Don't Miss!
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬೈರಾಗಿ' ಧ್ವನಿ ನೀಡಿದ ಸ್ಯಾಂಡಲ್ವುಡ್ ಅಧ್ಯಕ್ಷ: 'ಸಂಡೆ-ಮಂಡೆ' ಲವ್ವಿಗಿಲ್ಲ ಹಾಲಿಡೇ
ಒಂದ್ಕಡೆ ಸೆಂಚುರಿ ಸ್ಟಾರ್ ಶಿವಣ್ಣ. ಇನ್ನೊಂದ್ಕಡೆ ನಟ ರಾಕ್ಷಸ ಡಾಲಿ. ಮತ್ತೊಂದ್ಕಡೆ ದಿಯಾ ಖ್ಯಾತಿಯ ಪೃಥ್ವಿ ಅಂಬರ್. ಈ ಮೂವರು ಕಾಂಬಿನೇಷನ್ ಸಿನಿಮಾ 'ಬೈರಾಗಿ' ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್.
'ಬೈರಾಗಿ' ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ. ಶಿವಣ್ಣನೊಂದಿಗೆ 'ಡಾಲಿ' ಧನಂಜಯ್ ಹಾಗೂ ಪೃಥ್ವಿ ಅಂಬರ್ ನಟಿಸಿರುವುದು ಚಿತ್ರಕ್ಕೆ ಮತ್ತೊಂದು ಕಳೆ ಬಂದಂತಾಗಿದೆ. ಈಗಾಗಲೇ ಇದೇ ಸಿನಿಮಾ ಒಂದು ಹಾಡು ರಿಲೀಸ್ ಆಗಿದ್ದು, ಈಗ ಮತ್ತೊಂದು ಹಾಡು ಬಿಡುಗಡೆಯಾಗಿದೆ.
125 ಸಿನಿಮಾದ ಬಳಿಕ ಶಿವಣ್ಣ ಸೂಪರ್ ಹೀರೊ: ಸೆಂಚುರಿಸ್ಟಾರ್ ಲುಕ್ ಹೇಗಿರುತ್ತೆ?
ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಹಾಡಿದ್ದಾರೆ. ಇದು ಶಿವಣ್ಣನಿಗೆ ಶರಣ್ ಹಾಡುತ್ತಿರುವ ಎರಡನೇ ಹಾಡು. 'ವಜ್ರಕಾಯ' ಸಿನಿಮಾದ ಬಳಿಕ ಶಿವಣ್ಣನಿಗೆ ಶರಣ್ ದನಿ ನೀಡಿರುವುದು ಮತ್ತೊಂದು ವಿಶೇಷ. ಅಂದ್ಹಾಗೆ 'ಸಂಡೆ ಮಂಡೆ ಎವೆರಿಡೇ, ಲವ್ವಿಗಿಲ್ಲ ಹಾಲಿಡೇ...' ಎಂಬ ಸಾಹಿತ್ಯ ರಚಿಸಿರುವುದು ಪ್ರಮೋದ್ ಮರವಂತೆ.
ಶಿವಣ್ಣ, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅಭಿನಯದ ಈ ಹಾಡನ್ನು ಸಿಂಗಲ್ ಶಾಟ್'ನಲ್ಲಿ ಶೂಟ್ ಮಾಡಿರುವುದು ಮತ್ತೊಂದು ವಿಶೇಷ. ಈ ಕಾರಣಕ್ಕೆ ಈ ಹಾಡು ಕೌತುಕವನ್ನು ಹೆಚ್ಚಿಸಿದೆ. ಶಿವಣ್ಣನ ಅಭಿಮಾನಿಗಳೂ ಕೂಡ ಈ ಹಾಡು ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.
'ರಿದಮ್ ಆಫ್ ಶಿವಪ್ಪ' ಕಾನ್ಸೆಪ್ಟ್'ನಡಿ ಮೂಡಿಬಂದಿರುವ ಈ ಹಾಡಿಗೆ ಇಡೀ 'ಬೈರಾಗಿ' ತಂಡವೇ ಹೆಜ್ಜೆ ಹಾಕಿದೆ. ಈ ಸ್ಪೆಷಲ್ ಸಾಂಗ್ ಅನ್ನು ದೇವನಹಳ್ಳಿ ಬಳಿಯಿರುವ ನೂತನ ಮಾಲ್ನಲ್ಲಿ ಶೂಟಿಂಗ್ ಮಾಡಲಾಗಿದೆ. ನೃತ್ಯ ನಿರ್ದೇಶಕ ಮುರಳಿ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡಿಗೆ ತಮಿಳಿನ ಗಾಯಕ ಆ್ಯಂಥೋನಿ ದಾಸ್ ದನಿಗೂಡಿಸಿದ್ದರು.
Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?
'ಬೈರಾಗಿ' ಸಿನಿಮಾವನ್ನು ವಿಜಯ್ ಮಿಲ್ಟನ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟ ಶಶಿಕುಮಾರ್, ಅನು ಪ್ರಭಾಕರ್, ಅಂಜಲಿ, ಯಶ ಶಿವಕುಮಾರ್, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾದಂಡೇ ಇದೆ. ಕೃಷ್ಣ ಸಾರ್ಥಕ್ 'ಬೈರಾಗಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.