Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಖವಿದ್ದಾಗ ಇರ್ತಾರೆ ನೂರಾರು ಜನ, ಕಷ್ಟದಲ್ಲಿದ್ದಾಗ ಬರ್ತಾರೆ ಶಿವಣ್ಣ
Recommended Video
ಶಿವರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ತೆರೆ ಹಿಂದೆಯೂ ಹೀರೋ. ಶಿವಣ್ಣ ಕಷ್ಟದಲ್ಲಿ ಇರುವ ಅನೇಕರಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂಗದ ಸಾಕಷ್ಟು ಸ್ನೇಹಿತರ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದಾರೆ.
ಇದೀಗ 'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿರುವ ಶಿವರಾಜ್ ಕುಮಾರ್ ತಮ್ಮ ಸ್ನೇಹಿತ ರಘುರಾಮ್ ಹಾಗೂ ತಂಡಕ್ಕೆ ಶಕ್ತಿ ತುಂಬಿದ್ದಾರೆ.
Missing Boy Review : ಸಿನಿಮಾ ಶುದ್ಧ.. ತಾಯಿ ಪ್ರೀತಿ ಪರಿಶುದ್ಧ..
'ಮಿಸ್ಸಿಂಗ್ ಬಾಯ್' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಕೆಲ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ತೆಗೆಯುತ್ತಿದ್ದರು. ಆದರೆ, ಇದೇ ವೇಳೆ ಶಿವಣ್ಣ ಸಿನಿಮಾವನ್ನು ನೋಡಿ ತಂಡಕ್ಕೆ ಹೊಸ ಚೈತನ್ಯ ನೀಡಿದ್ದಾರೆ.
ಸಿನಿಮಾ ನೋಡಿ ಮಾತನಾಡಿದ ಶಿವಣ್ಣ ''ಚಿತ್ರ ತುಂಬ ಚೆನ್ನಾಗಿದೆ. ಗುರುನಂದನ್ ಹಾಗೂ ಹೀರೋಯಿನ್ ಚೆನ್ನಾಗಿ ನಟಿಸಿದ್ದಾರೆ. ತಾಯಿಯ ಪಾತ್ರ ಮಾಡಿರುವ ಭಾಗೀರಥಿ ಭಾಯಿ ನಟನೆ ಅದ್ಭುತ. ಅವರು ನಮ್ಮ ಕಬೀರ ಸಿನಿಮಾದಲ್ಲಿ ನಟಿಸಿದ್ದರು.'' ಎಂದಿದ್ದಾರೆ.
ಜೊತೆಗೆ ''ತಾಯಿಗೆ ಸೆಂಟಿಮೆಂಟ್ ಯಾರೇ ಮಾಡಿದರೂ ಮನಸ್ಸಿಗೆ ಮುಟ್ಟುತ್ತದೆ. ಚಿತ್ರದ ಎಮೋಷನ್ಸ್ ಇಷ್ಟ ಆಗಿದೆ. ಈ ರೀತಿಯ ರಿಯಲ್ ಸಿನಿಮಾ ಮಾಡುವುದು ದೊಡ್ಡ ಸವಾಲು. ನಾನು ಯಂಗ್ ಆಗಿದ್ದರೆ ಈ ಸಿನಿಮಾದಲ್ಲಿ ನಟಿಸುತ್ತಿದ್ದೆ.'' ಎಂದು ಹೇಳಿ ಸಂತಸ ವ್ಯಕ್ತ ಪಡಿಸಿದರು.
'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿ ಬಾಲ್ಯದ ನೆನೆಪು ಮಾಡಿಕೊಂಡ ಶಿವಣ್ಣ ಎಲ್ಲರೂ ನೋಡಬೇಕಾದ ಸಿನಿಮಾ ಇದು ಎಂದರು.