Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂಬರೀಶ್ ಅಭಿಮಾನಿಗಳಲ್ಲಿ ಶಿವಣ್ಣನ ಕೋರಿಕೆ
ನಟ ಅಂಬರೀಶ್ ಎಷ್ಟೊಂದು ಪ್ರೀತಿ ಸಂಪಾದಿಸಿದ್ದಾರೆ ಎನ್ನುವುದಕ್ಕೆ ಇಂದಿನ ಅವರ ಅಂತಿಮ ದರ್ಶನಕ್ಕೆ ಬರುತ್ತಿರುವ ಅಭಿಮಾನಿ ಹಾಗೂ ಚಿತ್ರರಂಗ ಸ್ನೇಹಿತರು ಸಾಕ್ಷಿಯಾಗಿದ್ದಾರೆ.
ಕನ್ನಡದ ಮತ್ತೊಬ್ಬ ಮಹಾನ್ ನಟ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕಣ್ಣೀರು ಹಾಕಿದೆ. ನಟ ಶಿವರಾಜ್ ಕುಮಾರ್, ಅನಂತ್ ನಾಗ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅಂಬರೀಶ್ ಅವರ ಬಗ್ಗೆ ಮಾತನಾಡಿದ್ದಾರೆ.
ಸಾವಿಗೂ ಮುನ್ನ ಅಂಬರೀಶ್ ಈ ಸಿನಿಮಾಗಳನ್ನು ನೋಡಬೇಕಿತ್ತು!
ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಶಿವರಾಜ್ ಕುಮಾರ್, ಅಂಬರೀಶ್ ಅವರ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು. ಜೊತೆಗೆ ಅಂಬರೀಶ್ ಅವರ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದರು. ಮುಂದೆ ಓದಿ...
ಶಿವರಾಜ್ ಕುಮಾರ್ ಸಂತಾಪ
''ಇಂದು ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅಂಬರೀಶ್ ಅಂಕಲ್ ಒಬ್ಬ ಸೂಪರ್ ಸ್ಟಾರ್, ಒಬ್ಬ ರಾಜಕಾರಣಿ, ಎಲ್ಲದಕ್ಕಿಂತ ಹೆಚ್ಚಾಗಿ ಅವರು ಒಬ್ಬ ಒಳ್ಳೆಯ ಮನುಷ್ಯ. ಬೇದ ಭಾವ ಮಾಡದೆ ಒಂದೇ ರೀತಿ ನೋಡುತ್ತಿದ್ದರು. ಅವರನ್ನು ಈ ರೀತಿ ನೋಡಲು ನಮಗೆ ತುಂಬ ನೋವಾಗುತ್ತಿದೆ.'' - ಶಿವರಾಜ್ ಕುಮಾರ್, ನಟ
ಅಭಿಮಾನಿಗಳಲ್ಲಿ ಕೋರಿಕೆ
''ಅಪ್ಪಾಜಿ, ವಿಷ್ಣು ಸರ್ ಇದ್ದ ಹಾಗೆಯೇ, ನಮ್ಮ ಪಾಲಿಗೆ ಅಂಬರೀಶಣ್ಣ. ಅವರು ನಮಗೆ ತಂದೆ ಇದ್ದ ಹಾಗೆ. ಅವರ ಅಭಿಮಾನಿಗಳಲ್ಲಿ ಒಂದು ಕೋರಿಕೆ, ಅವರು ನಮ್ಮ ಜೊತೆಗೆ ಇಲ್ಲ ಎಂದು ಯಾರೂ ಎಂದುಕೊಳ್ಳಬಾರದು. ಅವರ ಒಳ್ಳೆಯ ತನವನ್ನು ನೆನಪು ಮಾಡಿಕೊಳ್ಳಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಮಗ ಅಭಿಷೇಕ್ ಜೊತೆಗೆ ನಾವು ಯಾವಾಗಲೂ ಇರುತ್ತೇವೆ.'' - ಶಿವರಾಜ್ ಕುಮಾರ್, ನಟ
ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್
ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು - ಅನಂತ್ ನಾಗ್
ಅಂಬರೀಶ್ ಅವರಿಗೆ ಸಂತಾಪ ಸೂಚಿಸಿದ ಅನಂತ್ ನಾಗ್ ''ಪ್ರೀತಿ ಕೊಡುವುದು ಅಂದರೆ ಏನು ಎನ್ನುವುದನ್ನು ಅವರನ್ನ ನೋಡಿ ಕಲಿಯಬೇಕು. ದೊಡ್ಡ ಸಾಧನೆ ಮಾಡಿರುವ ಅಂಬರೀಶ್ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಸರಿಯಾಗಿ ಊಟ ಮಾಡಿ ಅಂತ ನನ್ನ ಆರೋಗ್ಯದ ಕಾಳಜಿ ವಹಿಸುತ್ತಿದ್ದರು.''- ಅನಂತ್ ನಾಗ್, ಹಿರಿಯ ನಟ
ಅಂಬರೀಶಣ್ಣ ಮತ್ತೆ ಹುಟ್ಟಿದ್ದಾರೆ - ಯೋಗರಾಜ್ ಭಟ್
''ಅಂಬರೀಶಣ್ಣ ಮತ್ತೆ ಹುಟ್ಟಿದ್ದಾರೆ. ತುಂಬ ಜೀವಂತಿಕೆ ಇದ್ದ ಅವರು, ಎಂದಿಗೂ ಕನ್ನಡಿಗರ ಜೊತೆಗೆ ಜೀವಂತವಾಗಿ ಇರುತ್ತಾರೆ. ಅವರ ಜೊತೆಗೆ ಸಿನಿಮಾ ಮಾಡಿದ್ದು ,ನನ್ನ ಪುಣ್ಯ. ತುಂಬ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' - ಯೋಗರಾಜ್ ಭಟ್