Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಂತಚೋರ ವೀರಪ್ಪನ್ ನ ಕೊಂದವರು ಯಾರು?
ವೀರಪ್ಪನ್....ದುಡ್ಡಿನ ದಾಹಕ್ಕಾಗಿ ಗಂಧದ ಮರಗಳನ್ನ ಕಳ್ಳಸಾಗಣೆ ಮಾಡ್ತಿದ್ದ ಖದೀಮ. ಲೆಕ್ಕವಿಲ್ಲದಷ್ಟು ಆನೆಗಳನ್ನು ಕೊಂದು ದಂತ ಸಾಗಾಣಿಕೆ ಮಾಡ್ತಿದ್ದ ದಂತಚೋರ. ಅಮಾಯಕ ಜನರನ್ನ ಕೊಂದ ನರಹಂತಕ. ಹುಟ್ಟಿಬೆಳೆದದ್ದು ತಮಿಳುನಾಡಲ್ಲೇ ಆದರೂ, ಕರ್ನಾಟಕ ಮತ್ತು ಕೇರಳಾ ರಾಜ್ಯಗಳಿಗೂ ಮೋಸ್ಟ್ ವಾಂಟೆಡ್ ಆಗಿದ್ದ ಕ್ರಿಮಿನಲ್ ಈತ.
ಇಂತಿಪ್ಪ ವೀರಪ್ಪನ್ ನ ಕೊಂದಿದ್ದು ಪೊಲೀಸ್ ಅಧಿಕಾರಿ ಕೆ.ವಿಜಯ್ ಕುಮಾರ್ ನೇತೃತ್ವದ ಎಸ್.ಟಿ.ಎಫ್ ತಂಡ ಅಂತ ಎಲ್ಲರಿಗೂ ಗೊತ್ತು. ಡಾ.ರಾಜ್ ಕುಮಾರ್ ಅಪಹರಣ ಪ್ರಸಂಗದಿಂದ ಕರ್ನಾಟಕದಲ್ಲಿ ಕುಖ್ಯಾತಿ ಗಳಿಸಿದ ವೀರಪ್ಪನ್ ನ ಟ್ರ್ಯಾಪ್ ಮಾಡಿ ಕೊಲ್ಲುವ ಸುತ್ತ ರಾಮ್ ಗೋಪಾಲ್ ವರ್ಮಾ ಈಗ ಸಿನಿಮಾ ಮಾಡ್ತಿದ್ದಾರೆ. [ಶಿವಣ್ಣ-ಆರ್.ಜಿ.ವಿ 'ಕಿಲ್ಲಿಂಗ್ ವೀರಪ್ಪನ್' ಫಸ್ಟ್ ಲುಕ್ ಔಟ್]
'ಕಿಲ್ಲಿಂಗ್ ವೀರಪ್ಪನ್' ಅನ್ನುವ ಹೆಸರಲ್ಲಿ ವೀರಪ್ಪನ್ ಸಾವಿನ ಸುತ್ತ ಇರುವ ಅನೇಕ ರಹಸ್ಯಗಳನ್ನ ಬೆಳ್ಳಿತೆರೆ ಮೇಲೆ ಬಹಿರಂಗ ಮಾಡಲಿದ್ದಾರೆ ವರ್ಮಾ ಸಾಹೇಬ್ರು. ವಿಶೇಷ ಅಂದ್ರೆ, ಶಿವರಾಜ್ ಕುಮಾರ್ ಇಲ್ಲಿ ಕಾಡುಗಳ್ಳನನ್ನ ಕೊಲ್ಲುವ ಪ್ರಮುಖ ಪಾತ್ರಧಾರಿ ಆಗಿ ಕಾಣಿಸಿಕೊಳ್ಳಲಿದ್ದಾರೆ. [ಶಿವಣ್ಣನ ಕೈಲಿ ವೀರಪ್ಪನ್ ಹತ್ಯೆ ಮಾಡಿಸ್ತಾರೆ ವರ್ಮಾ.!]
ಅಂದ್ಮೇಲೆ, ಎಸ್.ಟಿ.ಎಫ್ ಅಧಿಕಾರಿ ಕೆ.ವಿಜಯ್ ಕುಮಾರ್ ಆಗಿ ಶಿವಣ್ಣ ಕಾಣಿಸಿಕೊಳ್ತಾರೆ ಅಂತಲೇ ಇಲ್ಲಿಯವರೆಗೂ ಊಹಿಸಲಾಗಿತ್ತು. ಆದ್ರೆ, ಇದಕ್ಕೆ ರಾಮ್ ಗೋಪಾಲ್ ವರ್ಮಾ ಈಗ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಕೆ.ವಿಜಯ್ ಕುಮಾರ್ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿಲ್ಲ.!
ಹಾಗಾದ್ರೆ, ಶಿವಣ್ಣನ ಪಾತ್ರವೇನು? ಅಂದ್ರೆ 'ಜೆಂಟಲ್ ಮ್ಯಾನ್' ಅನ್ನುವ ಉತ್ತರ ವರ್ಮಾ ಬಾಯಿಂದ ಬರುತ್ತದೆ. ಸೋ...ವೀರಪ್ಪನ್ ನ ಕೊಂದಿದ್ದು ಕೆ.ವಿಜಯ್ ಕುಮಾರ್ ಅಲ್ಲ ಅಂತರ್ಥ ಅಲ್ವಾ? ಅಂತ ಈಗೆಲ್ಲರೂ ತಲೆಯಲ್ಲಿ ಹುಳಬಿಟ್ಟುಕೊಂಡಿದ್ದಾರೆ. ['ಕಿಲ್ಲಿಂಗ್ ವೀರಪ್ಪನ್' ಶಿವಣ್ಣನ ಮಹತ್ವಾಕಾಂಕ್ಷಿ ಚಿತ್ರ]
ರಿಯಲಿಸ್ಟಿಕ್ ಸಿನಿಮಾಗಳಿಂದಲೇ ಹೆಸರುವಾಸಿ ಆಗಿರುವ ವರ್ಮಾ, ಯಾವುದೇ ಕಾಂಟ್ರವರ್ಸಿಗಳಿಗೆ ತಲೆಕೆಡಿಸಿಕೊಂಡವರಲ್ಲ. ಇದ್ದಿದ್ದನ್ನ ಇದ್ದ ಹಾಗೆ, ಫಿಲ್ಟರ್ ಇಲ್ಲದೇ ತೆರೆ ಮೇಲೆ ತರುವ ವರ್ಮಾ, 'ಕಿಲ್ಲಿಂಗ್ ವೀರಪನ್' ಚಿತ್ರಕ್ಕಾಗಿ ಸಾಕಷ್ಟು ರಿಸರ್ಚ್ ಮಾಡಿದ್ದಾರೆ. [ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಶಿವಣ್ಣ]
ಪೊಲೀಸ್ ಅಧಿಕಾರಿ ಕೆ.ವಿಜಯ್ ಕುಮಾರ್ ಬಿಟ್ಟು ಬೇರೆ ಪಾತ್ರದಲ್ಲಿ ಶಿವಣ್ಣ ಮಿಂಚ್ತಿದ್ದಾರೆ ಅಂದ್ರೆ, ವೀರಪ್ಪನ್ ನ ಕೊಂದವರು ಯಾರು? ಅನ್ನುವ ಪ್ರಶ್ನೆಗೆ ಆರ್.ಜಿ.ವಿ ತೆರೆಮೇಲೆ ಹೊಸ ಉತ್ತರ ಕೊಡಬಹುದೇನೋ..!?