Don't Miss!
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಪ್ತಮಿತ್ರ' ಚಿತ್ರ ನೆನಪಿಸುವ 'ಆಯುಷ್ಮಾನ್ ಭವ' ಟ್ರೈಲರ್
ತುಂಬು ಕುಟುಂಬ.. ಸಂತೋಷ ತುಂಬಿ ತುಳುಕುತ್ತಿದ್ದರೂ ಮನೆಯ ಹಿರಿಜೀವಕ್ಕೆ ಏನೋ ಒಂದು ಸಂಕಟ.. ಒಂದು ಕೋಣೆ.. ಅಲ್ಲಿನ ನಿಗೂಢ ಜಗತ್ತು.. ನೃತ್ಯ ಮತ್ತು ಸಂಗೀತಾಭ್ಯಾಸ.. ಮಾನಸಿಕ ನ್ಯೂನತೆ... ಈ ಎಲ್ಲದಕ್ಕೂ ಪರಿಹಾರ ಹುಡುಕಲು ಬರುವ ಹೀರೋ.. ಕೊನೆಗೆ ಬಯಲಾಗುವ ರಹಸ್ಯ.. ಇಂತಹ ಎಳೆ ಇಟ್ಟುಕೊಂಡು ಈಗಾಗಲೇ 'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ' ಚಿತ್ರಗಳು ತೆರೆಗೆ ಬಂದಿವೆ.
'ಆಪ್ತಮಿತ್ರ' ಮತ್ತು 'ಆಪ್ತರಕ್ಷಕ'ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪಿ.ವಾಸು ಇದೀಗ 'ಆಯುಷ್ಮಾನ್ ಭವ' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. 'ಆಪ್ತಮಿತ್ರ' ಚಿತ್ರದಲ್ಲಿ ಒಂದಾಗಿದ್ದ ದ್ವಾರಕೀಶ್ ಮತ್ತು ಪಿ.ವಾಸು ಜೋಡಿ ಇದೀಗ 'ಆಯುಷ್ಮಾನ್ ಭವ' ಸಿನಿಮಾಗಾಗಿ ಜೊತೆಯಾಗಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್, ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಆಯುಷ್ಮಾನ್ ಭವ' ಟ್ರೈಲರ್ ಇಂದು ಬಿಡುಗಡೆ ಆಗಿದೆ.
ಕೊನೆಗೂ 'ಆಯುಷ್ಮಾನ್ ಭವ' ಟ್ರೈಲರ್ ದಿನಾಂಕ ಪ್ರಕಟ
'ಆಯುಷ್ಮಾನ್ ಭವ' ಟ್ರೈಲರ್ ನೋಡ್ತಿದ್ರೆ, 'ಆಪ್ತಮಿತ್ರ' ಚಿತ್ರ ಖಂಡಿತ ನೆನಪಿಗೆ ಬರುತ್ತೆ. 'ಆಪ್ತಮಿತ್ರ' ಚಿತ್ರದಂತೆ ಇಲ್ಲೂ ಒಂದು ಔಟ್ ಹೌಸ್ ರಹಸ್ಯ ಇದೆ. ಆ ರಹಸ್ಯವನ್ನ ಬಹಿರಂಗ ಪಡಿಸಲು ಪ್ರಳಯಾಂತಹ ಶಿವಣ್ಣ ಎಂಟ್ರಿಕೊಡ್ತಾರೆ.
ಹೇಳಿ ಕೇಳಿ ಇದು ಪಿ.ವಾಸು ಚಿತ್ರ ಆಗಿರೋದ್ರಿಂದ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳಿಗೆ 'ಆಯುಷ್ಮಾನ್ ಭವ' ಕೊರತೆ ಮಾಡುವುದಿಲ್ಲ. ಇನ್ನೂ ಶಿವಣ್ಣ ಇದ್ದ ಮೇಲೆ ಹಾಡು, ಡ್ಯಾನ್ಸ್ ಮತ್ತು ಆಕ್ಷನ್ ಇರಲೇಬೇಕು. ಅವೆಲ್ಲವೂ ಚಿತ್ರದಲ್ಲಿ ಹೇರಳವಾಗಿದೆ ಎಂಬುದಕ್ಕೆ ಇಂದು ರಿಲೀಸ್ ಆಗಿರುವ ಟ್ರೈಲರ್ ಸಾಕ್ಷಿ.
ಸಂತೋಷ್ ಚಿತ್ರಮಂದಿರದಲ್ಲಿ ನಡೆಯಲಿದೆ 'ಆಯುಷ್ಮಾನ್ ಭವ' ಪ್ರೀ ರಿಲೀಸ್ ಕಾರ್ಯಕ್ರಮ
ಇದೀಗಷ್ಟೇ ಬಿಡುಗಡೆ ಆಗಿರುವ 'ಆಯುಷ್ಮಾನ್ ಭವ' ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಶಿವಣ್ಣ, ರಚಿತಾ ರಾಮ್, ಅನಂತ್ ನಾಗ್ ಜೊತೆಗೆ ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ಅವಿನಾಶ್, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಗುರುಕಿರಣ್ ಸಂಗೀತ ಚಿತ್ರಕ್ಕಿದೆ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅಂದ್ರೆ ನವೆಂಬರ್ 1 ರಂದು 'ಆಯುಷ್ಮಾನ್ ಭವ' ನಿಮ್ಮ ಮುಂದೆ ಬರಲಿದೆ. ನೋಡಲು ನೀವು ರೆಡಿನಾ.?