Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಪ್ಪು ಕನ್ನಡಕ ಇಲ್ಲದೆ, ದಿಗಂತ್ ಮನೆಯಿಂದೀಗ ಆಚೆ ಬರಲ್ಲ.! ಯಾಕೆ.?
ಮೊನ್ನೆಯಷ್ಟೇ ದ್ವಾರಕೀಶ್ ನಿರ್ಮಾಣದ ಪ್ರಜ್ವಲ್ ದೇವರಾಜ್, ದಿಗಂತ್, ಲವ್ಲಿ ಸ್ಟಾರ್ ಪ್ರೇಮ್, ವಿಜಯ್ ರಾಘವೇಂದ್ರ ಅಭಿನಯದ 'ಚೌಕ' ಚಿತ್ರದ ಪತ್ರಿಕಾಗೋಷ್ಠಿ ಇತ್ತು.
ಕಾರ್ಯಕ್ರಮಕ್ಕೆ ಕ್ಯಾಶುವಲ್ ಉಡುಗೆ ತೊಟ್ಟು, ತಲೆಗೆ ಟೋಪಿ ಹಾಕೊಂಡಿದ್ದ ದಿಗಂತ್ ಇಡೀ ಪ್ರೆಸ್ ಮೀಟ್ ಮುಗಿಯುವವರೆಗೂ ಕಣ್ಣಿಂದ ಕಪ್ಪು ಕ್ಲೂಲಿಂಗ್ ಗ್ಲಾಸ್ ತೆಗೆಯಲೇ ಇಲ್ಲ.
ಬರೀ ಪ್ರೆಸ್ ಮೀಟ್ ನಲ್ಲಿ ಮಾತ್ರ ಅಲ್ಲ, ಎಲ್ಲೇ ಹೋದರೂ ದಿಗಂತ್ ಗೆ ಕಪ್ಪು ಕನ್ನಡಕ ಇರಲೇಬೇಕಂತೆ. ಅದಕ್ಕೆ ಕಾರಣ ಏನು ಅಂತ ಹುಡುಕುತ್ತಾ ಹೊರಟಾಗ ಸಿಕ್ಕ ಉತ್ತರ - ''ಕಣ್ಣಿಗೆ ಬಿದ್ದಿರುವ ಬಲವಾದ ಪೆಟ್ಟು''.!
ಹೌದು, 'ಟಿಕೆಟ್ ಟು ಬಾಲಿವುಡ್' ಎಂಬ ಹಿಂದಿ ಚಿತ್ರದಲ್ಲಿ ದಿಗಂತ್ ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸ್ಟಂಟ್ ಮಾಡುವಾಗ ದಿಗಂತ್ ಕಣ್ಣಿಗೆ ಮೆಟಲ್ ಪೀಸ್ ಬಿದ್ದಿದೆ. [ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ]
ಕಣ್ಣಿನ ಲೆನ್ಸ್ ಹಾಗೂ ರೆಟಿನಾಗೆ ಬಲವಾದ ಪೆಟ್ಟಾಗಿರುವ ಕಾರಣ ಲಂಡನ್ ಹಾಗೂ ಸ್ಕಾಟ್ ಲ್ಯಾಂಡ್ ನಲ್ಲಿ ಈಗಾಗಲೇ ಮೂರು ಬಾರಿ ಕಣ್ಣಿನ ಸರ್ಜರಿ ಮಾಡಿಸಿಕೊಂಡಿದ್ದಾರೆ ನಟ ದಿಗಂತ್.
ಹೀಗಾಗಿ, ನಟ ದಿಗಂತ್ ಗೆ ಪ್ರಖರವಾದ ಬೆಳಕನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಶೂಟಿಂಗ್ ಹಾಗೂ ಪ್ರೆಸ್ ಮೀಟ್ ನಲ್ಲಿ ಬಳಸುವ ಲೈಟ್ಸ್ ಗಳಿಂದಲೂ ಅವರಿಗೆ ಕಿರಿಕಿರಿ ಆಗುತ್ತಿದೆ. ಬಿಸಿಲಿಗೆ ಹೋದರಂತೂ, ದಿಗಂತ್ ಗೆ ಕಣ್ಣು ಬಿಡುವುದು ಕಷ್ಟವಾಗಿದೆ. [ದಿಗಂತ್ ಬಾಲಿವುಡ್ ಕನಸು ಕೊನೆಗೂ ನನಸು]
ಇದೇ ಕಾರಣಕ್ಕೆ, ಮಾಧ್ಯಮಗಳ ಮುಂದೆ ಕನ್ನಡಕ ಹಾಕಿಕೊಂಡೇ ದಿಗಂತ್ ಮಾತನಾಡಿದರು. ಅಷ್ಟು ನೋವು ಇದ್ದರೂ, ನಗು ಮೊಗದಿಂದಲೇ 'ಚೌಕ' ಪತ್ರಿಕಾಗೋಷ್ಠಿಯಲ್ಲಿ ಓಡಾಡುತ್ತಿದ್ದರು. ['ಶಾರ್ಪ್ ಶೂಟರ್' ದಿಗಂತ್ ಗೆ ಶುಕ್ರದೆಸೆ ಶುರು]
ದಿಗಂತ್ ಬಹುಬೇಗ ಗುಣಮುಖವಾಗಲಿ ಎಂಬುದೇ ಅವರ ಅಭಿಮಾನಿಗಳ ಹಾಗೂ ನಮ್ಮ ಹಾರೈಕೆ.