Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಹೊಸ ಚಿತ್ರ 'ಬಂಗಾರದ ವಂಶ'
ವರನಟ ಡಾ.ರಾಜ್ ಕುಮಾರ್ ಅವರ 'ಬಂಗಾರದ ಮನುಷ್ಯ' (1972) ಚಿತ್ರ ಹಲವು ಸಾಮಾಜಿಕ ಬದಲಾವಣೆಗಳಿಗೆ ಕಾರಣವಾಗಿತ್ತು. ಆ ಚಿತ್ರವನ್ನು ನೋಡಿದ ಅದೆಷ್ಟೋ ಅಭಿಮಾನಿಗಳು ನೇಗಿಲು ಹಿಡಿದರು. ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಸಂಪ್ರದಾಯದ ಚಿತ್ರಗಳಿಗೆ ನಾಂದಿ ಹಾಡಿದ ಖ್ಯಾತಿ ಆ ಚಿತ್ರಕ್ಕೆ ಸಲ್ಲುತ್ತದೆ.
ಇದೀಗ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಂದು ಸಾರಿ ಕೇಳಿದ ಕೂಡಲೇ ಬಂಗಾರದ ಮನುಷ್ಯ ನೆನಪಾಗೋ ಸಿನಿಮಾ ಟೈಟಲ್ ಕೈಗೆತ್ತಿಕೊಂಡಿದ್ದಾರೆ. ಇದು ಶಿವಣ್ಣ ಹಾಗೂ ರಾಧಿಕಾ ಕುಮಾರಸ್ವಾಮಿ ಅಣ್ಣ ತಂಗಿಯಾಗಿ ಜೋಡಿಯಾಗ್ತಿರೋ ಸಿನಿಮಾ. ಚಿತ್ರದ ಟೈಟಲ್ 'ಬಂಗಾರದ ವಂಶ'. [ಶಿವಣ್ಣನಿಗೆ ತಂಗಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಗಿಫ್ಟ್]
ಅಣ್ಣ ತಂಗಿ ಸೆಂಟಿಮೆಂಟ್ ಸಿನಿಮಾಗಳ ಸರದಾರ ಸಾಯಿಪ್ರಕಾಶ್ ಒಂದು ಅದ್ಭುತ ಕಥೆ ಹೆಣೆದಿದ್ದಾರೆ. ಹಿಂದಿನ ಕಥೆಗಳಿಗಿಂತ ಇದು ಸ್ವಲ್ಪ ಮಾಡರ್ನ್ ಕಥೆಯಾಗಿದ್ದು ಇಲ್ಲಿ ಶಿವಣ್ಣನನ್ನೂ ಒಬ್ಬ ಶ್ರೀಮಂತ ವ್ಯಕ್ತಿಯನ್ನಾಗಿ ತೋರಿಸ್ತಾರಂತೆ ಅನ್ನೋ ಗುಸು ಗುಸು ಗಾಂಧಿನಗರದಲ್ಲಿದೆ.
ಇನ್ನು ಶಿವಣ್ಣ-ರಾಧಿಕಾ ಜೋಡಿಯ ಅಣ್ಣ ತಂಗಿ ಸಿನಿಮಾ ಆಗಿರೋದ್ರಿಂದ ಅದನ್ನ ನೋಡೋದಕ್ಕೇನೇ ದೊಡ್ಡ ಫ್ಯಾಮಿಲಿ ಪ್ರೇಕ್ಷಕ ವರ್ಗವಿದೆ. ಆದರೆ ಸದ್ಯದ ಸುದ್ದಿ ಅಂದ್ರೆ ಫೆಬ್ರವರಿಯಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಚುನಾವಣೆಯ ಕಾರಣದಿಂದ ಮೂರು ತಿಂಗಳು ಮುಂದೆ ಹೋಗಿದೆ. (ಒನ್ಇಂಡಿಯಾ ಕನ್ನಡ)