Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಶಿವರಾಜ್ ಕುಮಾರ್
ಕೊರೊನಾ ವೈರಸ್ ಪೀಡಿತರು ಅದೆಷ್ಟು ನೋವನುಭವಿಸುತ್ತಿದ್ದಾರೆಯೋ ಸಮನಾದ ನೋವನ್ನು, ಕೊರೊನಾ ದಿಂದ ಉಂಟಾಗಿರುವ ಸ್ಥಬ್ಧ ಸ್ಥಿತಿಯಿಂದ ಉಳಿದವರು ಅನುಭವಿಸುತ್ತಿದ್ದಾರೆ.
ಎಷ್ಟೋ ಜನಕ್ಕೆ ಊರಿಗೆ ಹೋಗಲು ಆಗುತ್ತಿಲ್ಲ, ಅಂದಿನ ಅನ್ನ ದುಡಿದು ತಿನ್ನುವ ಕಾರ್ಮಿಕ ವರ್ಗಕ್ಕೆ ದಿನದ ಊಟಕ್ಕೂ ತತ್ವಾರವಾಗಿದೆ. ದಿನಗೂಲಿ ನೌಕರರ ಬಾಳು ಅಂಧಕಾರದಲ್ಲಿ ಮುಳುಗಿದೆ.
ಇಂಥಹರ ನೆರವಿಗೆ ರಾಜ್ಯ ಸರ್ಕಾರ, ಸಂಘ-ಸಂಸ್ಥೆಗಳು, ಸಿನಿಮಾ ನಟ-ನಟಿಯರು ನಿಂತಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್ ಅವರು ಸಹ ದಿನಗೂಲಿ ನೌಕರರ ಸಹಾಯಕ್ಕೆಂದು ಮುಂದೆ ಬಂದಿದ್ದಾರೆ.
ಸಮಸ್ಯೆಗೆ ಸಿಲುಕಿದವರಿಗೆ ಶಿವಣ್ಣ ನೆರವು
ಹೌದು ಶಿವರಾಜ್ ಕುಮಾರ್ ಅವರು ದಿನಗೂಲಿ ನೌಕರರಿಗೆ, ಬಡವರಿಗೆ ಕೊರೊನಾ ಲಾಕ್ ಡೌನ್ ಸಮಯ ಸಮಸ್ಯೆಗೆ ಸಿಲುಕಿದವರಿಗೆ ಸಹಾಯ ಮಾಡಲೆಂದು ಮುಂದೆ ಬಂದಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರ ಹಂಚಿಕೊಂಡಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಜೊತೆ ಕೈಜೋಡಿಸಿದ ಶಿವಣ್ಣ
ಶಿವರಾಜ್ ಕುಮಾರ್ ಅವರು ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಜೊತೆ ಸೇರಿ ದಿನಗೂಲಿ ನೌಕರರು, ಸಂಕಷ್ಟಕ್ಕೆ ಸಿಲುಕಿರುವವರು, ವಲಸಿಗರ ಸಹಾಯಕ್ಕೆ ನಿಂತಿದ್ದಾರೆ.
ಕಷ್ಟದಲ್ಲಿರುವವರಿಗೆ ದಿನಸಿ-ತರಕಾರಿ ವಿತರಣೆ
ಕೊರೊನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ದಿನಸಿ, ತರಕಾರಿಗಳನ್ನು ತಲುಪಿಸುವ ಕಾರ್ಯವನ್ನು ಆರ್ಟ್ ಆಫ್ ಲಿವಿಂಗ್ ಮಾಡುತ್ತಿದ್ದು, ಈಗಾಗಲೇ ಮುಂಬೈ ಮತ್ತಿತರೆ ಕಡೆಗಳಲ್ಲಿ ಈ ಕೆಲಸ ಶುರು ಮಾಡಿದೆ. ರಾಜ್ಯದಲ್ಲಿ ಆರ್ಟ್ ಆಫ್ ಲಿವಿಂಗ್ ಜೊತೆ ಶಿವಣ್ಣ ಕೈಜೋಡಿಸಿದ್ದಾರೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆ
ನೆರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಿನಿಮಾ ನಟರುಗಳು ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಹಾಯ ಘೋಷಿಸಿದ್ದು ಕಡಿಮೆಯೇ ಆಗಿದೆ. ನಿರ್ದೇಶಕ ಪವನ್ ಕುಮಾರ್ ನೆರವಿಗೆ ಮನವಿ ಮಾಡಿ ಸುಮಾರು 6 ಲಕ್ಷ ಹಣ ಸಂಗ್ರಹಿಸಿ ಸಿನಿಮಾ ದಿನಗೂಲಿ ನೌಕರರಿಗೆ ಹಂಚುತಿದ್ದಾರೆ.