twitter
    For Quick Alerts
    ALLOW NOTIFICATIONS  
    For Daily Alerts

    ಕೊಡಗಿಗೆ ಸುಸಜ್ಜಿತ ಆಸ್ಪತ್ರೆ ಬೇಕು ಅಭಿಯಾನಕ್ಕೆ ಶಿವಣ್ಣ ಬೆಂಬಲ

    |

    Recommended Video

    ಟ್ವಿಟ್ಟರ್ನಲ್ಲಿ ಪ್ರಾರಂಭವಾಗಿರುವ ಆಸ್ಪತ್ರೆ ಬೇಕು ಅಭಿಯಾನ | FILMIBEAT KANNADA

    ಕೊಡಗು ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವ ಅಭಿಯಾನ ನಿನ್ನೆ (ಬುದವಾರ) ಶುರುವಾಗಿದೆ. ಟ್ವಿಟ್ಟರ್ ನಲ್ಲಿ ಪ್ರಾರಂಭವಾಗಿರುವ ಈ ಅಭಿಯಾನಕ್ಕೆ ನಟ ಶಿವರಾಜ್ ಕುಮಾರ್ ಸಹ ಬೆಂಬಲ ನೀಡಿದ್ದಾರೆ.

    #WeNeedEmergencyHospitalInKodagu ಹ್ಯಾಶ್ ಟ್ಯಾಗ್ ಬಳಸಿ ಸಾಕಷ್ಟು ಜನ ಟ್ವೀಟ್ ಮಾಡಿ ಈ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಹಾಗೂ ಜನ ಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಇದಾಗಿದೆ.

    ಡಬಲ್ ಖುಷಿಯ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕುಟುಂಬ ಡಬಲ್ ಖುಷಿಯ ಸಂಭ್ರಮದಲ್ಲಿ ಶಿವರಾಜ್ ಕುಮಾರ್ ಕುಟುಂಬ

    ನಟ ಶಿವರಾಜ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ''ಕೊಡಗು ಎಂದಿಗೂ ಕರ್ನಾಟಕಕ್ಕೆ ಸೇರಿದ್ದು. ನಮ್ಮ ದೇಶ ಕಾಯುವ ಎಷ್ಟೋ ಯೋಧರು ಕೊಡಗುದವರಾಗಿದ್ದಾರೆ. ಅಲ್ಲಿನ ಜನರಿಗೆ ಆಸ್ಪತ್ರೆಯ ವ್ಯವಸ್ಥೆ ಬಹಳ ಕಡಿಮೆ ಇದೆ ಎಂದು ಕೇಳಿಪಟ್ಟೆ. ಅಲ್ಲಿ ಆಸ್ಪತ್ರೆ ವ್ಯವಸ್ಥೆಗಳು ಆಗಲಿ ಎಂದು ಚಿತ್ರರಂಗದ ಪರವಾಗಿ ನಾನು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ನಾವು ನಿಮ್ಮ ಜೊತೆಗೆ ಇದ್ದೇವೆ.'' ಎಂದಿದ್ದಾರೆ.

    shiva rajkumar supports WeNeedEmergencyHospitalInKodagu campaign

    ಅಂದಹಾಗೆ, ಕೊಡಗು ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆ ಇಲ್ಲ. ಅನರೋಗ್ಯ, ಅಪಘಾತ ಏನಾದರೂ ಆದರೆ ಇಲ್ಲಿಯ ಜನರು ಮಂಗಳೂರು, ಬೆಂಗಳೂರು, ಮೈಸೂರು, ಸುಳ್ಯಗೆ ಹೋಗಬೇಕಾಗಿದೆ. ಆಂಬುಲೆನ್ಸ್ ಮೂಲಕ ಹೋಗುವಾಗಲೇ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಒಂದು ಒಳ್ಳೆಯ ಆಸ್ಪತ್ರೆಯ ಅಗತ್ಯ ಇದೆ ಎಂದು ಕೊಡಗು ಜನರು ಮನವಿ ಮಾಡುತ್ತಿದ್ದಾರೆ.

    ಕೊಡಗು ಅಭಿಯಾನದ ಬಗ್ಗೆ ಶಿವಣ್ಣ ಮಾತುಗಳನ್ನು ಕೇಳಲು ಈ ಲಿಂಕ್ ಕ್ಲಿಕ್ಕಿಸಿ

    English summary
    Kannada actor Shiva Rajkumar supports WeNeedEmergencyHospitalInKodagu campaign. The campaign is to request the government for a hospitol.
    Thursday, June 13, 2019, 13:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X