Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಖವಿದ್ದಾಗ ಇರ್ತಾರೆ ನೂರಾರು ಜನ, ಕಷ್ಟದಲ್ಲಿದ್ದಾಗ ಬರ್ತಾರೆ ಶಿವಣ್ಣ
Recommended Video
ಶಿವರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ತೆರೆ ಹಿಂದೆಯೂ ಹೀರೋ. ಶಿವಣ್ಣ ಕಷ್ಟದಲ್ಲಿ ಇರುವ ಅನೇಕರಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂಗದ ಸಾಕಷ್ಟು ಸ್ನೇಹಿತರ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದಾರೆ.
ಇದೀಗ 'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿರುವ ಶಿವರಾಜ್ ಕುಮಾರ್ ತಮ್ಮ ಸ್ನೇಹಿತ ರಘುರಾಮ್ ಹಾಗೂ ತಂಡಕ್ಕೆ ಶಕ್ತಿ ತುಂಬಿದ್ದಾರೆ.
Missing Boy Review : ಸಿನಿಮಾ ಶುದ್ಧ.. ತಾಯಿ ಪ್ರೀತಿ ಪರಿಶುದ್ಧ..
'ಮಿಸ್ಸಿಂಗ್ ಬಾಯ್' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಕೆಲ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ತೆಗೆಯುತ್ತಿದ್ದರು. ಆದರೆ, ಇದೇ ವೇಳೆ ಶಿವಣ್ಣ ಸಿನಿಮಾವನ್ನು ನೋಡಿ ತಂಡಕ್ಕೆ ಹೊಸ ಚೈತನ್ಯ ನೀಡಿದ್ದಾರೆ.
ಸಿನಿಮಾ ನೋಡಿ ಮಾತನಾಡಿದ ಶಿವಣ್ಣ ''ಚಿತ್ರ ತುಂಬ ಚೆನ್ನಾಗಿದೆ. ಗುರುನಂದನ್ ಹಾಗೂ ಹೀರೋಯಿನ್ ಚೆನ್ನಾಗಿ ನಟಿಸಿದ್ದಾರೆ. ತಾಯಿಯ ಪಾತ್ರ ಮಾಡಿರುವ ಭಾಗೀರಥಿ ಭಾಯಿ ನಟನೆ ಅದ್ಭುತ. ಅವರು ನಮ್ಮ ಕಬೀರ ಸಿನಿಮಾದಲ್ಲಿ ನಟಿಸಿದ್ದರು.'' ಎಂದಿದ್ದಾರೆ.
ಜೊತೆಗೆ ''ತಾಯಿಗೆ ಸೆಂಟಿಮೆಂಟ್ ಯಾರೇ ಮಾಡಿದರೂ ಮನಸ್ಸಿಗೆ ಮುಟ್ಟುತ್ತದೆ. ಚಿತ್ರದ ಎಮೋಷನ್ಸ್ ಇಷ್ಟ ಆಗಿದೆ. ಈ ರೀತಿಯ ರಿಯಲ್ ಸಿನಿಮಾ ಮಾಡುವುದು ದೊಡ್ಡ ಸವಾಲು. ನಾನು ಯಂಗ್ ಆಗಿದ್ದರೆ ಈ ಸಿನಿಮಾದಲ್ಲಿ ನಟಿಸುತ್ತಿದ್ದೆ.'' ಎಂದು ಹೇಳಿ ಸಂತಸ ವ್ಯಕ್ತ ಪಡಿಸಿದರು.
'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿ ಬಾಲ್ಯದ ನೆನೆಪು ಮಾಡಿಕೊಂಡ ಶಿವಣ್ಣ ಎಲ್ಲರೂ ನೋಡಬೇಕಾದ ಸಿನಿಮಾ ಇದು ಎಂದರು.