ಕೃಷಿ ಮೇಳದಲ್ಲಿ ಶಿವಣ್ಣ ರಂಗು: ಹಾಡಿ, ಡ್ಯಾನ್ಸ್ ಮಾಡಿ ರಂಜಿಸಿದ ಹ್ಯಾಟ್ರಿಕ್ ಹೀರೋ, ವಿಡಿಯೋ ವೈರಲ್
ರಾಜ್ಯಮಟ್ಟದ ಕೃಷಿಮೇಳ ಹೊನ್ನಾಳಿಯಲ್ಲಿ ನಡೆಯುತ್ತಿದೆ. ಡಾ. ಶಿವರಾಜ್ ಕುಮಾರ್, ಯೋಗ ಗುರು ಬಾಬಾ ರಾಮದೇವ್, ಕಾಶಿ ಜಗದ್ಗುರು ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ ನೀಡಿದರು. ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ.
Recommended Video
ಚಾಲನೆ ನೀಡಿ ಮಾತನಾಡಿದ ಶಿವಣ್ಣ "ಗಡಿಯಲ್ಲಿ ಯೋಧ ದೇಶ ಕಾಪಾಡುತ್ತಾರೆ. ಹಾಗೆ ರೈತ ಕೃಷಿ ಮಾಡುತ್ತಾರೆ. ಯೋಧ ಮತ್ತು ರೈತ ಎರಡು ಕಣ್ಣುಗಳಿದ್ದಂತೆ. ಯಾವುದೆ ಕಣ್ಣಿಗೆ ನೋವಾದರು ಕಷ್ಟವಾಗುತ್ತೆ. ಎಂದು ಹೇಳಿದರು. ಇನ್ನು ಅಪ್ಪಾಜಿ ಬಂಗಾರದ ಮನುಷ್ಯ ಸಿನಿಮಾದಲ್ಲಿ ರೈತನಾಗಿದ್ದರು. ರೈತರ ಬಗ್ಗೆ ಅಪಾರವಾದ ಗೌರವಿದೆ. ಯಾವುದೆ ಕಾರಣಕ್ಕೂ ರೈತ ಸಾಯೋ ಮಾತಾನಾಡಬಾರದು" ಎಂದರು.
ಜೊತೆಗೆ 'ಆಗದು ಎಂದು ಕೈಕಟ್ಟಿಕುಳಿತರೆ' ಹಾಡಿನ ಮೂಲಕ ರೈತರಿಗೆ ಮತ್ತಷ್ಟು ಧೈರ್ಯ ತುಂಬಿದರು. ಶಿವಣ್ಣ ಮಾತಿನ ಜೊತೆಗೆ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಜೊತೆಗೆ ಟಗರು ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಶಿವಣ್ಣ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಬಾಬಾ ರಾಮ್ ದೇವ ಮಾತನಾಡಿ, ಕರ್ನಾಟಕ ಜನ ರಾಷ್ಟ್ರಭಕ್ತಿ ಹಾಗೂ ಆಧ್ಯಾತ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದು ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದರು.
ದೇಶದಾದ್ಯಂತ ಕೊರೊನಾ ಭೀತಿ ಇದೆ. ಆದರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಬರೋದಿಲ್ಲ. ಅರಿಶಿಣ, ಕಾಳಿ ಮೆಣಸು, ತುಳುಸಿ, ಶುಂಠಿ ಸೇವಿಸುವುದರಿಂದ ಯಾವುದೆ ರೋಗ ಬರುವುದಿಲ್ಲ ಎಂದು ಹೇಳಿದರು.


Click it and Unblock the Notifications











