ಕೊಡಗಿಗೆ ನೆರವಾಗಿ ಎಂದು ಮನವಿ ಮಾಡಿದ ಶಿವರಾಜ್ ಕುಮಾರ್
Recommended Video

ಕೊಡಗು ಜನತೆಗೆ ನೆರವಾಗಿ ಎಂದ ಶಿವರಾಜ್ಕುಮಾರ್..! | Filmibeat Kannada
ಕೊಡಗಿನಲ್ಲಿ ಉಂಟಾದ ಭಾರಿ ಮಳೆಯಿಂದ ಇಡೀ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಮನೆಗಳು ಕುಸಿದು, ಗುಡ್ಡಗಳು ಉರಳಿ, ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ಕೊಡಗು ಜಿಲ್ಲೆಯ ಜನರ ನೆರವಿಗೆ ಈಗ ಸ್ಯಾಂಡಲ್ ವುಡ್ ಸ್ಟಾರ್ ನಟರು ಬಂದಿದ್ದಾರೆ. ದರ್ಶನ್, ಸುದೀಪ್ ನಂತರ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
''ಸಾಧ್ಯವಾದಷ್ಟು ಕೊಡಗಿನ ಜನತೆಗೆ ನೆರವು ನೀಡಿ, ಯಾವುದೇ ಬೇಧ-ಬಾವವಿಲ್ಲದೇ ಎಲ್ಲರಿಗೂ ಸಹಾಯ ಮಾಡಿ. ಚಿತ್ರರಂಗದ ಪರವಾಗಿ ನಾವೆಲ್ಲರೂ ನಿಮ್ಮ ಜೊತೆ ಇದ್ದೀವಿ, ಎಲ್ಲ ನಟರ ಅಭಿಮಾನಿಗಳು ಹಾಗೂ ನಮ್ಮ ಫ್ಯಾಮಿಲಿಯೂ ನಿಮ್ಮ ಜೊತೆ ಇರುತ್ತೆ'' ಎಂದು ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.

ಇದಕ್ಕೂ ಮುಂಚೆ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕೊಡಗಿನ ಜನತೆಯ ನೆರವು ನೀಡಿ ಎಂದು ಟ್ವಿಟ್ಟರ್ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.
More from Filmibeat
English summary
kannada actor, hatrick hero Shiva rajkumar has appealed public to contribute Cloths and other materials at kodagu people.


Click it and Unblock the Notifications











