ಮೈಸೂರಿನಲ್ಲಿ ರುಸ್ತುಂ ನೋಡಲಿದ್ದಾರೆ ಶಿವರಾಜ್ ಕುಮಾರ್
Recommended Video
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಎಲ್ಲೆಡೆಯೂ ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಇದು ಪಕ್ಕಾ ಬ್ಲಾಕ್ ಬಸ್ಟರ್ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ರಿಲೀಸ್ ದಿನ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಗಳಿಗೆ ಸ್ಟಾರ್ ನಟರು ಭೇಟಿ ನೀಡುತ್ತಾರೆ. ಸಿನಿಮಾ ಸಕ್ಸಸ್ ಆದ ಮೇಲೆ ವಿಜಯಯಾತ್ರೆ ಎಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಇತರೆ ಜಿಲ್ಲೆಗಳ ಚಿತ್ರಮಂದಿರಗಳಿಗೆ ಹೋಗ್ತಾರೆ.
ಆದರೆ, ಶಿವಣ್ಣ ರುಸ್ತುಂ ಚಿತ್ರವನ್ನ ರಿಲೀಸ್ ಆದ ಎರಡನೇ ದಿನವೇ ಮೈಸೂರಿನಲ್ಲಿ ನೋಡಲಿದ್ದಾರೆ. ಮೈಸೂರಿನ ಶಾಂತಲಾ ಚಿತ್ರಮಂದಿರದಲ್ಲಿ ರುಸ್ತುಂ ಪ್ರದರ್ಶನವಾಗುತ್ತಿದ್ದು, ಇಂದು ಸಂಜೆ 4 ಗಂಟೆ ಶೋ ವೀಕ್ಷಿಸಲಿದ್ದಾರೆ ಹ್ಯಾಟ್ರಿಕ್ ಹೀರೋ.

ಸಾಹಸ ನಿರ್ದೇಶಕ ರವಿವರ್ಮ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ಜಯಣ್ಣ ನಿರ್ಮಿಸಿದ್ದಾರೆ. ಆದರೆ, ಬಿಡುಗಡೆಗೂ ಮುಂಚೆ ರುಸ್ತುಂ ಚಿತ್ರದ ಬಗ್ಗೆ ಹೆಚ್ಚು ಪ್ರಚಾರ ಮಾಡಿಲ್ಲ ಎನ್ನುವು ಮಾತು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಇದೀಗ, ಬಿಡುಗಡೆಯಾದ ನಂತರದ ದಿನದಲ್ಲೇ ಥಿಯೇಟರ್ ವಿಸಿಟ್ ಕೊಡುತ್ತಿರುವುದು ಪ್ರೇಕ್ಷಕರಿಗೆ ಇನ್ನಷ್ಟು ಜೋಶ್ ತುಂಬಲಿದೆ. ಇನ್ನುಳಿದಂತೆ ಶಿವಣ್ಣ ಜೊತೆಯಲ್ಲಿ, ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ಮಹೇಂದ್ರನ್, ಶಿವರಾಜ್ ಕೆ ಆರ್ ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.


Click it and Unblock the Notifications











