Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಹೆಜ್ಜೆಯನ್ನು ಹಿಂಬಾಲಿಸಿದ ಅಭಿಮಾನಿಗಳು
ತಮ್ಮ ನೆಚ್ಚಿನ ತಾರೆಯರ ಜೀವನ ಶೈಲಿಯನ್ನು ಸ್ಫೂರ್ತಿಯಾಗಿಸಿಕೊಂಡು ಸಾಗುತ್ತಿರುವ ಅಭಿಮಾನಿಗಳು ಹೆಚ್ಚಿದ್ದಾರೆ. ಸಮಾಜಕ್ಕೆ ಒಳ್ಳೆಯದು ಎನಿಸುವ ಕೆಲಸಗಳನ್ನು ನಟರು ಮಾಡಿದಾಗ ಅವರ ಅಭಿಮಾನಿಗಳು ಸಹ ಅದನ್ನು ಫಾಲೋ ಮಾಡ್ತಾರೆ. ಅದಕ್ಕೆ ತಾಜಾ ಉದಾಹರಣೆ ಶಿವರಾಜ್ ಕುಮಾರ್ ಅಭಿಮಾನಿಗಳು.
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಳೆದ ತಿಂಗಳು ಮೈಸೂರು ಮೃಗಾಯಲದಿಂದ ಪಾರ್ವತಿ ಎಂಬ ಆನೆಯನ್ನು ದತ್ತು ಪಡೆದುಕೊಂಡಿದ್ದರು. ಶಿವಣ್ಣನ ಈ ಕೆಲಸ ಅಭಿಮಾನಿ ವಲಯದಲ್ಲಿ ಭಾರಿ ಪ್ರಶಂಸೆಗೆ ಕಾರಣವಾಗಿತ್ತು. ಇದೀಗ, ಶಿವಣ್ಣನ ಸ್ಫೂರ್ತಿಯಿಂದ ಅಭಿಮಾನಿಗಳು ಸುಮಾರು 35 ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಮುಂದೆ ಓದಿ....
ಗಣೇಶ ಹಬ್ಬದಂದು 'ಪಾರ್ವತಿ' ದತ್ತು ಪಡೆದ ನಟ ಶಿವರಾಜ್ ಕುಮಾರ್
ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಅಭಿಮಾನಿ ಸಂಘ 89000 ರೂಪಾಯಿಗಳನ್ನು ಪಾವತಿಸಿ ಮೈಸೂರು ಮೃಗಾಲಯದ ನವಿಲು, ರೀಸಸ್ ಮೆಕಾಕ್, ಮ್ಯಾಂಡರಿನ್ ಡಕ್, ನಾಲ್ಕು ಕೊಂಬಿನ ಜಿಂಕೆ ಸೇರಿದಂತೆ ಇತರೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಮೃಗಾಯಲದಿಂದ ಶ್ಲಾಘನೆ
ಒಂದು ವರ್ಷದ ಅವಧಿಗೆ ದಿನಾಂಕ 6 ಸೆಪ್ಟೆಂಬರ್ 2020 ರಿಂದ 5 ಸೆಪ್ಟೆಂಬರ್ 2020 ರವರೆಗೂ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಈ ಬಗ್ಗೆ ಮೃಗಾಲಯ ಅಧಿಕೃರವಾಗಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಾಣಿ ಸಂರಕ್ಷಣೆ ಕಾರ್ಯಕ್ಕ ಕೈ ಜೋಡಿಸಿದವರಿಗೆ ಮೃಗಾಯಲ ಆಡಳಿತ ಮಂಡಳಿ ಹೃದಯಪೂರ್ವಕ ಧನ್ಯವಾದ ತಿಳಿಸಿದೆ.
ಪಾರ್ವತಿ ಆನೆ ದತ್ತು ಪಡೆದಿದ್ದ ಶಿವಣ್ಣ
20/08/2020 ರಿಂದ 19/08/2021 ರವರೆಗೆ "ಪಾರ್ವತಿ" ಎಂಬ ಆನೆ ಮರಿಯನ್ನು 75,000 ರೂ ಪಾವತಿಸಿ ನಟ ಶಿವರಾಜ್ ಕುಮಾರ್ ದತ್ತು ಪಡೆದಿದ್ದರು. ಮೈಸೂರು ಮೃಗಾಲಯ ಮತ್ತು ಕರ್ನಾಟಕದ ಮೃಗಾಲಯ ಪ್ರಾಧಿಕಾರ ಡಾ.ಶಿವರಾಜ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿತ್ತು. ಈಗ ಅವರ ಅಭಿಮಾನಿಗಳು ಇದೇ ನಡೆಯನ್ನು ಅನುಸರಿಸಿದ್ದು ವಿಶೇಷವೆನಿಸಿಕೊಂಡಿದೆ.
ಚಿರತೆ ದತ್ತು ಪಡೆದ ಧನ್ವೀರ್
'ಬಜಾರ್' ಚಿತ್ರದ ನಾಯಕ ಧನ್ವೀರ್ ಅವರ ಸಹ ಮೈಸೂರು ಮೃಗಾಲಯದಿಂದ ಕರಿ ಚಿರತೆಯನ್ನು ದತ್ತು ಪಡೆದಿದ್ದಾರೆ. ಒಂದು ವರ್ಷದ ಅವಧಿಗೆ 35 ಸಾವಿರ ರೂಪಾಯಿ ನೀಡಿ ದತ್ತು ಪಡೆದಿದ್ದಾರೆ. ಧನ್ವೀರ್ ಅವರ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.