Don't Miss!
- Finance ಆಧಾರ್ ಉಚಿತ ಅಪ್ಡೇಟ್ ದಿನಾಂಕ ಜೂ.14ರವರೆಗೆ ವಿಸ್ತರಣೆ: ಆನ್ಲೈನ್ನಲ್ಲಿ ಹೀಗೆ ನವೀಕರಿಸಿ
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- News 7th Pay Commission : ಸರ್ಕಾರಕ್ಕೆ ಸಲ್ಲಿಸಲಾಗಿರುವ ಏಳನೇ ವೇತನ ಆಯೋಗದ ವರದಿಯಲ್ಲಿರುವ ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ
- Sports IPL 2024: ಮುಂಬೈ ನಾಯಕನಿಗೆ ಪತ್ರಕರ್ತರಿಂದ ಬೌನ್ಸರ್: ಉತ್ತರಿಸದೆ ಮೌನಕ್ಕೆ ಶರಣಾದ ಹಾರ್ದಿಕ್ ಪಾಂಡ್ಯ
- Technology Best Coolers: ಭಾರತದಲ್ಲಿ 5 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇರುವ ಅತ್ಯುತ್ತಮ ಕೂಲರ್ಗಳು! ಫೀಚರ್ಸ್ ಏನಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೇದು ಬಿಡಿ, ಶಿವಣ್ಣ ಕೈಯಲ್ಲಿರೋ ಹೊಸ ಚಿತ್ರಗಳ ಪಟ್ಟಿ ನೋಡಿ
Recommended Video
ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್, ಕರುನಾಡು ಚಕ್ರವರ್ತಿ ಸ್ವಲ್ಪನೂ ವಿರಾಮವೇ ಇಲ್ಲದೇ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಒಂದು ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮತ್ತೊಂದು ಸಿನಿಮಾ ಟೇಕ್ ಆನ್ ಮಾಡುವ ಶಿವಣ್ಣ ಮತ್ತಷ್ಟು ಹೊಸ ಚಿತ್ರಗಳಿಗೆ ಅಸ್ತು ಎಂದಿದ್ದಾರೆ.
ಈಗ ಕೈಯಲ್ಲಿರೋ ಚಿತ್ರಗಳಿಗೆ ಕಾಲ್ ಶೀಟ್ ಹೇಗೆ ಕೊಡ್ತಾರೆ ಎಂಬ ಕುತೂಹಲ ಅವರ ಆಪ್ತರು, ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೀಗುರುವಾಗ ಹೊಸ ಹೊಸ ಸಿನಿಮಾಗಳನ್ನ ಘೋಷಣೆ ಮಾಡ್ತಾನೆ ಇದ್ದಾರೆ. ಹಾಗಿದ್ರೆ, ಶಿವರಾಜ್ ಕುಮಾರ್ ಈಗ ಮಾಡುತ್ತಿರುವ ಸಿನಿಮಾಗಳನ್ನ ಬಿಟ್ಟು ಹೊಸದಾಗಿ ಯಾವ ಪ್ರಾಜೆಕ್ಟ್ ಗೆ ಜೈ ಎಂದಿದ್ದಾರೆ ಎಂಬುದರ ಪಟ್ಟಿ ಮುಂದೆ ಓದಿ.....
ದ್ವಾರಕೀಶ್ ಬ್ಯಾನರ್ ನಲ್ಲೊಂದು ಚಿತ್ರ
ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ.ವಾಸು ಈ ಸಿನಿಮಾವನ್ನ ಡೈರೆಕ್ಟ್ ಮಾಡಲಿದ್ದಾರೆ.
ಭಟ್ ಜೊತೆ ಸಿನಿಮಾ
ನಿರ್ದೇಶಕ ಯೋಗರಾಜ್ ಭಟ್ ಅವರ ಜೊತೆ ಶಿವಣ್ಣ ಒಂದು ಸಿನಿಮಾ ಮಾಡಲಿ ಅಥವಾ ಮಾಡ್ತಾರೆ ಎನ್ನುತ್ತಿದ್ದವರಿಗೆ ಗುಡ್ ನ್ಯೂಸ್. ನಿರೀಕ್ಷೆಯಂತೆ ಇವರಿಬ್ಬರ ಜೋಡಿಯಲ್ಲಿ ಸಿನಿಮಾ ಅನೌನ್ಸ್ ಆಗಿದೆ. ಭಾಸ್ಕರ್ ರಾಶಿ ನಿರ್ಮಾಣದಲ್ಲಿ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ ಆಗಸ್ಟ್ 1ಕ್ಕೆ ಲಾಂಚ್ ಆಗುತ್ತಿದೆ. ಭಟ್ಟರ ಜೊತೆ ಇದು ಶಿವಣ್ಣಂಗೆ ಮೊದಲ ಸಿನಿಮಾ.
ಮಾಸ್ ಕಿಂಗ್ ಶಿವಣ್ಣನಿಗೆ ಯೋಗರಾಜ್ ಭಟ್ ಹೊಸ ಸಿನಿಮಾ.!
ನಾಗಾಭರಣ ಸಿನಿಮಾ
'ಜನುಮದ ಜೋಡಿ', 'ಚಿಗುರಿದ ಕನಸು' ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ನಾಗಾಭರಣ ಅವರ ಜೊತೆ ಮತ್ತೊಂದು ಚಿತ್ರವನ್ನ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನ ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಲಿದ್ದಾರೆ. ಇದು ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ.
ಮತ್ತೆ ಒಂದಾದ ಶಿವಣ್ಣ - ಟಿ.ಎಸ್.ನಾಗಾಭರಣ ಜೋಡಿ
ರಥಾವರ ನಿರ್ದೇಶಕನ ಸಿನಿಮಾ
'ರಥಾವರ' ಸಿನಿಮಾ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಜೈ ಎಂದಿದ್ದಾರೆ. ಈ ಚಿತ್ರಕ್ಕೆ ವೈರಮುಡಿ ಎಂದು ಟೈಟಲ್ ಇಟ್ಟಿದ್ದು ಬಿ.ಎನ್.ಸ್ವಾಮಿ ಎಂಬುವರು ಈ ಸಿನಿಮಾ ಮಾಡ್ತಿದ್ದಾರೆ.
ಶಿವಣ್ಣ ಹುಟ್ಟುಹಬ್ಬಕ್ಕೆ ಚಿತ್ರರಂಗ ಕೊಟ್ಟ ಉಡುಗೊರೆ
ಶೂಟಿಂಗ್ ನಡೆಯುತ್ತಿರುವ ಚಿತ್ರಗಳು
ಇದಲ್ಲದೇ, ಪ್ರೇಮ್ ನಿರ್ದೇಶನ 'ದಿ ವಿಲನ್' ಮುಗಿದಿದೆ, 'ಕವಚ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ಜೊತೆ 'ರುಸ್ತುಂ' ಸಿನಿಮಾ ಮಾಡ್ತಿದ್ದಾರೆ. ಈ ಮಧ್ಯೆ ಲಕ್ಕಿ ಗೋಪಾಲ್ ನಿರ್ದೇಶನದ ಎಸ್.ಆರ್.ಕೆ, ಸೂರಿ ಜೊತೆ 'ಟಗರು 2' ಹಾಗೂ 'ದ್ರೋಣ' ಎಂಬ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.