Don't Miss!
- News ಬಿಜೆಪಿಗೆ ಮತ್ತೊಂದು ಆಘಾತ, ಮತ್ತೋರ್ವ ವಿಧಾನ ಪರಿಷತ್ ಸದಸ್ಯ ರಾಜೀನಾಮೆ: ಮಾಜಿ ಸಿಎಂ ಏನಂದ್ರು?
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Technology Airtel: ಏರ್ಟೆಲ್ನಿಂದ ಹೊಸ ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು! ಇವು ಹೇಗೆಲ್ಲಾ ಅನುಕೂಲ?
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟುಹಬ್ಬದ ಸಂಭ್ರಮದಲ್ಲಿ ರಮೇಶ್ ಅರವಿಂದ್; ಶಿವಾಜಿ ಸುರತ್ಕಲ್ 2 ಟೀಸರ್ ಔಟ್
ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಇಂದು ( ಸೆಪ್ಟೆಂಬರ್ 10 ) 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಅವರಿಗೆ ಶಿವಾಜಿ ಸುರತ್ಕಲ್ 2 ಚಿತ್ರತಂಡ ಟೀಸರ್ ಅನ್ನು ಗಿಫ್ಟ್ ಆಗಿ ನೀಡಿದೆ.
ಹೌದು, ಇಂದು ರಮೇಶ್ ಅರವಿಂದ್ ಹುಟ್ಟುಹಬ್ಬದ ಪ್ರಯುಕ್ತ ಶಿವಾಜಿ ಸೂರತ್ಕಲ್ 2 ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ ಯಶಸ್ಸು ಸಾಧಿಸಿದ ನಂತರ ಇದೀಗ ಈ ಚಿತ್ರದ ಸೀಕ್ವೆಲ್ ಆಗಿ ಶಿವಾಜಿ ಸೂರತ್ಕಲ್ 2 ಚಿತ್ರವನ್ನು ನಿರ್ಮಾಣ ಮಾಡಲಾಗ್ತಿದೆ. ಈ ಚಿತ್ರದ ಟ್ಯಾಗ್ ಲೈನ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಎಂದಿದ್ದು, ಕುತೂಹಲವನ್ನು ಹೆಚ್ಚಿಸಿದೆ.
ಮೊದಲನೇ ಭಾಗದ ರೀತಿ ಎರಡನೇ ಭಾಗವೂ ಸಹ ಮಿಸ್ಟರಿ ಥ್ರಿಲ್ಲರ್ ಕಥೆ ಎಂಬುದು ಟೀಸರ್ ನೋಡಿದ ಕೂಡಲೇ ತಿಳಿದುಬಿಡುತ್ತದೆ. ಹೀಗಾಗಿಯೇ ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುವ ಸಿನಿಪ್ರೇಕ್ಷಕರಿಗೆ ಈ ಚಿತ್ರದ ಟೀಸರ್ ಕಿಕ್ ಕೊಡ್ತಿದೆ. ಚಿತ್ರದ ಟೀಸರ್ ರಮೇಶ್ ಅರವಿಂದ್ ಅವರ ಧ್ವನಿಯಲ್ಲಿರುವ 'ನಾವು ಬದುಕ್ತಾ ಇರೋದು ನರಕದಲ್ಲಿ, ರಾಕ್ಷಸರು ನಮ್ಮ ಸುತ್ತ ಇದ್ದಾರೆ, ರಾಕ್ಷಸರು ನಮ್ಮ ಜೊತೆಗೂ ಇದ್ದಾರೆ, ರಾಕ್ಷಸರು ನಮ್ಮ ಒಳಗೂ ಇದ್ದಾರೆ' ಎಂಬ ಡೈಲಾಗ್ ಮೂಲಕ ಆರಂಭಗೊಳ್ಳುತ್ತದೆ. ಈ ಸಂಭಾಷಣೆಯ ವೇಳೆ ಮರ್ಡರ್ ಜರುಗಿರುವ ದೃಶ್ಯಗಳು ಮತ್ತು ರಮೇಶ್ ಅದರ ಬೆನ್ನತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.
ಚಿತ್ರದಲ್ಲಿ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ರಾಧಿಕಾ ನಾರಾಯಣ್ ಅಭಿನಯಿಸಿದ್ದರೆ, ಮೇಘನಾ ಗಾಂವ್ಕರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ನಸರ್ ಕೂಡ ಟೀಸರ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಶಿವಾಜಿ ಪಾತ್ರದ ರಮೇಶ್ ಅರವಿಂದ್ ಕೇಸ್ ನಂ 131 ಹಿಂದೆ ಬೀಳುವುದಾಗಿ ಟೀಸರ್ ನಲ್ಲಿ ತಿಳಿಸಲಾಗಿದ್ದು, ಈ ಕೇಸ್ ತನ್ನ ಕೆರಿಯರ್ ಅನ್ನು ಬಹುತೇಕ ಮುಗಿಸಿತ್ತು ಎಂಬ ಡೈಲಾಗ್ ಇದೆ ಹಾಗೂ ರಾಕ್ಷಸರ ವಿರುದ್ಧ ನಾನು ಕೊನೆಯ ಉಸಿರಿರುವವರೆಗೂ ಹೋರಾಡುವೆ ಎಂದು ರಮೇಶ್ ಹೇಳ್ತಾರೆ. ಇನ್ನು ಟೀಸರ್ ಕಟ್ ಚೆನ್ನಾಗಿದ್ದು, ಮರ್ಡರ್ ಮಿಸ್ಟರಿಗೆ ಅಗತ್ಯವಾದ ಸಂಗೀತವಿದೆ ಹಾಗೂ ಕಳೆದ ಬಾರಿಯ ರೀತಿ ಈ ಬಾರಿಯೂ ಸಹ ನಿರ್ದೇಶಕ ಆಕಾಶ್ ಶ್ರೀವತ್ಸ ಪ್ರೇಕ್ಷಕರ ಮನ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇನ್ನು ಟೀಸರ್ ಕೊನೆಯಲ್ಲಿ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ ಎಂಬ ಸ್ಪಷ್ಟನೆಯನ್ನೂ ಚಿತ್ರತಂಡ ನೀಡಿದೆ.