Don't Miss!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Automobiles ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳೇದು ಬಿಡಿ, ಶಿವಣ್ಣ ಕೈಯಲ್ಲಿರೋ ಹೊಸ ಚಿತ್ರಗಳ ಪಟ್ಟಿ ನೋಡಿ
Recommended Video
ಹ್ಯಾಟ್ರಿಕ್ ಹೀರೋ, ಸೆಂಚುರಿಸ್ಟಾರ್, ಕರುನಾಡು ಚಕ್ರವರ್ತಿ ಸ್ವಲ್ಪನೂ ವಿರಾಮವೇ ಇಲ್ಲದೇ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಒಂದು ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಮತ್ತೊಂದು ಸಿನಿಮಾ ಟೇಕ್ ಆನ್ ಮಾಡುವ ಶಿವಣ್ಣ ಮತ್ತಷ್ಟು ಹೊಸ ಚಿತ್ರಗಳಿಗೆ ಅಸ್ತು ಎಂದಿದ್ದಾರೆ.
ಈಗ ಕೈಯಲ್ಲಿರೋ ಚಿತ್ರಗಳಿಗೆ ಕಾಲ್ ಶೀಟ್ ಹೇಗೆ ಕೊಡ್ತಾರೆ ಎಂಬ ಕುತೂಹಲ ಅವರ ಆಪ್ತರು, ಅಭಿಮಾನಿಗಳಲ್ಲಿ ಕಾಡುತ್ತಿದೆ. ಹೀಗುರುವಾಗ ಹೊಸ ಹೊಸ ಸಿನಿಮಾಗಳನ್ನ ಘೋಷಣೆ ಮಾಡ್ತಾನೆ ಇದ್ದಾರೆ. ಹಾಗಿದ್ರೆ, ಶಿವರಾಜ್ ಕುಮಾರ್ ಈಗ ಮಾಡುತ್ತಿರುವ ಸಿನಿಮಾಗಳನ್ನ ಬಿಟ್ಟು ಹೊಸದಾಗಿ ಯಾವ ಪ್ರಾಜೆಕ್ಟ್ ಗೆ ಜೈ ಎಂದಿದ್ದಾರೆ ಎಂಬುದರ ಪಟ್ಟಿ ಮುಂದೆ ಓದಿ.....
ದ್ವಾರಕೀಶ್ ಬ್ಯಾನರ್ ನಲ್ಲೊಂದು ಚಿತ್ರ
ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಲಿರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪಿ.ವಾಸು ಈ ಸಿನಿಮಾವನ್ನ ಡೈರೆಕ್ಟ್ ಮಾಡಲಿದ್ದಾರೆ.
ಭಟ್ ಜೊತೆ ಸಿನಿಮಾ
ನಿರ್ದೇಶಕ ಯೋಗರಾಜ್ ಭಟ್ ಅವರ ಜೊತೆ ಶಿವಣ್ಣ ಒಂದು ಸಿನಿಮಾ ಮಾಡಲಿ ಅಥವಾ ಮಾಡ್ತಾರೆ ಎನ್ನುತ್ತಿದ್ದವರಿಗೆ ಗುಡ್ ನ್ಯೂಸ್. ನಿರೀಕ್ಷೆಯಂತೆ ಇವರಿಬ್ಬರ ಜೋಡಿಯಲ್ಲಿ ಸಿನಿಮಾ ಅನೌನ್ಸ್ ಆಗಿದೆ. ಭಾಸ್ಕರ್ ರಾಶಿ ನಿರ್ಮಾಣದಲ್ಲಿ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ ಆಗಸ್ಟ್ 1ಕ್ಕೆ ಲಾಂಚ್ ಆಗುತ್ತಿದೆ. ಭಟ್ಟರ ಜೊತೆ ಇದು ಶಿವಣ್ಣಂಗೆ ಮೊದಲ ಸಿನಿಮಾ.
ಮಾಸ್ ಕಿಂಗ್ ಶಿವಣ್ಣನಿಗೆ ಯೋಗರಾಜ್ ಭಟ್ ಹೊಸ ಸಿನಿಮಾ.!
ನಾಗಾಭರಣ ಸಿನಿಮಾ
'ಜನುಮದ ಜೋಡಿ', 'ಚಿಗುರಿದ ಕನಸು' ಅಂತಹ ಸೂಪರ್ ಹಿಟ್ ಸಿನಿಮಾ ನಿರ್ದೇಶಿಸಿದ್ದ ನಾಗಾಭರಣ ಅವರ ಜೊತೆ ಮತ್ತೊಂದು ಚಿತ್ರವನ್ನ ಶಿವಣ್ಣ ಒಪ್ಪಿಕೊಂಡಿದ್ದಾರೆ. ಈ ಚಿತ್ರವನ್ನ ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಲಿದ್ದಾರೆ. ಇದು ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ.
ಮತ್ತೆ ಒಂದಾದ ಶಿವಣ್ಣ - ಟಿ.ಎಸ್.ನಾಗಾಭರಣ ಜೋಡಿ
ರಥಾವರ ನಿರ್ದೇಶಕನ ಸಿನಿಮಾ
'ರಥಾವರ' ಸಿನಿಮಾ ಮಾಡಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾಗೆ ಹ್ಯಾಟ್ರಿಕ್ ಹೀರೋ ಜೈ ಎಂದಿದ್ದಾರೆ. ಈ ಚಿತ್ರಕ್ಕೆ ವೈರಮುಡಿ ಎಂದು ಟೈಟಲ್ ಇಟ್ಟಿದ್ದು ಬಿ.ಎನ್.ಸ್ವಾಮಿ ಎಂಬುವರು ಈ ಸಿನಿಮಾ ಮಾಡ್ತಿದ್ದಾರೆ.
ಶಿವಣ್ಣ ಹುಟ್ಟುಹಬ್ಬಕ್ಕೆ ಚಿತ್ರರಂಗ ಕೊಟ್ಟ ಉಡುಗೊರೆ
ಶೂಟಿಂಗ್ ನಡೆಯುತ್ತಿರುವ ಚಿತ್ರಗಳು
ಇದಲ್ಲದೇ, ಪ್ರೇಮ್ ನಿರ್ದೇಶನ 'ದಿ ವಿಲನ್' ಮುಗಿದಿದೆ, 'ಕವಚ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸಾಹಸ ನಿರ್ದೇಶಕ ರವಿವರ್ಮ ಜೊತೆ 'ರುಸ್ತುಂ' ಸಿನಿಮಾ ಮಾಡ್ತಿದ್ದಾರೆ. ಈ ಮಧ್ಯೆ ಲಕ್ಕಿ ಗೋಪಾಲ್ ನಿರ್ದೇಶನದ ಎಸ್.ಆರ್.ಕೆ, ಸೂರಿ ಜೊತೆ 'ಟಗರು 2' ಹಾಗೂ 'ದ್ರೋಣ' ಎಂಬ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.