Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದ ಶಿವರಾಜ್ ಕುಮಾರ್, ಅನ್ಲಾಕ್ ಪ್ರಾರಂಭವಾದ ನಂತರ ಬದಲಾವಣೆಗಾಗಿ ನಿಸರ್ಗದತ್ತ ಮುಖ ಮಾಡಿದ್ದಾರೆ.
Recommended Video
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಜಂಟಿಯಾಗಿ ತೋಟಗಳನ್ನು ಸುತ್ತಾಡಿ ನಿಸರ್ಗದ ಮಡಿಲಲ್ಲಿ ಕೆಲ ಕಾಲ ಕಳೆದಿದ್ದಾರೆ.
'ಇಂದ್ರಸೇನ'ನಾಗಿ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ನಿನ್ನೆ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಸ್ವಗ್ರಾಮಕ್ಕೆ ತೆರಳಿ ಅವರ ತೋಟದಲ್ಲಿ ಸುತ್ತಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಕೇಶವಾರ ಗ್ರಾಮಕ್ಕೆ ಭೇಟಿ
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕೇಶವಾರ ಗ್ರಾಮಕ್ಕೆ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಭೇಟಿ ನೀಡಿದ್ದರು. ಕೇಶವಾರ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಹುಟ್ಟೂರು, ಅವರ ಕುಟುಂಬ ನೆಲೆಸಿರುವುದು ಇಲ್ಲಿಯೇ.
ರೇಷ್ಮೆ, ದ್ರಾಕ್ಷಿ ತೋಟ ಸುತ್ತಾಡಿದ್ದಾರೆ
ಆರ್.ಚಂದ್ರು ಅವರ ದ್ರಾಕ್ಷಿ, ರೇಷ್ಮೆ, ತರಕಾರಿ ತೋಟಗಳನ್ನು ಸುತ್ತಾಡಿದ ಶಿವರಾಜ್ ಕುಮಾರ್, ಅನಿತಾ ಬಹುಸಮಯ ಅಲ್ಲಿಯೇ ಕಳೆದು, ಚಂದ್ರು ಅವರ ಆತಿಥ್ಯ ಸ್ವೀಕರಿಸಿ ತೆರಳಿದ್ದಾರೆ.
ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು
ಅಭಿಮಾನಿಗಳು ಜಮಾಯಿಸಿದ್ದರು
ಶಿವರಾಜ್ ಕುಮಾರ್ ಭೇಟಿ ವಿಷಯ ತಿಳಿದು ಹಲವಾರು ಅಭಿಮಾನಿಗಳು ಜಮಾಯಿಸಿದ್ದರು. ಶಿವರಾಜ್ ಕುಮಾರ್ ಎಂದಿನಂತೆ ಸೌಜನ್ಯದಿಂದ ಅಭಿಮಾನಿಗಳೊಂದಿಗೆ ಫೋಟೊಕ್ಕೆ ಫೋಸು ನೀಡಿದ್ದಾರೆ.
ಕೃಷಿಕರಾಗಿರುವ ಆರ್.ಚಂದ್ರು
ಆರ್.ಚಂದ್ರು ಅವರು ಮೂಲತಃ ಕೃಷಿಕರು, ಈಗಲೂ ಅವರು ಕೃಷಿಯನ್ನು ಮಾಡುತ್ತಾರೆ. ತಾಜ್ ಮಹಲ್ ಸಿನಿಮಾ ಮೂಲಕ ನಿರ್ದೇಶಕರಾದ ಅವರು ಈಗ ಉಪೇಂದ್ರ ಅವರೊಂದಿಗೆ ಕಬ್ಜ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.