Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪೊಲೀಸರ ಮೇಲೆ ಹಲ್ಲೆ: ಬೇಸರ ವ್ಯಕ್ತಪಡಿಸಿದ ನಟ ಶಿವರಾಜ್ ಕುಮಾರ್
ಕೊರೊನಾ ನಿಯಂತ್ರಣಕ್ಕಾಗಿ ಬಂದೋಬಸ್ತ್ ಮಾಡಿ ಜನರನ್ನು ಕಾಯುತ್ತಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿ ದುರ್ವರ್ತನೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಗಿಳಿದು ಬೈಕ್ ನಲ್ಲಿ ಅಡ್ಡಾಡುತ್ತಿದ್ದ ಯುವಕರ ಗುಂಪನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ನಡೆಸಿದ ಹಲ್ಲೆಯನ್ನು ಅನೇಕರು ಖಂಡಿಸಿದ್ದಾರೆ.
Recommended Video
ಈ ಬಗ್ಗೆ ನಟ ಶಿವರಾಜ್ ಕುಮಾರ್ ಸಹ ಪ್ರತಿಕ್ರಿಯಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲೆ ಕೈಮಾಡುವುದು ತುಂಬ ತಪ್ಪು, ಅವರು ನಮಗೋಸ್ಕರ ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನೀವು ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಒಂದು ವಿಡಿಯೋ ಮಾಡಿ ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಪೊಲೀಸರ ಮೇಲೆ ಕೈ ಮಾಡಿದ್ದು ತುಂಬನೆ ತಪ್ಪು. ಅವರು ಯಾರಿಗೋಸ್ಕರ ಮಾಡುತ್ತಿದ್ದಾರೆ, ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿಗೋಸ್ಕರ ಹೀಗೆ ಮಾಡುತ್ತಿದ್ದಾರೆ. ನೀವು ಸಹಕರಿಸಬೇಕು. ಮನೆಯಲ್ಲಿಯೆ ಇದ್ದರೆ ಹೀಗೆ ಆಗಲ್ಲ. ಈ ಸಮಯದಲ್ಲಿ ಎಲ್ಲರಿಗೂ ತೊಂದರೆ ಇದೆ. ಹೀಗೆ ಮಾಡಿದರೆ ನಿಮ್ಮ ಫ್ಯಾಮಿಲಿಗೆ ಎಷ್ಟು ಕಷ್ಟ ಆಗುತ್ತೆ. ಅವರನ್ನು ಬಿಟ್ಟು ಹೊರಗೆ ಹೋಗುತ್ತೀರಾ, ಅವರಿಗೆ ಎಷ್ಟು ಕಷ್ಟ ಆಗುತ್ತೆ. ಹಾಗೆ ಪೊಲೀಸರಿಗೂ ಫ್ಯಾಮಿಲಿ ಇದೆ. ಅವರಿಗೂ ತುಂಬ ಕಷ್ಟ ಆಗುತ್ತೆ. ಇದನ್ನ ನೋಡಿ ನನಗೆ ತುಂಬ ಬೇಸರವಾಯಿತು" ಎಂದು ಹೇಳಿದ್ದಾರೆ.
ಇನ್ನು "ಸೈನಿಕ ಸಿ.ಆರ್ ಚಂದ್ರಶೇಖರ್ ಹೇಳುತ್ತಾರೆ. ಕಷ್ಟಪಟ್ಟು ನಾವು ಗಡಿ ಕಾಪಾಡುತ್ತೇವೆ. ನೀವು ಯಾಕೆ ದೇಶ ಉಳಿಸಿಕೊಳ್ಳಲು ಸಹಕಾರ ಮಾಡುತ್ತಿಲ್ಲ. ಎಂದು ಹೇಳುತ್ತಾರೆ. ಹಾಗೆ ನಾವು ಹೇಳಿಸಿಕೊಳ್ಳಬಾರದು. ನಮಗೋಸ್ಕರ ಅವರು ಅವರಿಗೋಸ್ಕರ ನಾವು ಎನ್ನುವ ಭಾವನೆ ಇರಬೇಕು. ದೇಶಕ್ಕಾಗಿ ನಾವು, ನಮಗಾಗಿ ದೇಶ. ದೇಶಗೋಸ್ಕರ್ ಏನು ಮಾಡುತ್ತೇವೆ ನಾವು. ಈ ರೀತಿಯ ತೊಂದರೆ ಬಂದರೆ ನಾವೆಲ್ಲರೂ ಸೇರಿ ಹೋರಾಡಬೇಕು" ಎಂದು ಶಿವಣ್ಣ ಹೇಳಿದ್ದಾರೆ.
ನೆನ್ನೆ ಟಿವಿಯಲ್ಲಿ ಪೊಲೀಸ್ ರವರ ಮೇಲೆ ಹಲ್ಲೆ ನಡೆದ ದೃಶ್ಯ ನೋಡಿ ಬೇಸರದಲ್ಲಿ ಈ ವಿಡಿಯೋ ಮಾಡಿದೆ. ಮನೆಯಲ್ಲೆ ಇದ್ದು ಸಹಕರಿಸಿ 🙏🙏 pic.twitter.com/QduVvFaOpc
— DrShivaRajkumar (@NimmaShivanna) March 26, 2020
ಇನ್ನು ಶಿವಣ್ಣ ಈ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಹ ಬೆಂಬಲಿಸಿ, ಪೋಲೀಸರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದಾರೆ. ಏಪ್ರಿಲ್ ೧೪ರ ವರೆಗೂ ಸಂಪೂರ್ಣ ಇಂಡಿಯಾ ಲಾಕ್ ಡೌನ್ ಆಗಿದ್ದು, ದೇಶದ ಜನತೆ ಸಹಕರಿಸಬೇಕೆಂದು ಅನೇಕ ಸಿನಿಮಾ ಸೆಲೆಬ್ರೆಟಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.