ಶಿವಣ್ಣನ ಸಿನಿಮಾಗೆ ಹಣ ಹಾಕಲು ಬಂದ 'ವಿಶ್ವಾಸಂ' ನಿರ್ಮಾಪಕ

ಶಿವರಾಜ್ ಕುಮಾರ್ ಎಂದಿನಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ಅವರ ಹೊಸದೊಂದು ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ 'ವಿಶ್ವಾಸಂ' ನಿರ್ಮಾಪಕರು ಬಂಡವಾಳ ಹಾಕುತ್ತಿದ್ದಾರೆ.

ಸತ್ಯ ಜ್ಯೋತಿ ಫಿಲ್ಮ್ಸ್ ಶಿವರಾಜ್ ಕುಮಾರ್ ಗಾಗಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೆಲ ತಿಂಗಳ ಹಿಂದೆ ಬಂದಿತ್ತು. ಆ ಸುದ್ದಿ ಇದೀಗ ಅಧಿಕೃತವಾಗಿದೆ. ನಿರ್ಮಾಣ ಸಂಸ್ಥೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.

ಇತ್ತೀಚಿಗಷ್ಟೆ ಧನುಷ್ ಅಭಿನಯದ 'ಪಟ್ಟಾಸ್' ಸಿನಿಮಾವನ್ನು ಸತ್ಯ ಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಅದಕ್ಕೂ ಹಿಂದೆ 'ವಿಶ್ವಾಸಂ', 'ವಿವೇಗಂ', 'ಸತ್ರಿಯಾನ್', 'ತೋದರಿ' ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿತ್ತು.

Shiva Rajkumar New Movie Will Be Produced By Sathya Jyothi Films

ಅಂದಹಾಗೆ, ಶಿವರಾಜ್ ಕುಮಾರ್ ಅವರ ಈ ಹೊಸ ಸಿನಿಮಾವನ್ನು ತಮಿಳು ನಿರ್ದೇಶಕ ರವಿ ಅರಸು ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ರವಿ ಅರಸು 'ಐನಾಗಾರನ್' ಹಾಗೂ 'ಎಟ್ಟಿ' ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಈ ಸಿನಿಮಾದ ತಾರಬಳಗ, ತಾಂತ್ರಿಕ ವರ್ಗ ಹಾಗೂ ಉಳಿದ ಮಾಹಿತಿಯನ್ನು ಸದ್ಯದಲ್ಲಿಯೇ ಚಿತ್ರತಂಡ ಹಂಚಿಕೊಳ್ಳಲಿದೆಯಂತೆ.

ಅಂದಹಾಗೆ, ಶಿವಾರಾಜ್ ಕುಮಾರ್ ಸದ್ಯ 'ದ್ರೋಣ', 'ಭಜರಂಗಿ 2' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Actor Shiva Rajkumar new movie will be produced by Sathya Jyothi films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X