Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಕ್ಕಬಳ್ಳಾಪುರದ ಕೇಶವಾರ ಗ್ರಾಮಕ್ಕೆ ಭೇಟಿ ಕೊಟ್ಟ ಶಿವರಾಜ್ ಕುಮಾರ್ ದಂಪತಿ
ಲಾಕ್ಡೌನ್ನಿಂದಾಗಿ ಮನೆಯಲ್ಲೇ ಉಳಿದಿದ್ದ ಶಿವರಾಜ್ ಕುಮಾರ್, ಅನ್ಲಾಕ್ ಪ್ರಾರಂಭವಾದ ನಂತರ ಬದಲಾವಣೆಗಾಗಿ ನಿಸರ್ಗದತ್ತ ಮುಖ ಮಾಡಿದ್ದಾರೆ.
Recommended Video
ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಜಂಟಿಯಾಗಿ ತೋಟಗಳನ್ನು ಸುತ್ತಾಡಿ ನಿಸರ್ಗದ ಮಡಿಲಲ್ಲಿ ಕೆಲ ಕಾಲ ಕಳೆದಿದ್ದಾರೆ.
'ಇಂದ್ರಸೇನ'ನಾಗಿ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ನಿನ್ನೆ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಸ್ವಗ್ರಾಮಕ್ಕೆ ತೆರಳಿ ಅವರ ತೋಟದಲ್ಲಿ ಸುತ್ತಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಕೇಶವಾರ ಗ್ರಾಮಕ್ಕೆ ಭೇಟಿ
ಚಿಕ್ಕಬಳ್ಳಾಪುರ ಜಿಲ್ಲೆ, ಶಿಡ್ಲಘಟ್ಟ ತಾಲ್ಲೂಕಿನ ಕೇಶವಾರ ಗ್ರಾಮಕ್ಕೆ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಭೇಟಿ ನೀಡಿದ್ದರು. ಕೇಶವಾರ ಸಿನಿಮಾ ನಿರ್ದೇಶಕ ಆರ್.ಚಂದ್ರು ಅವರ ಹುಟ್ಟೂರು, ಅವರ ಕುಟುಂಬ ನೆಲೆಸಿರುವುದು ಇಲ್ಲಿಯೇ.
ರೇಷ್ಮೆ, ದ್ರಾಕ್ಷಿ ತೋಟ ಸುತ್ತಾಡಿದ್ದಾರೆ
ಆರ್.ಚಂದ್ರು ಅವರ ದ್ರಾಕ್ಷಿ, ರೇಷ್ಮೆ, ತರಕಾರಿ ತೋಟಗಳನ್ನು ಸುತ್ತಾಡಿದ ಶಿವರಾಜ್ ಕುಮಾರ್, ಅನಿತಾ ಬಹುಸಮಯ ಅಲ್ಲಿಯೇ ಕಳೆದು, ಚಂದ್ರು ಅವರ ಆತಿಥ್ಯ ಸ್ವೀಕರಿಸಿ ತೆರಳಿದ್ದಾರೆ.
ರೌಡಿಗಳೇ ತುಂಬಿದ್ದ 'ಓಂ' ಸಿನಿಮಾ ಸೆಟ್ನಲ್ಲಿ ಗಲಾಟೆ ಆಗದಂತೆ ತಡೆದಿದ್ದು ಆ ಒಂದು ಹೆಸರು
ಅಭಿಮಾನಿಗಳು ಜಮಾಯಿಸಿದ್ದರು
ಶಿವರಾಜ್ ಕುಮಾರ್ ಭೇಟಿ ವಿಷಯ ತಿಳಿದು ಹಲವಾರು ಅಭಿಮಾನಿಗಳು ಜಮಾಯಿಸಿದ್ದರು. ಶಿವರಾಜ್ ಕುಮಾರ್ ಎಂದಿನಂತೆ ಸೌಜನ್ಯದಿಂದ ಅಭಿಮಾನಿಗಳೊಂದಿಗೆ ಫೋಟೊಕ್ಕೆ ಫೋಸು ನೀಡಿದ್ದಾರೆ.
ಕೃಷಿಕರಾಗಿರುವ ಆರ್.ಚಂದ್ರು
ಆರ್.ಚಂದ್ರು ಅವರು ಮೂಲತಃ ಕೃಷಿಕರು, ಈಗಲೂ ಅವರು ಕೃಷಿಯನ್ನು ಮಾಡುತ್ತಾರೆ. ತಾಜ್ ಮಹಲ್ ಸಿನಿಮಾ ಮೂಲಕ ನಿರ್ದೇಶಕರಾದ ಅವರು ಈಗ ಉಪೇಂದ್ರ ಅವರೊಂದಿಗೆ ಕಬ್ಜ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.