯಜಮಾನ ಬಳಿಕ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ನ ಮತ್ತೊಂದು ಚಿತ್ರ ಹಿಟ್ಲಿಸ್ಟ್ ಸೇರಿದೆ.