Don't Miss!
- News ಕೊಳ್ಳೇಗಾಲ ಶಾಸಕರ ಕಾರು ಅಪಘಾತ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಓಂ' ಸಿನಿಮಾಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲ!
ಕನ್ನಡ ಸಿನಿಮಾ ಉದ್ಯಮದಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾ 'ಓಂ'. ಕನ್ನಡ ಸಿನಿಮಾದಲ್ಲಿ ರೌಡಿಸಂ ಕತೆಗಳು ಹೆಚ್ಚಾಗಲು ಹಾಗೂ ಕತೆ ಹೇಳುವ ತಂತ್ರ ಬದಲಾಗಲು ಮುಖ್ಯ ಕಾರಣ ಈ ಸಿನಿಮಾ.
Recommended Video
ಓಂ ಸಿನಿಮಾ ಹಲವು ಹೊಸತನಗಳಿಗೆ ನಾಂದಿಯಾಯಿತು. ಶಿವರಾಜ್ ಕುಮಾರ್ ಅವರಿಗಂತೂ ಹೊಚ್ಚ ಹೊಸ ಲುಕ್ ಅನ್ನೇ ನೀಡಿಬಿಟ್ಟಿತು ಈ ಸಿನಿಮಾ. ಓಂ ನಿಂದ ಪ್ರಾರಂಭವಾದ ರೌಡಿ ಲುಕ್ ಇನ್ನಾದರೂ ಶಿವಣ್ಣನನ್ನು ಬಿಟ್ಟು ಹೋಗಿಲ್ಲ.
ಶಿವರಾಜ್ ಕುಮಾರ್ ಸಿನಿಮಾ ನಿರ್ದೇಶಿಸಲು ಬಂದ ತೆಲುಗು ಪ್ರತಿಭೆ
ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲೇ ದೊಡ್ಡ ಹಿಟ್ ಆದ 'ಓಂ' ಸಿನಿಮಾದ ನಾಯಕ ಸತ್ಯ ಪಾತ್ರಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲವಂತೆ.
ಕುಮಾರ್ ಗೋವಿಂದ್ ಮೊದಲ ಆಯ್ಕೆ
ಹೌದು, ಓಂ ಸಿನಿಮಾಕ್ಕೆ ಶಿವರಾಜ್ ಕುಮಾರ್ ಮೊದಲ ಆಯ್ಕೆ ಆಗಿರಲಿಲ್ಲ. ಓಂ ನಿರ್ದೇಶಕ ಉಪೇಂದ್ರ ಅವರು ಕುಮಾರ್ ಗೋವಿಂದ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾ ಶುರುವಾಗುವ ಕೆಲವೇ ದಿನಗಳ ಮುಂಚೆ ಆಯ್ಕೆ ಬದಲಾಯಿತು.
ಉಪೇಂದ್ರ-ಕುಮಾರ್ ಗೋವಿಂದ್ ನಡುವೆ ಸಣ್ಣ ಮನಸ್ತಾಪ
ಕುಮಾರ್ ಗೋವಿಂದ್ ನಾಯಕರಾಗಿದ್ದ ಶ್ ಸಿನಿಮಾ ಆಗಷ್ಟೆ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಉಪೇಂದ್ರ ಅವರು ಕುಮಾರ್ ಗೋವಿಂದ್ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಿದ್ದರು. ಆದರೆ ಸಿನಿಮಾ ಸೆಟ್ಟೇರಲು ಕೆಲವೇ ದಿನ ಇದ್ದಂತೆ, ಉಪೇಂದ್ರ ಹಾಗೂ ಕುಮಾರ್ ಗೋವಿಂದ್ ನಡುವೆ ಸಣ್ಣ ತಕರಾರು ಏರ್ಪಟ್ಟಿತು.
32 ವರ್ಷದ ಹಿಂದೆ ಶಿವಣ್ಣ ಮಾಡಿದ್ದ ದೊಡ್ಡ ಸಹಾಯವನ್ನು ಬಿಚ್ಚಿಟ್ಟ ಮಾಜಿ ಖೈದಿ
ಉಪೇಂದ್ರ ಅವರನ್ನು ರಾಜ್ಕುಮಾರ್ ಬಳಿ ಕರೆತಂದರು
ಉಪೇಂದ್ರ ಪ್ರತಿಭೆ ಗಮನಿಸಿದ್ದ ಹೊನ್ನವಳ್ಳಿ ಕೃಷ್ಣ ಮತ್ತು ಗೌರಿಶಂಕರ್, ಉಪೇಂದ್ರ ಅವರನ್ನು ರಾಜ್ಕುಮಾರ್ ಅವರ ಬಳಿ ಕರೆದೊಯ್ದರು. ಅದರಂತೆ ರಾಜ್ಕುಮಾರ್ ಹಾಗೂ ವರದಣ್ಣ ಕತೆ ಕೇಳಿ, ಓಕೆ ಎಂದರು. ಹಾಗೆ ಕುಮಾರ್ ಬಂಗಾರಪ್ಪ ಮಾಡಬೇಕಾಗಿದ್ದ ಸತ್ಯ ಪಾತ್ರ ಶಿವರಾಜ್ ಕುಮಾರ್ ಪಾಲಾಯಿತು.
ಸತ್ಯ ಪಾತ್ರಕ್ಕೆ ಜೀವ ತುಂಬಿದ ಶಿವರಾಜ್ ಕುಮಾರ್
ಆಮೇಲೆ ನಡೆದಿದ್ದೆಲ್ಲಾ ಇತಿಹಾಸ. ಶಿವರಾಜ್ ಕುಮಾರ್ ಅವರು ಸತ್ಯ ಪಾತ್ರಕ್ಕೆ ಜೀವ ತುಂಬಿದರು. ಓಂ ಸಿನಿಮಾದ ಪಾತ್ರಕ್ಕೆ ಹಲವು ಪ್ರಶಸ್ತಿಗಳು ಶಿವಣ್ಣ ಅವರನ್ನು ಹುಡುಕುಕಿಕೊಂಡು ಬಂದವು. ಫಿಲ್ಮ್ಫೇರ್ ಅವಾರ್ಡ್, ಕರ್ನಾಟಕ ರಾಜ್ಯ ಪ್ರಶಸ್ತಿ, ಹೀರೋ ಹೊಂಡಾ ಎಕ್ಸ್ಪ್ರೆಸ್ ಅವಾರ್ಡ್ ಅವರ ಪಾಲಾದವು.