Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ನೀನು ಯಾವಾಗಲು ನನ್ನ ಹೃದಯದಲ್ಲಿ ಇರ್ತೀಯಾ': ಅಗಲಿದ ಅಭಿಮಾನಿಗೆ ಶಿವಣ್ಣ ಭಾವುಕ ನುಡಿ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿ ಕಶ್ಯಪ್ ಸಿಂಹ ಹೃದಯಘಾತದಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀನಗರದ ತಮ್ಮ ನಿವಾಸದಲ್ಲಿ ಕಶ್ಯಪ್ ಕೊನೆಯುಸಿರೆಳೆದಿದ್ದಾರೆ. ಕಶ್ಯಪ್ ನಿಧನಕ್ಕೆ ಶಿವಣ್ಣನ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲದೆ ಶಿವಣ್ಣ ಕೂಡ ಅಪ್ಪಟ ಅಭಿಮಾನಿಯನ್ನು ಕಳೆದು ಕೊಂಡ ನೋವಿನಲ್ಲಿದ್ದಾರೆ. ಅಗಲಿದ ಅಭಿಮಾನಿಗೆ ಸಂತಾಸ ಸೂಚಿಸುವ ಜೊತೆಗೆ ಕಶ್ಯಪ್ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.
'ಶಿವಸೈನ್ಯ' ತಂಡದ ಅಪ್ಪಟ್ಟ ಅಭಿಮಾನಿ ನಿಧನ
"ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಒಬ್ಬ ಅಭಿಮಾನಿ ಕಳೆದು ಕೊಂಡರೆ ಅದರ ನಿಜವಾದ ನೋವು, ಪ್ರೀತಿಸಿದವರಿಗೆ ಮಾತ್ರ ಗೊತ್ತಾಗುತ್ತೆ. ನೀವು ತೋರಿಸಿದ ಪ್ರೀತಿ, ಅಭಿಮಾನ, ಸಿನಿಮಾ ನೋಡಿ ಕೊಂಡಾಡಿದ್ದನ್ನು ಯಾವಾಗಲು ಮರೆಯಲು ಸಾಧ್ಯವಿಲ್ಲ. ನೀನು ಯಾವಾಗಲು ನನ್ನ ಹೃದಯದಲ್ಲಿ ಇರುತ್ತೀಯಾ. ನಿನ್ನ ಪ್ರೀತಿ, ಅಭಿಮಾನ ಯಾವಾಗಲು ನನ್ನ ಮೇಲೆ ಇರಬೇಕು ಎಂದು ಕೇಳಿಕೊಳ್ಳುತ್ತೇನೆ. ಲವ್ ಯು. ಮಿಸ್ ಯೂ" ಎಂದು ಹೇಳುತ್ತ ಅಭಿಮಾನಿಯನ್ನು ಕಳೆದುಕೊಂಡ ದುಃಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ ಮೇಲಿನ ಅಪಾರ ಅಭಿಮಾನದಿಂದ 'ಶಿವಸೈನ್ಯ' ಎನ್ನುವ ಅಭಿಮಾನಿ ಬಳಗವನ್ನು ಕಟ್ಟಿ ಬೆಳೆಸಿದ್ದರು. ಅದರ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದರು. ಶಿವಣ್ಣನ ಯಾವುದೇ ಸಿನಿಮಾ ಬಿಡುಗಡೆಯಾದರೂ ಸಂಭ್ರಮಾಚರಣೆ ಮಾಡುತ್ತಿದ್ದರು. ಕಳೆದ ವಾರ ಬಿಡುಗಡೆಯಾದ 'ರುಸ್ತುಂ' ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು.
ಕಶ್ಯಪ್ ಸಿಂಹ ಟಿವಿಎಸ್ ಮೋಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದರು. ರಾಯಲ್ ಎನ್ಫೀಲ್ಡ್ ಬೈಕ್ ರೈಡರ್ ಆಗಿದ್ದರು. ಅನೇಕ ರಾಲಿಗಳಲ್ಲಿ ಭಾಗಿಯಾಗಿದ್ದರು. ಬೈಕ್ ರೈಡ್ ಎಂದರೆ ಅವರಿಗೆ ಬಹಳ ಇಷ್ಟವಾಗಿತ್ತು. ಇಂತಹ ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡ ನೋವು ಶಿವಣ್ಣ ಅವರನ್ನು ಕಾಡುತ್ತಿದೆ.