ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ 'ಕರುನಾಡ ಚಕ್ರವರ್ತಿ'

By Bharath Kumar

Recommended Video

ಟಗರು ಟೀಸರ್ ಲಾಂಚ್ : ಅಭಿಮಾನಿಗಳ ಬಗ್ಗೆ ಮಾತನಾಡಿದ ಶಿವಣ್ಣ | Filmibeat Kannada

ಒಬ್ಬ ನಟ ಸ್ಟಾರ್ ಆಗಬೇಕಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅದಕ್ಕೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಅಂತಹ ನಟರು 'ಅಭಿಮಾನಿಗಳೇ ನಮ್ಮ ದೇವ್ರು', 'ಅಭಿಮಾನಿಗಳೇ ನಮ್ಮ ಪ್ರಾಣ' ಎನ್ನುತ್ತಿದ್ದರು.

ಈಗ ಇದೇ ಮಾತನ್ನ ಡಾ.ಶಿವರಾಜ್ ಕುಮಾರ್ ಹೇಳಿದ್ದಾರೆ. 'ಟಗರು' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಅಭಿಮಾನಿಗಳ ಅಭಿಮಾನಕ್ಕೆ ತಲೆ ಬಾಗಿದ್ದಾರೆ.

ಹಾಗಿದ್ರೆ, ಸ್ಯಾಂಡಲ್ ವುಡ್ ಅಭಿಮಾನಿಗಳ ಬಗ್ಗೆ ಶಿವಣ್ಣ ಏನಂದ್ರು? ನಟರು ಹೇಗಿರಬೇಕು ಎಂದು ಕಿವಿಮಾತು ಹೇಳಿದ್ರು ಎಂದು ಮುಂದೆ ಓದಿ.....

ಅಭಿಮಾನಿಗಳಿಗೋಸ್ಕರ ನಾವು

ಅಭಿಮಾನಿಗಳಿಗೋಸ್ಕರ ನಾವು

''ಅಭಿಮಾನಿಗಳಿಗೋಸ್ಕರ ನಾವು ಏನು ಬೇಕಾದ್ರೆ ಮಾಡುವುದಕ್ಕೆ ರೆಡಿಯಾಗಿದ್ದೀವಿ. ಅವರ ಪ್ರೋತ್ಸಾಹವೇ ನಾವು ಇಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಕಾರಣ'' - ಶಿವರಾಜ್ ಕುಮಾರ್, ನಟ

ಅಭಿಮಾನಿಗಳನ್ನ ಮರೆಯಬಾರದು

ಅಭಿಮಾನಿಗಳನ್ನ ಮರೆಯಬಾರದು

''ನಾವು ಮಾತ್ರವಲ್ಲ ಇಂಡಸ್ಟ್ರಿಯಲ್ಲಿರುವ ಎಲ್ಲರೂ ಅಷ್ಟೇ ಅಭಿಮಾನಿಗಳನ್ನ ಮರೆತರೇ ಅವರು ಗೋವಿಂದ. ಯಾವತ್ತು ಅವರನ್ನ ಮರೆಯಬಾರದು. ಸ್ನೇಹಿತರ ರೀತಿ ಇರಬೇಕು'' - ಶಿವರಾಜ್ ಕುಮಾರ್, ನಟ

ಅಭಿಮಾನಿಗಳು ಪ್ರೀತಿಯಿಂದ ಇರಬೇಕು

ಅಭಿಮಾನಿಗಳು ಪ್ರೀತಿಯಿಂದ ಇರಬೇಕು

''ಅಭಿಮಾನಿ ಕೂಡ ಅಷ್ಟೇ ಓವರ್ ಪವರ್ ಮಾಡೋಕೆ ಹೋಗಬಾರದು. ಪ್ರೀತಿಯಿಂದ ಇರಬೇಕು. ಪ್ರಮಾಣಿಕರಾಗಿರಬೇಕು. ತುಂಬ ಸ್ಟ್ರೈಟ್ ಫಾವಾರ್ಡ್. ಮನಸ್ಸಿನಲ್ಲಿ ಏನಿದ್ರು ಹೇಳ್ತಿನಿ. ಯಾವುದು ಮುಚ್ಚಿಡಲ್ಲ'' - ಶಿವರಾಜ್ ಕುಮಾರ್, ನಟ

'ಟಗರು' ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?

'ಟಗರು' ಚಿತ್ರದ ಬಗ್ಗೆ ಶಿವಣ್ಣ ಹೇಳಿದ್ದೇನು?

''ಟಗರು' ಸಿನಿಮಾ ತುಂಬಾ ವಿಭಿನ್ನವಾಗಿದೆ ಎಂಬ ಕುತೂಹಲ ನನಗೂ ಇದೆ. ನಾನು ಕೂಡ ಈ ಸಿನಿಮಾಗಾಗಿ ಕಾಯ್ತಿದ್ದೀನಿ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ಜನವರಿಗೆ ಸಿನಿಮಾ ತೆರೆಗೆ ಬರಬಹುದು ಎಂಬ ನಿರೀಕ್ಷೆ ಇದೆ. ನಿರ್ದೇಶಕರು ಹೇಳಬೇಕು'' ಎಂದು ಹ್ಯಾಟ್ರಿಕ್ ಹೀರೋ ಮಾತನಾಡಿದರು.

More from Filmibeat

English summary
Hatiric Hero, Kannada Actor Shiva rajKumar Speak about his Fans in Tagru Teaser Release Programme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X