Don't Miss!
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ?
Recommended Video
ಕನ್ನಡ ಚಿತ್ರರಂಗದಲ್ಲಿ ಶುರುವಾಗಿರುವ ಮೀಟೂ ವಿವಾದ ಸದ್ಯದ ಮಟ್ಟಿಗೆ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ, ಸಾಕಷ್ಟು ಮೀ ಟೂ ಪ್ರಕರಣಗಳು ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿ, ಅಘಾತ ಸೃಷ್ಟಿ ಮಾಡಿವೆ.
ಅದರಲ್ಲಿಯೂ ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಪ್ರಕರಣ ಗಂಭೀರ ಸ್ವರೂಪ ತಾಳಿದೆ. ಈ ವಿಚಾರವಾಗಿ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಸಹ ಈ ಬಗ್ಗೆ ಮಾತನಾಡಿದ್ದಾರೆ.
ಶ್ರುತಿ - ಸರ್ಜಾ ಮೀಟೂ ಸಮರ : ಹರಿಪ್ರಿಯಾ ಯಾರ ಪರ?
ಈವರೆಗೂ ಮಾತನಾಡಿರುವ ಚಿತ್ರರಂಗ ಗಣ್ಯರು ತಮ್ಮ ಬೆಂಬಲವನ್ನು ಶ್ರುತಿ ಅಥವಾ ಸರ್ಜಾ ಇಬ್ಬರಲ್ಲಿ ಒಬ್ಬರಿಗೆ ನೀಡುತ್ತಿದ್ದರು. ಆದರೆ, ಶಿವಣ್ಣ ಸತ್ಯದ ಪರ ನಿಂತಿದ್ದಾರೆ. ಮುಂದೆ ಓದಿ..
ಶಿವರಾಜ್ ಕುಮಾರ್ ಪ್ರತಿಕ್ರಿಯೆ
ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ವಿವಾದ ಶಿವರಾಜ್ ಕುಮಾರ್ ಅವರ ಮನಸ್ಸಿಗೆ ನೋವುಂಟು ಮಾಡಿದೆಯಂತೆ. ಈ ರೀತಿ ಘಟನೆಗಳು, ಗಲಾಟೆಗಳು ಸಿನಿಮಾರಂಗದಲ್ಲಿ ನಡೆಯಬಾರದು ಎಂಬುದು ಶಿವರಾಜ್ ಕುಮಾರ್ ಅವರ ಅಭಿಪ್ರಾಯವಾಗಿದೆ.
ಶ್ರುತಿ ಪರ ನಿಂತ ಪ್ರಕಾಶ್ ರೈಗೆ ಜಗ್ಗೇಶ್ ಹೀಗಂದ್ರು!
ಚೆಂಬರ್ ನಲ್ಲಿ ತೀರ್ಮಾನ ಆಗಲಿ
ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲ್ಲೇರಿದೆ. ''ಚೆಂಬರ್ ಬಗ್ಗೆ ನಮಗೆ ಗೌರವ ಇದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಅಲ್ಲಿಯೇ ಈ ವಿವಾದ ಅಂತ್ಯ ಕಾಣಲಿ'' ಎಂದು ಶಿವಣ್ಣ ಹೇಳಿದ್ದಾರೆ.
ಯಾರೂ ಏನೇ ಹೇಳಿದ್ರು ನನ್ನ ಹೋರಾಟ ನಿಲ್ಲಲ್ಲ: 6 ಅಂಶಗಳನ್ನ ಮತ್ತೆ ಮುಂದಿಟ್ಟ ಶ್ರುತಿ
ಯಾರ ಭಾವನೆಗೂ ನೋವಾಗುವುದು ಬೇಡ
ಈ ಘಟನೆಯಲ್ಲಿ ಚಿತ್ರರಂಗದ ಕೆಲವರು ಅರ್ಜುನ್ ಸರ್ಜಾ ಅವರಿಗೆ ಸಾಥ್ ನೀಡಿದರೆ, ಇನ್ನು ಕೆಲವರು ಶ್ರುತಿ ಹರಿಹರನ್ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಶಿವಣ್ಣ ''ನಾನು ಯಾರ ಭಾವನೆಗೆ ನೋವುಂಟು ಮಾಡುವುದು ಬೇಡ. ಅವರದ್ದು ಸರಿ, ಇವರದ್ದು ಸರಿ ಎಂದು ಹೇಳುವುದಿಲ್ಲ''. ಎಂದು ತಿಳಿಸಿದ್ದಾರೆ.
ಎಲ್ಲರೂ ಒಳ್ಳೆಯವರು, ಯಾರೂ ಕೆಟ್ಟವರಲ್ಲ
''ಇಲ್ಲಿ ಯಾರೂ ಕೆಟ್ಟವರಲ್ಲ ಎಲ್ಲರೂ ಒಳ್ಳೆಯವರೇ. ಈ ಸಮಸ್ಯೆ ಅದಷ್ಟು ಬೇಗ ಸುಖಾಂತ್ಯ ಕಾಣಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ'' ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರೊಬ್ಬರ ಪರ ಮಾತನಾಡದ ಶಿವಣ್ಣ ಸಮಸ್ಯೆ ಬಗೆಹರಿಯಲಿ ಎಂದಿದ್ದಾರೆ.
ಮೀಡಿಯಾ ಜನರಿಗೆ ಸತ್ಯ ತೋರಿಸಬೇಕು
''ಮೀಡಿಯಾ ಜನರಿಗೆ ಸತ್ಯ ತೋರಿಸಲಿ. ಈ ಘಟನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ನಿರ್ಧಾರ ನೀವೇ ಮಾಡಿ. ನಾವು ಹೇಳಿದಾಗ ಅದು ಸ್ವಾರ್ಥ ಎನಿಸಬಹುದು. ಆದರೆ, ನೀನು ಎಲ್ಲವನ್ನು ನೋಡುತ್ತೀರಾ ಅದಕ್ಕೆ ನೀವೇ ಉತ್ತರ ನೀಡಿ. ಇದು ನನ್ನ ಸಲಹೆ.'' - ಶಿವರಾಜ್ ಕುಮಾರ್, ನಟ