Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾ ರಾಜ್ ಹುಟ್ಟುಹಬ್ಬಕ್ಕೆ 'ರುಸ್ತುಂ' ಲುಕ್: ಈ ಗೆಟಪ್ ನಲ್ಲಿ ಒಂದು ವಿಶೇಷವಿದೆ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಲಿರುವ 'ರುಸ್ತುಂ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಈ ಮೊದಲೇ ತಿಳಸಿದಂತೆ ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು 'ರುಸ್ತುಂ' ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿತ್ತು. ಇದೀಗ, ಅಣ್ಣಾವ್ರ ಜನುಮದಿನದಂದು ಶಿವಣ್ಣನ ಗೆಟಪ್ ರಿವಿಲ್ ಆಗಿದ್ದು, ರಾಜ್ ಕುಟುಂಬದ ಭಕ್ತರಿಗೆ ಡಬಲ್ ಧಮಾಕ.
'ರುಸ್ತುಂ' ಶಿವಣ್ಣನಿಗೆ ಖಡಕ್ ಖಳನಾಯಕ ಯಾರಾಗಬಹುದು.?
ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ಶಿವಣ್ಣನ ಸ್ಟೈಲಿಶ್ ಫೋಟೋಶೂಟ್ ಮಾಡಿರುವುದು ಛಾಯಾಗ್ರಾಹಕ ಮಹೇನ್ ಸಿಂಹ. ಈ ಹಿಂದೆ 'ಟಗರು' ಚಿತ್ರದ ಫೋಟೋಶೂಟ್ ಮಾಡಿದ್ದು ಕೂಡ ಇವರೇ.
ಅಂದ್ಹಾಗೆ, ಈ ಚಿತ್ರದಲ್ಲಿ ಶಿವಣ್ಣ ಅವರದ್ದೇನು ಅಂತಹ ವಿಶೇಷ ಪಾತ್ರ ಅಥವಾ ಗೆಟಪ್ ಅಂತ ನೋಡೋದಾದರೇ, ಪೊಲೀಸ್ ಅನ್ನೋದು ಕಾಮನ್. ಈಗಾಗಲೇ ಹಲವು ಚಿತ್ರಗಳಲ್ಲಿ ಶಿವಣ್ಣನನ್ನ ಪೊಲೀಸ್ ಆಗಿ ನೋಡಿ ಆಗಿದೆ. ಈ ಹಿಂದೆ ತೆರೆಕಂಡಿದ್ದ 'ಟಗರು' ಚಿತ್ರದಲ್ಲಿ ಸೆಂಚುರಿಸ್ಟಾರ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು.
14 ವರ್ಷದ ನಂತರ ಹೊಸ ಅವತಾರದಲ್ಲಿ ಶಿವರಾಜ್ ಕುಮಾರ್
ಅದನ್ನ ಹೊರತು ಪಡಿಸಿದ್ರೆ, ಶಿವಣ್ಣನ ಮೀಸೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಶಿವಣ್ಣ ದೊಡ್ಡದಾಗಿ ಮೀಸೆ ಬಿಡಲ್ಲ. ಟ್ರಿಮ್ ಮಾಡಿ ಸಣ್ಣ ಮೀಸೆಯಲ್ಲೇ ಹೆಚ್ಚು ಕಾಣಿಸಿಕೊಂಡಿರುವುದು. ಆದ್ರೀಗ, ತುಂಬ ದಿನಗಳ ನಂತರ ದಪ್ಪ ಮೀಸೆಯಲ್ಲಿ ಶಿವಣ್ಣ ಎಂಟ್ರಿ ಕೊಟ್ಟಿರುವುದು ವಿಶೇಷ. ಇದೊಂದು ರೀತಿಯಲ್ಲಿ ಶಿವಣ್ಣ, ರಾಜ್ ಕುಮಾರ್ ಅವರಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನುಳಿದಂತೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಮೂರು ಜನ ಖ್ಯಾತ ಖಳನಟರು ನಟಿಸಲಿದ್ದಾರಂತೆ. ಜೊತೆಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದು, ಪ್ರಮುಖ ಪಾತ್ರದಲ್ಲಿ ಮಯೂರಿ ಕೂಡ ಅಭಿನಯಿಸಲಿದ್ದಾರೆ.